“ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು”…..

ಜನಮೆಚ್ಚುವ ಕೆಚ್ಚೆದೆಯ ನಾಯಕರಿವರು

ಕನ್ನಡ ನಾಡಿನ ದೈವ ಕೆಂಪೇಗೌಡರು

ನಾಡ ಜನ ಮನೆಗೆದ್ದ ಸಾಹುಕಾರರು

ಚರಿತ್ರೆ ಬರೆದ ನಾಡಪ್ರಭು ಕೆಂಪೇಗೌಡರು.

ಮೊರಸು ಗೌಡ ವಂಶದ ವಂಶಸ್ಥರಾದ

ಕೆಂಪೇಗೌಡರು

ವಿದ್ಯಾವಂತ ಮತ್ತು ಯಶಸ್ವಿ ಆಡಳಿತಗಾರರಲ್ಲಿ

ಒಬ್ಬರು

ಬೆಂಗಳೂರ ನಗರ ಮರೆಯದ

ಮಾಣಿಕ್ಯಯಿವರು

ಬೆಂಗಳೂರು ನಗರ ನಿರ್ಮಿಸಿ ಹೆಸರಾದರು.

ಬೆಂಗಳೂರು ಹೆಸರಿತ್ತಿದ ತಕ್ಷಣ

ನೆನಪಾಗುವುದು ಕೆಂಪೇಗೌಡರು

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ

ಕೆಂಪೇಗೌಡರು

1537 ರಲ್ಲಿ ಬೆಂಗಳೂರು ನಗರವನ್ನು

ಕಟ್ಟಿದವರು

ಎಲ್ಲ ವ್ಯಾಪಾರ ವಹಿವಾಟಿಗೆ ಅವಕಾಶ

ಮಾಡಿಕೊಟ್ಟವರು.

ಯಲಹಂಕದ ಪಾಳೇಗಾರರು ಕೆಂಪೇಗೌಡರು

ಬೆಂದಕಾಳೂರಿನ ಅಭಿವೃದ್ಧಿಯ

ಹರಿಕಾರರಾಗಿದ್ದರು

ಪ್ರಜೆಗಳ ಹಿತವನ್ನು ಕಾಪಾಡಲು ಜೀವನ

ಮುಡುಪಾಗಿಟ್ಟವರು

ಬೆಂಗಳೂರನ್ನು ರಾಜಧಾನಿಯನ್ನಾಗಿ

ಮಾಡಿದರು.

ಕೆಂಪೇಗೌಡರು ರೈತ ಸಮುದಾಯದಲ್ಲಿ

ಜನಿಸಿದವರು

ಎಲ್ಲ ಜಾತಿ ಜನಾಂಗದವರ ಬೆಳವಣಿಗೆಗೆ

ಪ್ರಯತ್ನಿಸಿದವರು

ಬೆಂಗಳೂರು ನಗರ ಬೆಳೆಯಲು

ಕಾರಣರಾದವರು

ಸಮಾಜಮುಖಿಯಾಗಿ ಕೆಲಸವನ್ನು ಮಾಡಿ

ವಿಶ್ವಮಾನವರಾದರು.

ಕು. ಜ್ಯೋತಿ.ಆನಂದ.ಚಂದುಕರ

ಬಾಗಲಕೋಟ – 9980180487

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button