ಶ್ರೀ ಆಂಜನೇಯಸ್ವಾಮಿ ಭಜನಾ ಮಂಡಳಿ ಯಿಂದ – ವಿಶೇಷ ಭಜನೆ.
ಚಳ್ಳಕೆರೆ ಜೂ.25

ನಗರದ ಹೊರವಲಯದ ನರಹರಿ ನಗರದ ಶ್ರೀ ನರಹರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಕಾಲುವೆಹಳ್ಳಿಯ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕಗೆ ಸನ್ಮಾನ ಗೌರವ ಧನ ವಿತರಿಸುವ ಕಾರ್ಯಕ್ರಮದಲ್ಲಿ ಕಾಲುವೆಹಳ್ಳಿಯ ಪ್ರಸಿದ್ಧ ಶ್ರೀಆಂಜನೇಯಸ್ವಾಮಿ ಭಜನಾ ಮಂಡಳಿಯ ಸದಸ್ಯರು ವಿಶೇಷ ಭಜನಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಭಜನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ವೈ ರಾಜಾರಾಮ್ ಗುರುಗಳು ವಹಿಸಿದ್ದರು.

ಭಜನಾ ಕಾರ್ಯಕ್ರಮದಲ್ಲಿ ಶತಾಯುಷಿ ಸೂಲಗಿತ್ತಿ ತಳುಕಿನ ತಿಮ್ಮಕ್ಕ, ಬಿ.ಸಿ ಸಂಜೀವಮೂರ್ತಿ, ಸುಧಾಕರ್, ಮೋಹಿನಿ ಸತ್ಯನಾರಾಯಣ, ಬಿ.ಸಿ ವೆಂಕಟೇಶಮೂರ್ತಿ, ರಾಮಚಂದ್ರಪ್ಪ, ಮಲ್ಲಿಕಾರ್ಜುನಪ್ಪ, ರೇವಣಸಿದ್ದಪ್ಪ, ಮಾರುತಿ, ಲಂಕೇಶ್, ಡಿ.ಆರ್ ತಿಮ್ಮಣ್ಣ, ಕೆ.ಬಿ ಪಾಲಣ್ಣ, ವಿನೋದಮ್ಮ, ಮಾರಕ್ಕ, ಬೋರಣ್ಣ, ಪಾಲಕ್ಕ, ತಿಪ್ಪೇಸ್ವಾಮಿ, ರಾಮಣ್ಣ, ಯಾಜಮಾನ ಪಾಲಯ್ಯ, ಕರಿಬಸಪ್ಪ, ನೀಲಕಂಠಶೆಟ್ಟಿ, ರಾಘವೇಂದ್ರ, ಹಾರ್ಮೋನಿಯಂ ತಿಪ್ಪೇಸ್ವಾಮಿ, ಕೆ.ಓ ಪಾಲಣ್ಣ, ಓಬಕ್ಕ, ರತ್ನಮ್ಮ, ಲಕ್ಷ್ಮೀದೇವಿ, ಪವನ, ಪುನೀತ, ಭರತ, ಯತೀಶ್.ಎಂ ಸಿದ್ದಾಪುರ, ಮಂಜುಳ, ಮೌನಶ್ರೀ, ಗೌತಮಿ, ಬಸವರಾಜ್ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.