ರಾಜ್ಯ ಮಟ್ಟದ ವಿಜಯ ಹೋರಾಟಗಾರ ಪ್ರಶಸ್ತಿ ಪ್ರಧಾನ – ಬಸವರಾಜ್.ಎಂ ಕಕ್ಕುಪ್ಪೆ.
ಹೊಸಪೇಟೆ ಜೂ.24

ವಿಜಯನಗರ ಸಾಮ್ರಾಜ್ಯ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ ಆಯೋಜಿಸಿರುವ ವಿಜಯನಗರ ಸಾಮ್ರಾಜ್ಯ ಪ್ರಾದೇಶಿಕ ಕನ್ನಡ ದಿನ ಪತ್ರಿಕೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಿತು. ರಾಜ್ಯ ಪ್ರಶಸ್ತಿ “ವಿಜಯ ಹೋರಾಟಗಾರ ಪ್ರಶಸ್ತಿ ಪ್ರಧಾನ” ಕಾರ್ಯಕ್ರಮ ಜರುಗಿತು. ಹೊಸಪೇಟೆಯ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಎಂ.ಬಸವರಾಜ್ ಕಕ್ಕುಪ್ಪೆಯವರಿಗೆ ವಿಜಯ ಹೋರಾಟಗಾರ ಪ್ರಶಸ್ತಿ ನೀಡಿ ರೈತ ಸಂಘದ ಮತ್ತು ಇತರೆ ಸಂಘ ಸಂಸ್ಥೆಗಳ ರೈತ ಚಳುವಳಿ ಹೋರಾಟಗಾರರನ್ನಾಗಿ ಗುರುತಿಸಿ ರಾಜ್ಯ ಮಟ್ಟದ ವಿಜಯ ಹೋರಾಟಗಾರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸ ಲಾಯಿತು. ಪ್ರಶಸ್ತಿ ಸ್ವೀಕರಿಸಿ ಎಮ್.ಬಸವರಾಜ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಿಂದ ರೈತರು ವಿಮುಕ್ತ ರಾಗುತ್ತಿದ್ದಾರೆ. ಇಂದಿನ ಯುವಕರು ಉದ್ಯೋಗ ಹರಸಿ ಆರಿಸಿಕೊಂಡು ನಗರಗಳತ್ತ ಮುಖ ಮಾಡುತ್ತಿದ್ದು. ಇದು ರೈತರಿಗೆ ಬೇಸರದ ಸಂಗತಿ. ಮತ್ತು ರೈತರಿಗೆ ಬೆಳೆದ ಬೆಳೆಗೆ ಸರಿಯಾದ ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ. ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಸಹ ರೈತರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದರು. 12 ನೇ. ಶತಮಾನದಲ್ಲಿ ಬಸವಣ್ಣನವರು ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆ ಮೇಲು ಮತ್ತು ಒಕ್ಕಲಿಗ ಒಕ್ಕದಿದ್ದರೆ ಬಿಕ್ಕುವುದು ಜಗವೆಲ್ಲ ಎಂದು ಸಾರಿ ಸಾರಿ ಬಸವಾದಿ ಶರಣರು ಹೇಳುತ್ತಾ ಬಂದಿದ್ದಾರೆ. ಇನ್ನೂ ಮುಂದಾದರೂ ಸರ್ಕಾರಗಳು ಕೃಷಿಗೆ ಒತ್ತು ಕೊಡದಿದ್ದಲ್ಲಿ ಆಹಾರಕ್ಕಾಗಿ ಹಾಹಾಕಾರ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಕೂಡ್ಲಿಗಿ ತಾಲೂಕಿಗೆ ಸಮಗ್ರ ನೀರಾವರಿ ಹೋರಾಟದ ಕುರಿತು ಸ್ವವಿವರವಾಗಿ ತಿಳಿಸಿದರು.ಇದೇ ಸಂದರ್ಭದಲ್ಲಿ ಪರಮ ಪೂಜ್ಯ ಮಹೇಶ್ವರ ಸ್ವಾಮೀಜಿಗಳು ಸುಕ್ಷೇತ್ರ ನಂದಿಪುರ, ಮಾಜಿ ಉಪಾಧ್ಯಕ್ಷರು ಜಿಲ್ಲಾ ಪಂಚಾಯಿತಿ ಪಿ.ಹೆಚ್ ದೊಡ್ಡ ರಾಮಣ್ಣ, ಪತ್ರಕರ್ತರಾದ ಎಸ್.ಎಂ ಗುರುಪ್ರಸಾದ್, ವಿಜಯನಗರ ಸಾಮ್ರಾಜ್ಯ ಪತ್ರಿಕೆಯ ಸಂಪಾದಕರಾದ ಎನ್.ಮಂಜುನಾಥ್, ಮಲ್ಲಿಕಾರ್ಜುನ ಪತ್ರಿಕೆಯ ವರದಿಗಾರರಾದ ಗಣೇಶ್, ಬಣಕಾರ್ ಮೂಗಪ್ಪ, ಸಪ್ತಗಿರಿ, ಸೇರಿದಂತೆ ಸಾಧಕರು ಪ್ರಶಸ್ತಿ ಪುರಸ್ಕೃತರು ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ