ಎಮ್.ಬಿ.ಬಿ.ಎಸ್ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಸಾಧಿಸಿದ ಕುಮಾರಿ ಸಂಜನಾಳನ – ನಾಗರಾಜ್ ಅವರ ಕುಟುಂಬದಿಂದ ಹೃದಯ ಪೂರ್ವಕವಾಗಿ ಸ್ವಾಗತಿಸಿ ಅಭಿನಂದಿಸಿದರು.
ಕುಷ್ಟಗಿ ಜೂ.25

ಪಟ್ಟಣದ ಗಾಂಧೀ ನಗರದ ನಿವಾಸಿಗಳಾದ ಮಾದಿಗ ಸಮುದಾಯದ ಚಂದ್ರಶೇಖರ ಶರಣಪ್ಪ ಶಾಖಾಪೂರ ಇವರ ಸುಪುತ್ರಿ ಕುಮಾರಿ ಸಂಜನಾ ತಂದಿ.ಚಂದ್ರಶೇಖರ ರವರು MBBS ನೀಟ್ ಪರೀಕ್ಷೆಯಲ್ಲಿ 3800 ರ್ಯಾಂಕ್ ನಲ್ಲಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ. ಕುಮಾರಿ ಸಂಜನಾಳಿಗೆ ಕುಷ್ಟಗಿ ತಾಲೂಕಿನ ಮಾದಿಗ ಸಮುದಾಯದ ಅಧ್ಯಕ್ಷರು ಮುಖಂಡರು ಶ್ರೀ ನಾಗರಾಜ.ಮೇಲಿನಮನಿ, ಮತ್ತು ಮುಂತಾದ ಹಿರಿಯರು ಮುಖಂಡರು, ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಅನೇಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.