ಸ್ಕೌಟ್ಸ್ ಗೈಡ್ಸ್ ಜಗತ್ತಿನ ಬಹುದೊಡ್ಡ ಶಿಸ್ತಿನ ವಿದ್ಯೆ- ಪಿ.ಜಿ.ಆರ್ ಸಿಂಧಿಯಾ.
ವಿಜಯಪುರ ಜೂ.30

ಸ್ಕೌಟ್ಸ್ ಗೈಡ್ಸ್ ಜಗತ್ತಿನ ಬಹುದೊಡ್ಡ ಶಿಸ್ತಿನ ವಿದ್ಯೆ. ಇಂದು ಪ್ರಪಂಚದಲ್ಲಿ 175 ಕ್ಕೂ ಅಧಿಕ ದೇಶಗಳಲ್ಲಿ ಸ್ಕೌಡ್ಸ್ ಗೈಡ್ಸ್ ತನ್ನ ಕಾರ್ಯ ವಿಸ್ತರಿಸಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹೋದರತ್ವ ಭಾವನೆ ಬೆಳೆಸುವ ಗುರಿ ಹೊಂದಿದೆ ಎಂದು ಭಾರತ್ ಸ್ಕೌಟ್ಸ್, ಗೈಡ್ಸ್ ರಾಜ್ಯ ಆಯುಕ್ತ ಪಿ.ಜಿ.ಆರ್ ಸಿಂಧಿಯಾ ಹೇಳಿದರು.ರವಿವಾರ ದಂದು ತಾಲೂಕಿನ ಬುರಣಾಪುರದ ತರಬೇತಿ ಕೇಂದ್ರದಲ್ಲಿ ಭಾರತ್ ಸ್ಕೌಟ್ಸ್, ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ವಿಜಯಪುರ ವತಿಯಿಂದ ಜರುಗಿದ ವಿಭಾಗೀಯ ಮಟ್ಟದ ಸ್ಕೌಟ್ ಮಾಸ್ಟರ್, ಗೈಡ್ ಕ್ಯಾಪ್ಟನ್, ಕಬ್ ಮಾಸ್ಟರ್, ಪ್ಲಾಕ್ ಲೀಡರ್ ರವರ ಮುಂದುವರೆದ 7 ದಿನದ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಜಿಲ್ಲಾ ಪದಾಧಿಕಾರಿಗಳ ವಿಶೇಷ ಸಭೆಯನ್ನು ಉದ್ಧೇಶಿಸಿ ಅವರು ಮಾತನಾಡಿದರು.ತಂತ್ರಜ್ಞಾನ ಬದಲಾದಂತೆ ಸ್ಕೌಟ್ಸ್, ಗೈಡ್ಸ್ ತರಬೇತಿ ವಿಧಾನದಲ್ಲಿಯೂ ಬದಲಾವಣೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದಲ್ಲಿ ಚಿಂತನೆ ನಡೆದಿದೆ. ಸ್ಕೌಟ್ಸ್ ಗೈಡ್ಸ್ ನಲ್ಲಿ ಆಧುನಿಕತೆಯನ್ನು ಅಳವಡಿಸಿ ಕೊಳ್ಳುವ ಅನಿವಾರ್ಯತೆ ಇದೆ. ಪರಿಸರ ಹಾಗೂ ಪಂಚ ಭೂತಗಳನ್ನು ಸಂರಕ್ಷಿಸುವಲ್ಲಿ ನಮ್ಮ ಪಾತ್ರ ಮುಖ್ಯ ಎಂದು ಹೇಳಿದರು. ಸ್ಕೌಟ್ಸ್, ಗೈಡ್ಸ್ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ.

ಅದನ್ನು ಜೀವನದಲ್ಲಿ ಅಳವಡಿಸಿ ಕೊಂಡು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ತಿಳಿ ಹೇಳಬೇಕು ಎಂದು ಹೇಳಿದರು.ಡಾ, ಸತೀಶ ಜಿಗಜಿನ್ನಿ ಅಧ್ಯಕ್ಷತೆ ವಹಿಸಿ,ಮಾತನಾಡಿದರು.ಸಹಜಾನಂದ ದಂದರಗಿ, ಬಿ.ಎಂ ಆಜೂರ, ವಿದ್ಯಾವತಿ ಅಂಕಲಗಿ, ಆಯ್.ಎಸ್ ಕಾಳಪ್ಪನವರ, ಉಷಾ ಹಿರೇಮಠ, ಭಾರತಿ ಹಿರೇಮಠ, ಜಿಲ್ಲಾ ಕಾರ್ಯದರ್ಶಿ ಪರಶುರಾಮ ಕುಂಬಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ತರಬೇತಿ ಮುಖ್ಯಸ್ಥ ಅಮರೇಶ ಕೋರಿ, ಲಕ್ಷ್ಮೀ ಬಹದ್ದೂರಿ ತರಬೇತಿಯ ವರದಿ ವಾಚಿಸಿದರು. ಶಿಬಿರಾರ್ಥಿಗಳು ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಹ ತರಬೇತುದಾರರಾದ ಜಗದೀಶ ಬೊಳಸೂರ, ಸಂಗಯ್ಯ ಮಠಪತಿ, ಡಿ ಬಿ ಅತ್ತಾರ, ರಾಣಪ್ಪ ಸಂಗನ, ಧನಸಿಂಗ್ ರಾಠೋಡ, ಸಂಗಮೇಶ ಬಂಡೆ, ರಮೇಶ ತೇಲಿ, ಲಕ್ಷ್ಮೀ ಮಾಲಿಪಾಟೀಲ, ಕೆ ಎಸ್ ಕಟ್ಟಿ ಸೇರಿದಂತೆ ವಿಜಯಪುರ, ಬಾಗಲಕೋಟ ಬೆಳಗಾವಿ ಜಿಲ್ಲೆಯ ಸ್ಕೌಟ್ ಮತ್ತು ಗೈಡ್ ಮಾಸ್ಟರ್ ಗಳು ಭಾಗವಹಿಸಿದ್ದರು.