“ಭಂಡಾರದ ಒಡೆಯ ಶ್ರೀ ರಾವುತರಾಯನ ಸ್ಮರಿಸುವ ಮನ ಪಾವನ”…..

ಶಿವನ ಅವತಾರಿ

ಅಶ್ವರೂಢ ಶ್ರೀರಾವುತರಾಯ

ಜಗದ ಸಕಲ ಜೀವಸಂಕುಲ ರಕ್ಷಿಪ

ಶ್ರೀರಾವುತರಾಯ

ದಯೆ ಕರುಣೆ ಕಾಯಕ ನಿಷ್ಠೆಗೆ

ಕೃಪೆ ತೋರುವ ಕರುಣಾಕರ ಶ್ರೀಕರ ಶುಭಕರ

ದುಷ್ಟರ ಸದೆ ಬಡೆವ ಶಿಷ್ಟರ ರಕ್ಷಿಪ

ಮಾರ್ತಾಂಡ ಭೈರವೇಶ್ವರ

ಶುದ್ಧ ತನು ಮನದಿ ಹಣೆಗೆ ಭಂಡಾರ

ಧರಿಸಿದವಂಗೆ ಸದಾ ಕಾಲ ಹರುಷದ

ಹೊನಲು ವರಪ್ರದಾಯ

ನ್ಯಾಯ ನೀತಿ ಪಾಲಿಸುವ ಭಕ್ತರ

ಅಂಗೈಯಲಿರಿಸಿ ಸಲಹುವ

ಹರ ಮಹಾದೇವ

ಸುಖ ಐಶ್ವರ್ಯದಾತ ನೀಲಮಣಿ

ಅವತಾರಿ ಭವ ಹರ ಶ್ರಿರಾವುತರಾಯ

ಏಳು ಕೋಟಿಗೆ ಏಳುಕೋಟಿಗೆ ಯುಘೇ

ಎನ್ನಲು ಕಷ್ಟ ಕಾರ್ಪಣ್ಯನೀಗಿಸುವ

ಜಗದೊಡೆಯ

ಸುಖಭೋಗದ ಸಿರಿದಾತ

ಏಳುಕೋಟಿ ಮೈಲಾರಲಿಂಗ

ಶ್ರೀರಾವುತೇಶ್ವರ

ಕಾರುಣಿಕ ನುಡಿ ವಿಶ್ವ ಕತ್ತಲ ಕಳೆದು

ಬೆಳಕ ಬೆಳಗುವ ಸರ್ವೇಶ್ವರ

ಶ್ರೀರಾವುತರಾಯ

ದೇವಾನು ದೇವ ದೇವರ ಹಿಪ್ಪರಗಿ

ಕ್ಷೇತ್ರದಲಿ ನೆಲಸಿದ ಭಕ್ತವತ್ಸಲ್

ಶ್ರೀರಾವುತರಾಯ

ಶುಭ ಅಭಿಲಾಷೆ ಈಡೇರಿಸುವ ಈಶ

ಮಲ್ಹಾರಿ ದೇವ ಖಂಡೋಬಾ

ಶ್ರೀ ರಾವುತರಾಯ

ಮಹಾ ಮಹಿಮಾ ಶಿವಹರ ಚಿದಂಬರ

ಶ್ರೀರಾವುತರಾಯ ಮಲ್ಲಯ್ಯನ

ನೆನವ ಮನ ಪಾವನ

ಶ್ರೀದೇಶಂಸು

ಶ್ರೀಸುರೇಶ ಶಂಕ್ರೆಪ್ಪ ಅಂಗಡಿ

ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button