ಪಶು ಆಸ್ಪತ್ರೆಗೆ ಫೌಂಡೇಷನ್ ಇಲ್ದೆ ನಿರ್ಮಾಣ, ಕಳಪೆ ಕಾಮಗಾರಿ ತನಿಖೆ ಮಾಡಲು ಲೋಕಾಯುಕ್ತ ತನಿಖಾಧಿಕಾರಿ ತಲಾಸ್ – ಶ್ರವಣಕುಮಾರ.ಡಿ ನಾಯಕ.

ಇಜೇರಿ ಜೂ.26

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದ RIDF ನಬಾರ್ಡ್ ಯೋಜನೆಯಲ್ಲಿ ನಡೆದಿರುವ ಪಶು ಆಸ್ಪತ್ರೆ ಕಾಮಗಾರಿ ಗುಣಮಟ್ಟದಿಂದ ನಿರ್ಮಾಣ ಮಾಡದೆ ಕಳಪೆ ಮಟ್ಟದಿಂದ ಮಾಡಿದ್ದು, ಸದರಿ ಕಾಮಗಾರಿ ಎಸ್ಟಿಮೆಂಟ್ ಪ್ರಕಾರ ಮಾಡಿರುವುದಿಲ್ಲ, ಮುಖ್ಯವಾಗಿ ಕಟ್ಟಡ ಕಾಮಗಾರಿ ನಿರ್ಮಾಣ ಮಾಡಲು ಫೌಂಡೇಷನ್ ಹಾಕಿ ನಂತರ ಕಟ್ಟಡ ಕಟ್ಟಬೇಕು ಆದರೆ ಕಟ್ಟಡ ಕೆಳಗೆ ಫೌಂಡೇಷನ್ ಹಾಕದೆ ನೇರವಾಗಿ ಕಳಪೆ ಮಟ್ಟದಿಂದ ಕಾಮಗಾರಿ ಮಾಡಿರುವ ಬಗ್ಗೆ ಕರ್ನಾಟಕ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಾನ್ಯ ಲೋಕಾಯುಕ್ತರು ಬೆಂಗಳೂರು ರವರ ಆದೇಶದ ಮೇರೆಗೆ ತನಿಖಾಧಿಕಾರಿಗಳ ರವರ ನೇತೃತ್ವದಲ್ಲಿ ಸದರಿ ಕಾಮಗಾರಿಯನ್ನು ಪರಿವೀಕ್ಷಣೆ ಮಾಡಲಾಯಿತು.

ಸದರಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು, ಕಾಮಗಾರಿಯನ್ನು ತಾಂತ್ರಿಕ ಗುಣ ಭರವಸೆ ಅಧಿಕಾರಿಗಳು ತಪಾಸಣೆ ವೇಳೆ ಜೆಸಿಬಿ ಮೂಲಕ ಕಟ್ಟಡ ಕೆಳಗೆ ತೋಡಲಾಯಿತು ಫೌಂಡೇಷನ್ ಇಲ್ಲದಿರುವ ಬಗ್ಗೆ ಸಾಬೀತು ಆಯಿತು, ಕಾಲಂ ಕೂಡ ಎಸ್ಟಿಮೆಂಟ್ ಪ್ರಕಾರ ಹಾಕಿಲ್ಲದರ ಬಗ್ಗೆ ತಿಳಿಯಿತು, ಕಟ್ಟಡ ಸಂಪೂರ್ಣವಾಗಿ ಬೀರುಕು ಬೀಟ್ಟಿರುವ ಬಗ್ಗೆ ಲೋಕಾಯುಕ್ತ ತನಿಖಾಧಿಕಾರಿಗಳ ಗಮನಕ್ಕೆ ತರಲಾಯಿತು.

ಇಂತಹ ಕಳಪೆ ಮಟ್ಟದ ಕಾಮಗಾರಿಯನ್ನು ಜೇವರ್ಗಿ ಶಾಸಕ ಡಾ, ಅಜಯಸಿಂಗ್ ರವರು ಕಳೆದ ವರ್ಷ ಥರಾತೂರಿಯಲ್ಲಿ ಉದ್ಘಾಟನೆ ಮಾಡಿದರು. ತಾಲೂಕಿನಲ್ಲಿ ಬಹುತೇಕ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದೆ ಸದರಿ ಕಾಮಗಾರಿಗಳು ರಾಷ್ಟ್ರ ಮಟ್ಟದ NCCL ಕಂಪನಿಯ ನಿರ್ಮಾಣ ಮಾಡಿದ್ದು ಈ ಕಂಪನಿಯ ಪರವಾನಿಗೆಯನ್ನು ಕಪ್ಪು ಪಟ್ಟಿಗೆ ಸೇರಿಸಿ ಎರಡು ಪಟ್ಟು ಹಣವನ್ನು ದಂಡಾ ಹಾಕಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂದು.

ಲೋಕಾಯುಕ್ತ ಸಂಸ್ಥೆ ತನಿಖಾಧಿಕಾರಿಗಳಾ ಯೋಗೇಶ ಸರ್ ಅವರಿಗೆ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷರಾದ ಶ್ರವಣಕುಮಾರ ಡಿ ನಾಯಕ ರವರು, ಇಜೇರಿ ಗ್ರಾಮ ಘಟಕದ ಅಧ್ಯಕ್ಷರು ನಿಂಗಣ್ಣ ಎಂ.ಚಿಗರಳ್ಳಿ ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯವರು ಒತ್ತಾಯಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button