ರಾಷ್ಟೀಯ ಸಮಾಜ ಸೇವಾ ರತ್ನ ಪ್ರಶಸ್ತಿಗೆ – ಸಿ.ಹೆಚ್ ಉಮೇಶ್ ನಾಯ್ಕ್ ಭಾಜನ.
ದಾವಣಗೆರೆ ಜೂ.30

ಭಾರತೀಯ ಕಲಾ ಸಂಸ್ಕೃತಿಕ ಅಕಾಡೆಮಿ ದಾವಣಗೆರೆ 9 ನೇ. ವರ್ಷದ ವಾರ್ಷಿಕೋತ್ಸವ ಪ್ರಯುಕ್ತ ಬುದ್ಧ ಬಸವ ಮತ್ತು ಅಂಬೇಡ್ಕರ್ ಪ್ರಸ್ತುತ ವಿಚಾರ ಧಾರೆಯ ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಿತು.

29/6/2025 ಸಾನಿಧ್ಯ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಮುರಳೀಧರ ಸ್ವಾಮೀಜಿ ರವರು ವಿದ್ಯಾ ವರಣ್ಯ ಯೋಗೇಶ್ವರ ಯೋಗೇಶ್ವರ ಮಠ ಹದಡಿ ವಿಶೇಷ ಆಹ್ವಾನಿತರಾಗಿ ಡಾಕ್ಟರ್, ಗುಣವಂತ ಮಂಜು ಚಲನ ಚಿತ್ರನಟ ನಿರ್ದೇಶಕರು ಸಾಹಿತಿಗಳು ಮತ್ತು ಅಧ್ಯಕ್ಷರು ಆತ್ಮ ಶ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಬೆಂಗಳೂರು ಡಾಕ್ಟರ್, ಹೆಚ್.ವಿಶ್ವನಾಥ್ ಕುಲ ಸಚಿವರು ಮೌಲ್ಯಮಾಪನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮುಕ್ತ ಗಂಗೋತ್ರಿ ಮೈಸೂರು ಅಧ್ಯಕ್ಷತೆ ಶ್ರೀ ಎನ್.ಮಲ್ಲೇಶಪ್ಪ ಕುಕ್ಕವಾಡ ಸಂಸ್ಥಾಪಕ ಅಧ್ಯಕ್ಷರು ಭಾರತೀಯ ಸಂಸ್ಕೃತಿಕ ಅಕಾಡೆಮಿ ದಾವಣಗೆರೆ (ರಿ) ಇನ್ನೂ ಮುಂತಾದವರು ಭಾಗವಹಿಸಿದರು.

ಈ ಸಂದರ್ಭದಲ್ಲಿ 25 ವರ್ಷಗಳ ಕಾಲ ಜಾನಪದ ಸೇವೆ ಗುರುತಿಸಿ ಸಿ.ಹೆಚ್ ಉಮೇಶ್ ನಾಯ್ಕ್ ಚಿನ್ನ ಸಮುದ್ರ ಇವರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇನ್ನೂ ಹಲವು ಸಾಧಕರಿಗೆ ಸನ್ಮಾನ ಮಾಡಲಾಯಿತು ಎಂದು ವರದಿಯಾಗಿದೆ.