ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಿಲ್ಲ – ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಾಹಾಪುರ.

ಮುದ್ದೇಬಿಹಾಳ ಜೂ.26

ಮಳೆ ಬರುತ್ತಿರುವುದರಿಂದ ಇತ್ತೀಚಿಗೆ ಗಜೇಂದ್ರಗಡ ತಾಲೂಕಿನಲ್ಲಿ ಸರ್ಕಾರಿ ಶಾಲೆ, ಮೇಲ್ಚಾವಣಿ ಕುಸಿದು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಹಾನಿಯಾಗಿದೆ. ಅದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಹೇಳಿದರು. ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಈ ಹಿಂದೆ ಬಸವರಾಜ್ ಬೊಮ್ಮಾಯಿ ಸರ್ಕಾರ ಇದ್ದಾಗ ಬಿ.ಸಿ. ನಾಗೇಶ್. ಸಚಿವರು ಕೊಠಡಿಗಳ ನಿರ್ಮಾಣ ಕಾರ್ಯ ಕೈಗೊಂಡರು. ಅದನ್ನು ಬಿಟ್ಟರೆ ಈಗಿನ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಹಣ ನೀಡಿಲ್ಲಾ. ಕಾರಣ ಇದರ ನೈತಿಕ ಹೊಣೆಯನ್ನು ಸಿ.ಎಂ ಸಿದ್ದರಾಮಯ್ಯ ಅವರೆ ಹೊರಬೇಕು. ಹೀಗಾಗಿ ಈ ಬಾರಿ ಉತ್ತಮ ಮಳೆ ಇದೆ ಎಂದು ಹಲವಾರು ಮಾಹಿತಿ ನೀಡಿದ್ದು. ಸರ್ಕಾರ ತಕ್ಷಣ ಬಡ ಸರ್ಕಾರಿ ಶಾಲೆಯಲ್ಲಿನ ಮಕ್ಕಳ ಸಲುವಾಗಿ ಶಿಥಿಲವಾದ ಕಟ್ಟಡಗಳ ದುರಸ್ತಿ ಮತ್ತು ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ 30% ಹುದ್ದೆಗಳು ಖಾಲಿ ಇವೆ. ಹಾಗೆ ಕೆಲವೊಂದಿಷ್ಟು ಪದೋನ್ನತಿಗಳು ದುಡ್ಡು ಕೊಟ್ಟವರಿಗೆ ಮಾತ್ರ ನೀಡುತ್ತಿದ್ದಾರೆ.

ಇಂಥ ದುರಾಡಳಿತ ಕರ್ನಾಟಕದಲ್ಲಿ ನಡೆಯುತ್ತಿದೆ. ಹೀಗಾಗಿ ಶಿಕ್ಷಣಕ್ಕೆ ಸೂಕ್ತವಾದ ಆದ್ಯತೆ ನೀಡಿ. ಅನುದಾನ ನೀಡಿ ಜನರು ಹೇಳಿ ಮಾಧ್ಯಮದಲ್ಲಿ ಕೆಟ್ಟ ಸುದ್ದಿ ಆಗುವಂತೆ ದುರಾಡಳಿತ ಬೇಡ ಎಂದು ಹೇಳಿದರು. ಈ ವೇಳೆ ಭಾ.ಜ.ಪ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ದೇವರಮನಿ. ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣವರ್. ಮಂಡಲ ಪ್ರಧಾನ ಕಾರ್ಯದರ್ಶಿ ಸಂಜು ಬಾಗೇವಾಡಿ. ಪಕ್ಷದ ಮುಖಂಡರಾದ. ಅಶೋಕ್ ಚಿನಿವಾರ. ಶ್ರೀ ಶೈಲ್ ದೊಡಮನಿ. ರಾಜು ಬಳ್ಳೊಳ್ಳಿ. ಅಶೋಕ್ ರಾಥೋಡ್. ಪರಶುರಾಮ ನಾಲ್ತವಾಡ. ರವೀಂದ್ರ ಬಿರಾದಾರ್. ಸಂತೋಷ್ ಬಾದರಬಂಡಿ. ಮಾಂತಗೌಡ ಕಾಶಿನಕುಂಟಿ. ವೀರೇಶ್ ಡವಳಿಗಿ. ಅನಿಲ್ ರಾಟೋಡ್.ಶಿವರಾಜ್ ರಾಥೋಡ್. ನಿಖಿಲ್ ಮಲಗಲದಿನ್ನಿ. ಪ್ರಭುಗೌಡ ಬಿರಾದಾರ್. ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಸಂಗನಗೌಡ ಪಾಟೀಲ್ ಅವರು ಮಾಜಿ ವಿಧಾನ ಪರಿಷತ್ತಿ ಸದಸ್ಯ ಅರುಣ್ ಶಾಹಾಪುರ ಅವರಿಗೆ ಸನ್ಮಾನಿಸಿ ಗೌರವಿಸಿದರು. ಈ ವೇಳೆ ಸೋಮನಗೌಡ ಪಾಟೀಲ್ ನಡಹಳ್ಳಿ. ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button