ಸೋರುತಿಹುದು ಐತಿಹಾಸಿಕ ಶ್ರೀಮಂತ ಶಾಮಿಯ ಚಂದ್ – ಪ್ರೌಢ ಮತ್ತು ಪದವಿ ಪೂರ್ವ ಕಾಲೇಜ್.

ಕಂಪ್ಲಿ ಜೂ.28

ಈ ದಿನ ಮಾನ್ಯ ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಬಳ್ಳಾರಿ ಇವರ ನೇತೃತ್ವದಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆಗಳ ಸ್ವೀಕಾರ ಕಾರ್ಯಕ್ರಮದಲ್ಲಿ ಶಾಮಿಯ ಚಂದ್ ಸರ್ಕಾರಿ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜು, ಹಳೆ ವಿದ್ಯಾರ್ಥಿ ಬಳಗದ ವಿದ್ಯಾರ್ಥಿಗಳಾದ ಎಸ್.ವೀರಭದ್ರಪ್ಪ ವಿದ್ಯಾಶಂಕರ ತುಕರಾಮ್ ಸಿಂಗ್ ಇವರೊಂದಿಗೆ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರು ಮತ್ತು ಕಲ್ಯಾಣ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಹಾಗೂ ಆರ್.ಟಿ.ಐ ಮಾಹಿತಿ ಪತ್ರಿಕೆಯ ಸಂಪಾದಕರಾದ ಟಿ.ಎಚ್ ರಾಜಕುಮಾರ್ ಇವರ ಸಂಘಟನೆಯ ಮೂಲಕ ಶಾಮಿಯ ಚಂದ ಪ್ರೌಢ ಶಾಲೆಯ ಪುನರ್ಶ್ವೇತನಕ್ಕಾಗಿ ಮತ್ತು ದಾನಿಗಳು ನೀಡಿದ ಎರಡು 2 ವಾಣಿಜ್ಯ ಕಟ್ಟಡ ಮತ್ತು ಕಂಪ್ಲಿ ಹಾಗೂ ಸಿರುಗುಪ್ಪ ತಾಲೂಕಿನಲ್ಲಿ ಇರುವ 29 ಎಕರೆ 26 ಸೆಂಟ್ಸ್ ಜಮೀನಿನ ಬಾಡಿಗೆ ಮತ್ತು ಗುತ್ತಿಗೆಯ ಬಗ್ಗೆ ಹಾಗೂ ಸರ್ವೇ ಮಾಡಿಸಿ ಕೊಂಡು ಸಂಸ್ಥೆ ಒಡೆತನದಲ್ಲಿಟ್ಟು ಕೊಳ್ಳಲು ಶಿಫಾರಸ್ಸು ಮಾಡಲು ಮನವಿಯೊಂದಿಗೆ ಶಾಲೆಯ ವೀಕ್ಷಣೆಗೆ ಅಧಿಕಾರಿಗಳನ್ನು ಕರೆ ತಂದು ಸ್ಥಳ ಪರಿಶೀಲನೆ ಮಾಡಿಸಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳಾದ ಶ್ರೀ ನಾಗರೆಡ್ಡಿ ಅವರು ಮುಂದಿನ ಕ್ರಮಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳು ಬಳ್ಳಾರಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ವಿಷಯವನ್ನು ಪತ್ರದ ಮೂಲಕ ತಿಳಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಿದರು ಎಂದು ವರದಿಯಾಗಿದೆ.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಟಿ.ಎಚ್. ಎಮ್ ರಾಜಕುಮಾರ್.ಕಂಪ್ಲಿ.ಬಳ್ಳಾರಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button