ಕಾರ್ಯಕರ್ತರ ಚಲನ ಶೀಲತೆ ವೇಗ ಹೆಚ್ಚಿಸಿದಾಗ ಮಾತ್ರ ದಲಿತರ ಕಾರ್ಯ ಪಡೆ ಹೆಚ್ಚಿಸಿದಂತೆ – ಸಂಘಟನೆಗೆ ಬಲ ಎಂದ ರಾಜ್ಯ ಸಂಚಾಲಕ ಎನ್.ವೆಂಕಟೇಶ್ ತರೀಕೆರೆ.

ವಿಜಯಪುರ ಜೂ.29

ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ವಿಜಯಪೂರ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಸಭೆ ಹಾಗೂ ನೂತನ ಸದಸ್ಯತ್ವ ಅಭಿಯಾನ ಹಾಗು ಮಹಾತ್ಮ ಪ್ರೊ, ಬಿ.ಕೃಷ್ಣಪ್ಪ ನವರ ಜನ್ಮದಿನಾಚರಣೆ ಅಂಗವಾಗಿ ವಿಜಯಪುರದ ದರ್ಗಾ ರಸ್ತೆಯಲ್ಲಿರುವ ಮಾದರ ಚೆನ್ನಯ್ಯ ಸಭಾ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಜ್ಯ ಸಂಚಾಲಕ ಎನ್.ವೆಂಕಟೇಶ್ ತರೀಕೆರೆ ಯವರು ಮಾತನಾಡಿ ರಾಜ್ಯದಲ್ಲಿ ಶೋಷಿತ ವರ್ಗದ ಸಮುದಾಯಗಳ ಏಳಿಗೆಗಾಗಿ ಕಟಿ ಬದ್ಧರಾಗಿ ಸಮಿತಿಯ ಕಾರ್ಯಕರ್ತರು ಶ್ರಮಿಸ ಬೇಕೆಂದು ಕರೆ ನೀಡಿದರು. ರಾಜ್ಯ ಸಂಘಟನಾ ಸಂಚಾಲಕರಾದ ಕೆ.ನಂಜಪ ಮೈಸೂರು ರವರು ಮಾತನಾಡಿ ಡಿ.ಎಸ್.ಎಸ್ ಕಾರ್ಯಕರ್ತರು ಶೋಷಿತರ ಮನೆ ಮನೆಗೆ ಹೋಗಿ ಮನೆಯ ಬಾಗಿಲಿಗೆ ತಮ್ಮ ಸೇವೆ ದೊರೆಯುವಂತೆ ಹಾಗೂ ನಿಷ್ಪಕ್ಷ ಪಾತ ಪ್ರವಾಣಿಕ ಸೇವೆಯನ್ನು ಮಾಡಿ ಕಷ್ಟದಲ್ಲಿರುವವರ ಕೈ ಹಿಡಿಯಬೇಕೆಂದು ಹಾಗೂ ನೊಂದವರ ಪರವಾಗಿ ಹಗಲಿರುಳು ಶ್ರಮಿಸುವಂತಾಗ ಬೇಕೆಂದರು. ಮಾರುತಿ.ಬಿ ಹೊಸಮನಿ ಬಾಗಲಕೋಟ ರವರು ಮಾತನಾಡುತ್ತಾ ಎಲ್ಲಾ ಡಿ.ಎಸ್.ಎಸ್ ಕಾರ್ಯಕರ್ತರು ಸೇನಾನಿಗಳಾಗಿ ದೀನ ದಲಿತರ ರಕ್ಷಕರಾಗ ಬೇಕೆಂದರು. ರಾಜಶೇಖರ್ ಚಾಪನೂರ್ ಬೆಂಗಳೂರು ರವರು ಮಾತನಾಡಿ ನಾವೆಲ್ಲರೂ ಕೂಡ ಸಾರ್ವಜನಿಕ ಸೇವೆಯಲ್ಲಿ ಶಿಸ್ತಿನ ಸಿಪಾಯಿಗಳಂತೆ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅನುಯಾಯಿಗಳಾಗಿ ಇರ ಬೇಕೆಂದರು ರಾಜ್ಯ ಖಜಾಂಚಿ ಮಹದೇವ ಪ್ರಸಾದ್ ಬೆಂಗಳೂರು ರವರು ಮಾತನಾಡುತ್ತಾ ಇಂದಿನ ಯುವ ಪೀಳಿಗೆ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ರವರ ಆದರ್ಶಗಳನ್ನು ಮೈಗೂಡಿಸಿ ಕೊಂಡು ನಡೆಯ ಬೇಕೆಂದರು. ಆದಿ ನಾರಾಯಣ ಬೆಂಗಳೂರು ದವರು ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸದಸ್ಯತ್ವದ ಅಭಿಯಾನ ಮುಂದುವರಿಸ ಬೇಕೆಂದರು. ಶಿವಾನಂದ ಸಾವಳಗಿ ಗುಲ್ಬರ್ಗ ರವರು ಮಾತನಾಡಿ ಆಂತರಿಕ ಶಿಸ್ತು ಸಂಯಮಗಳನ್ನು ರೂಡಿಸಿ ಕೊಂಡು ಮುನ್ನಡೆಯ ಬೇಕೆಂದರು. ರಾಜ್ಯ ಸಮಿತಿಯ ಅಂಗ ಸಂಸ್ಥೆಯಾದ ರಾಜ್ಯ ಮಹಿಳಾ ಒಕ್ಕೂಟದ ಸಂಚಾಲಕಿ ಎಮ್.ವಿ ಭವಾನಿ ಬಾಳೆಹೊನ್ನೂರು ಇವರು ಪಾಲ್ಗೊಂಡಿದ್ದರು. ವಿಜಯಪುರ ಜಿಲ್ಲೆಯ ರಾಜ್ಯ ಸಂಘಟನಾ ಸಂಚಾಲಕ ತಮ್ಮಣ್ಣ ಖಾನಗಡ್ಡಿ ರವರು ಕಾರ್ಯಕ್ರಮದ ವ್ಯವಸ್ಥೆ ನೋಡಿ ಕೊಂಡರು. ವಿಜಯಪುರ ಜಿಲ್ಲೆಯ ಜಿಲ್ಲಾ ಸಂಚಾಲಕರಾದ ರಾಜು ದಿಂಡವಾರ ರವರು ಕಾರ್ಯಕ್ರಮದ ಆಯೋಜನೆ ಹಾಗೂ ಕಾರ್ಯಕ್ರಮವನ್ನು ಸ್ವಾಗತಿಸಿದರು ವಿಜಯಪುರ ಜಿಲ್ಲಾ ದಲಿತ ಮುಖಂಡರಾದ ಎಲ್ಲಪ್ಪ ಪಡಸಲಗಿ, ರಮೇಶ್ ಮ್ಯಾಗೇರಿ, ಮಹಾಂತೇಶ್ ನಾಗರಬೆಟ್ಟ, ರವಿಚಂದ್ರ ಹಾದಿಮನಿ, ವಿಠಲ್ ಗರಡಿಮನಿ, ಮಂಜುನಾಥ ಭಾಗನಗರ, ಮಂಜುನಾಥ ಕೊಡಗನೂರು, ತಾಲೂಕು ಮುಖಂಡರಾದ ಚಂದ್ರಶೇಖರ ಪಡಸಲಗಿ, ಬಸವನ ಬಾಗೇವಾಡಿ ನಾಗೇಶ್ ಹಳ್ಳೂರ ಮುದ್ದೆ ಬಿಹಾಳ, ಮುಳ್ಳು ದೊಡ್ಡಮನಿ ತಾಳಿಕೋಟೆ, ಮಲ್ಲಿಕಾರ್ಜುನ ಬಡಗಿ ದೇವರ ಹಿಪ್ಪರಗಿ, ಸೋಮು ಮಾದರ ನಿಡಗುಂದಿ, ಪ್ರಕಾಶ್ ನಡುವಿನಕೆರಿ ವಿಜಯಪುರ, ನೂರಾರು ಕಾರ್ಯಕರ್ತರು ಹಾಜರಿದ್ದರು. ರಾಜ್ಯ ಸಂಘಟನಾ ಸಂಚಾಲಕ ಶಿವಾನಂದ ಸಾವಳಗಿ ರವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button