ಪ್ರವಾಸ ಮಂದಿರದಲ್ಲಿ ದಲಿತ ಸೇವಾ ಸಮಿತಿ ಅಂಬೇಡ್ಕರ್ ದಾರಿ ರಾಜ್ಯ ಸಮಿತಿಯಿಂದ – ಪತ್ರಿಕಾ ಗೋಷ್ಠಿ.
ತಾಳಿಕೋಟೆ ಜೂ.30

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಾಳಿಕೋಟೆ ಪಟ್ಟಣದಲ್ಲಿ ಇಂದು ತಾಳಿಕೋಟೆ ರಾಜ್ಯದ್ಯಾಂತ ಸಾಮಾಜಿಕ, ಸಮಾನತೆಗಾಗಿ, ಭದ್ರತೆಗಾಗಿ, ಮತ್ತು ಅಸ್ಪೃಶ್ಯತೆ ನಿವಾರಣೆಗೆ, ಮತ್ತು ದಲಿತ ಜನಾಂಗದ ಬಡವರು ಮಹಿಳೆಯರು ಆರ್ಥಿಕ ಅಭಿವೃದ್ಧಿಗಾಗಿ ಸರ್ಕಾರದ ಯೋಜನೆಗಳ ಹಾಗೂ ಸಮಾಜದಲ್ಲಿನ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು, ಸಮಾಜದಲ್ಲಿ ಅನ್ಯಾಯಕ್ಕೆ ಒಳಗಾದ ವ್ಯಕ್ತಿಗೆ ನ್ಯಾಯ ಕೊಡಿಸುವುದು ಈ ಸಂಘಟನೆ ಮುಖ್ಯ ಉದ್ದೇಶ ಮತ್ತು ಗುರಿಯಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜ್ಯಾಧ್ಯಕ್ಷರಾದ ಬಸವರಾಜ ಕಟ್ಟಿಮನಿ, ಅಶೋಕ್ ಚಲವಾದಿ, ಶಿವಶಂಕರ್ ಕಟ್ಟಿಮನಿ, ಸಿದ್ದಪ್ಪ ಹೊಸಮನಿ, ಎಸ್.ಎಸ್.ಸಿ ಕೊಡಗಾನೂರು, ಸಿದ್ದಪ್ಪ ಬಸರಿಕಟ್ಟಿ, ಬಸವರಾಜ ತಳವಾರ, ಸದಾಶಿವ ತಳವಾರ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ