ವಕ್ಫ್ ರಕ್ಷಣಾ ಅಭಿಯಾನ 2025 – ಮಾನವ ಸರಪಳಿ.
ಮಾನ್ವಿ ಜೂ.30

ಇಂದು ಮಾನ್ವಿ ನಗರದಲ್ಲಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ (ಜಿ.ಐ.ಒ) ಮಾನ್ವಿ ಘಟಕ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಎಲ್ಲಾ ಸದಸ್ಯರು ಹಾಗೂ ಮಾನ್ವಿ ನಗರದ ಮಹಿಳೆಯರು ಮತ್ತು ಸಹೋದರಿಯರು ಬಸವ ಸರ್ಕಲ್ನಿಂದ ತಹಶೀಲ್ದಾರ್ ಕಚೇರಿ ವರೆಗೆ ಮಾನವ ಸರಪಳಿ ರಚಿಸಿ, ಕೇಂದ್ರ ಸರ್ಕಾರ ದಿಂದ ತಿದ್ದುಪಡಿ ಮಾಡಿದ ವಕ್ಫ್ ಕಾಯ್ದೆ 2025 ರ ವಿರೋಧದಲ್ಲಿ ಶಾಂತಿಯುತವಾಗಿ ಸರಪಳಿಯನ್ನು ಆಯೋಜಿಸಿ ತಹಶೀಲ್ದಾರರಿಗೆ ಮನವಿ ಪತ್ರ ನೀಡಿದರು.

ಇದರ ಪ್ರಮುಖ ಉದ್ದೇಶ ವಕ್ಫ್ ಕಾನೂನಿನ ತಿದ್ದುಪಡಿಯ ವಿರೋಧವಾಗಿದ್ದು, ವಕ್ಫ್ ರಕ್ಷಣೆಯ ಮೂಲಕ ಸಂವಿಧಾನದ ರಕ್ಷಣೆ ಮಾಡುವುದಾಗಿದೆ. ಶ್ರೀಮತಿ ನುಸ್ರತ್ ಜಹಾಂ , ಜಿಲ್ಲಾ ಅಧ್ಯಕ್ಷರು ಮಹಿಳಾ ಘಟಕ ಜಮಾತೆ ಇಸ್ಲಾಮಿ ಹಿಂದ್ ರಾಯಚೂರು. ಶ್ರೀಮತಿ ಇಶ್ರತ್ ಜಹಾಂ ಸ್ಥಾನೀಯ ಅಧ್ಯಕ್ಷರು ಜಮಾತೆ ಇಸ್ಲಾಮಿ ಹಿಂದ್ ಮಹಿಳಾ ಘಟಕ ಮಾನ್ವಿ. ಶ್ರೀಮತಿ ಆಯಿಷಾ ಸಿದ್ದಿಖಾ ಕಾರ್ಯದರ್ಶಿ ಮಹಿಳಾ ಘಟಕ ಜಮಾತೆ ಇಸ್ಲಾಮಿ ಹಿಂದ್ ಮಾನ್ವಿ.

ಶ್ರೀಮತಿ ಸಮ್ರೀನ್ ಬಾನು ಸಂಯುಕ್ತ ಕಾರ್ಯದರ್ಶಿ ಜಿ.ಐ.ಓ ಕರ್ನಾಟಕ, ಕು. ಆಯಿಷಾ ಖಾನಮ್ ಸ್ಥಾನೀಯ ಅಧ್ಯಕ್ಷೆ, ಜಿ.ಐ.ಓ ಮಾನ್ವಿ, ಕು.ಆಫೀಯ ಅಂಜುಮ್ ಸ್ಥಾನೀಯ ಕಾರ್ಯದರ್ಶಿ ಜಿ.ಐ.ಓ ಮಾನ್ವಿ, ಜಮಾತೆ ಇಸ್ಲಾಮಿ ಹಿಂದು. ತಾಲೂಕ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಸಾಬ್. ಸದಸ್ಯರಾದ. ದಾವುದ್ ಸಿದ್ದಿಕಿಸಾಬ್. ಅಬ್ದುಲ್ ಕರೀಮ್ ಖಾನ್ ಸಾಬ್. ಅಬ್ದುಲ್ ರೌಫ್ ಸಾಬ್. ಶೇಕ್ ಬಾಬಾ ಹುಸೇನ್ ಸಾಬ್. ಶೇಕ್ ಫರೀದ್ ಉಮ್ರಿ. ಎಂ.ಎ.ಎಚ್ ಮುಕೀಮ್. ನಾಸಿರ್ ಅಲಿ. ಮಹಿಳಾ ಘಟಕದ. ಜೀ.ಐ.ಓ ಸದಸ್ಯರು ಎಸ್.ಐ.ಓ ಸದಸ್ಯರು. ಎಸ್.ವೈ.ಎಂ ಸದಸ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ