ಪೌರ ಕಾರ್ಮಿಕರಿಗೆ ಮತ್ತು ಆಸ್ಪತ್ರೆಯ ಸಫಾಯಿ ಕರ್ಮಚಾರಿಗಳಿಗೆ ಪ್ರತಿ ತಿಂಗಳು 5 ನೇ. ತಾರೀಖಿನೊಳಗೆ ವೇತನ ಪಾವತಿಸಿ – ಜಿಲ್ಲಾಧಿಕಾರಿ ಮೀನಾ ನಾಗರಾಜ್.

ಚಿಕ್ಕಮಂಗಳೂರು ಜೂ.25

ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯಾದ ನಂತರ ಔಷದ ಉಪಚಾರಗಳನ್ನು ಕೊಡಿಸಿ ಕೊಡಬೇಕು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ರವರು ಹೇಳಿದರು. ಅವರು ಇಂದು ನಡೆದ ಜಿಲ್ಲಾ ಸಪಾಯಿ ಕರ್ಮಚಾರಿ ಮತ್ತು ಮ್ಯಾನುಯೆಲ್ ಸ್ಕೆವೆಂಜರ್ಸ್ ಪುನರ್ವಸತಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಸಮಿತಿ ಸದಸ್ಯರಾದ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕರು ನೇರ ಪಾವತಿ ಪೌರ ಕಾರ್ಮಿಕರು ಮತ್ತು ಆಸ್ಪತ್ರೆ ಸಪಾಯಿ ಕರ್ಮಚಾರಿಗಳಿಗೆ ಪ್ರತಿ ತಿಂಗಳು 15 ರಿಂದ 20 ನೇ. ತಾರೀಕಿಗೆ ಸಂಬಳ ಕೊಡುತ್ತಿದ್ದು ಇದರಿಂದ ಅವರ ಜೀವನಕ್ಕೆ ತುಂಬಾ ತೊಂದರೆಯಾಗಿದೆ ಪ್ರತಿ ತಿಂಗಳು ಐದನೇ ತಾರೀಕಿನೊಳಗೆ ವೇತನ ಪಾವತಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು. ಮಾನ್ಯ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಐದನೇ ತಾರೀಖಿನೊಳಗೆ ಗುತ್ತಿಗೆ ಪೌರ ಕಾರ್ಮಿಕರು ಮತ್ತು ಆಸ್ಪತ್ರೆ ಸ್ವಚ್ಛತಾ ಕೆಲಸಗಾರರಿಗೆ ವೇತನ ಪಾವತಿಸಬೇಕು ಎಂದು ಮಾರ್ಗದರ್ಶನ ನೀಡಿದರು. ಪ್ರತಿ ವರ್ಷ ಪೌರ ಕಾರ್ಮಿಕರಿಗೆ ಟೈಮ್ ಬಾಂಡ್ ವೇತನವನ್ನು ಮಂಜೂರಿ ಮಾಡಿ ಕೊಳ್ಳಬೇಕು. ಎಂದು ತಿಳಿಸಿದರು. ಹಾಗೂ ಪೌರ ಕಾರ್ಮಿಕರಿಗೆ ಪ್ರತಿದಿನ ಬೆಳಗ್ಗೆ 5:30 ರಿಂದ 6 ಗಂಟೆಯ ವರೆಗೆ ಹಾಜರಿಗೆ ಬಯೋಮೆಟ್ರಿಕ್ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಂಕಷ್ಟ ಬತ್ತೆ ಎಂದು ಪ್ರತಿ ತಿಂಗಳು ಕೊಡಬೇಕು ಅದು ಸಂಬಳದ ಜೊತೆ ಕೊಡಬೇಕು ಎಂದು ತಿಳಿಸಿದರು. ಪೌರ ಕಾರ್ಮಿಕರ ದಿನಾಚರಣೆ ಯೆಂದು ಪೌರ ಕಾರ್ಮಿಕರಿಗೆ 7,000 ರೂಪಾಯಿ ವೇತನ ಪಾವತಿಸಬೇಕು ಎಂದು ಹೇಳಿದರು.

ನಗರ ಸಭೆಯ ಪೌರ ಕಾರ್ಮಿಕರ ಬೆಳಗಿನ ಉಪಹಾರ ಇದ್ದಲ್ಲಿ ಉತ್ತಮ ರೀತಿಯ ಆಹಾರದ ಜೊತೆಗೆ ಮೊಟ್ಟೆ ವಿತರಣೆ ಮಾಡಬೇಕು ಎಂದು ತಿಳಿಸಿದರು. ಮೆಡಿಕಲ್ ಕಾಲೇಜಿನಲ್ಲಿ ಸ್ವಚ್ಛತಾ ಕೆಲಸ ಮಾಡಲು ಹೆಚ್ಚುವರಿ ನಾಲಕ್ಕು ಜನ ಕಾರ್ಮಿಕರನ್ನು ಹೊರ ಗುತ್ತಿಗೆಯಲ್ಲಿ ನೇಮಕ ಮಾಡಿ ಕೊಳ್ಳಲು ಸೂಚನೆ ನೀಡಿದರು. ಜಿಲ್ಲೆಯಲ್ಲಿರುವ ಎಲ್ಲಾ ಪೌರ ಕಾರ್ಮಿಕರ ಬಡಾವಣೆಗಳಲ್ಲಿ ಶುದ್ಧಗಂಗಾ ನೀರಿನ ಘಟಕ ಸ್ಥಾಪಿಸಲು ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ನಗರ ಸಭೆ ಮುಖ್ಯ ಅಧಿಕಾರಿಗಳಿಗೆ ತಿಳಿಸಿದರು. ಜಾಗೃತಿ ಸಮಿತಿ ಜಿಲ್ಲಾ ಸದಸ್ಯರಾದ ಎಂ ವಿ ಭವಾನಿ ರವರು ಮಾತನಾಡಿ ಅಜ್ಜಂಪುರದ ಪೌರ ಕಾರ್ಮಿಕ ಮಹೇಶ್ರವರ ಕಾಲು ಗ್ಯಾಂಗ್ರಿನ್ ಆಗಿದ್ದು ಮತ್ತು ನಗರ ಸಭೆ ಪೌರ ಕಾರ್ಮಿಕ ಪೆಂಚಲಮ್ಮ ರವರಿಗೆ ಕ್ಯಾನ್ಸರ್ ಕಾಯಿಲೆ ಆಗಿರುವುದರಿಂದ ಅವರಿಗೆ ಚಿಕಿತ್ಸೆ ವೆಚ್ಚವನ್ನು ಇಲಾಖೆಯವರು ಬರಿಸಬೇಕು ಎಂದು ತಿಳಿಸಿದರು. ಆಸ್ಪತ್ರೆ ಸ್ವಚ್ಛತಾ ಕರ್ಮಚಾರಿಗಳಿಗೆ ಸಪಾಯಿ ಕರ್ಮಚಾರಿ ಗುರುತಿನ ಚೀಟಿಯನ್ನು ಕೊಡಬೇಕೆಂದು ತಿಳಿಸಿದರ ಮೇರೆಗೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲಾ ಮುಖ್ಯ ಅಧಿಕಾರಿಗಳಿಗೆ ಸಪಾಯಿ ಕರ್ಮಚಾರಿ ಗುರುತಿನ ಚೀಟಿ ಕೊಡಲು ತಿಳಿಸಿದರು. ಸಭೆಯಲ್ಲಿ ಜಾಗೃತಿ ಸಮಿತಿ ಸದಸ್ಯರಾದ ಕೆ.ಟಿ ರಾಧಾಕೃಷ್ಣ ಹಾಗೂ ಜಿಲ್ಲೆಯ ಎಲ್ಲಾ ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ನಗರ ಸಭೆಯ ಮುಖ್ಯ ಅಧಿಕಾರಿಗಳು ಆಯುಕ್ತರು ಎಲ್ಲ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರು. ಆರೋಗ್ಯಧಿಕಾರಿಗಳು ಮತ್ತು ಸಮಾಜ ಕಲ್ಯಾಣ ಉಪ ನಿರ್ದೇಶಕರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಂಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button