ರೂಡಗಿ ಗ್ರಾಮದ ತಹಶೀಲ್ದಾರ್ ಶಿವಪ್ಪ.ಹೆಚ್ ಲಮಾಣಿಯವರ – ನಿವೃತ್ತಿಯ ಅಭಿನಂದನಾ ಸಮಾರಂಭ ಕಾರ್ಯಕ್ರಮ ಜರಗಿತು.

ರೂಡಗಿ ಏ.01

ಬಡತನದಲ್ಲಿ ಹುಟ್ಟಿದರೂ ಕೂಡ ಬಡತನದಲ್ಲಿ ಸಾಯಬಾರದು ಕಲಿಯುವ ಛಲ ಇರಬೇಕು ಸಾಧಿಸುವ ಗುರಿ ಇರಬೇಕು ನಮ್ಮ ಸಾಧನೆಗೆ ಬಡತನದ ಯಾವತ್ತೂ ಕಾರಣ ವಾಗಬಾರದು ಎಂದು ನಿವೃತ್ತಿ ತಹಶೀಲ್ದಾರ್ ಶಿವಪ್ಪ ಲಮಾಣಿ ಅವರು ತಮ್ಮ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ರೂಡಗಿ ಗ್ರಾಮದ ನಿವೃತ್ತಿ ತಹಶೀಲ್ದಾರ್ ಶಿವಪ್ಪ.ಎಚ್ ಲಮಾಣಿ ಅವರು ತಮ್ಮ ಮೊದಲು ಸರ್ಕಾರಿ ಸೇವೆಗೆ ತಮ್ಮ 18 ನೇ. ವಯಸ್ಸಿನಲ್ಲಿ ಭಾರತೀಯ ಸೇನೆಗೆ ಸೇರ್ಪಡೆ ಗೊಂಡರು ಅಲ್ಲಿ 19 ವರ್ಷ ಸೇವೆ ಸಲ್ಲಿಸಿದರು. ನಂತರ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 5 ವರ್ಷ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಂತರ ಕೆ.ಎ.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ 17 ವರ್ಷ ತಶಿಲ್ದಾರರಾಗಿ ಸೇವೆ ಸಲ್ಲಿಸಿ ಕೊನೆಯದಾಗಿ ಪುರಸಭೆ ತಹಶೀಲ್ದಾರರು ಜಿಲ್ಲಾಧಿಕಾರಿಗಳ ಕಚೇರಿ ಬಾಗಲಕೋಟೆ ಜಿಲ್ಲೆಯಲ್ಲಿ ಮಾರ್ಚ್ 29 ಶನಿವಾರ ದಂದು ನಿವೃತ್ತಿ ಯಾದರು.

ಶಿವಪ್ಪ.ಲಮಾಣಿ ಅವರು ಮಾತನಾಡಿ ನಾವು ಸಾಲಿ ಕಲಿಯುವಾಗ ನಾನು ನಿವೃತ್ತಿ ತಹಶೀಲ್ದಾರ್ ಮಾರ್ಚ್ 30 ರವಿವಾರ ದಂದು ಸಾಯಂಕಾಲ 6 ಗಂಟೆಗೆ ರೂಢಿಗಿ ಗ್ರಾಮದ ಸರ್ಕಾರಿ ಶಾಲೆಯಿಂದ ಡಿಜೆ ಸೌಂಡ್ ದೊಂದಿಗೆ ಯುವಕರು ಯುವತಿಯರು ಕುಣಿದು ಕೊಪ್ಪಳಿಸುತ್ತಾ ಶ್ರೀ ಸೇವಾಲಾಲ್ ಮಹಾ ರಾಜರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ನಿವೃತ್ತಿ ಅಭಿನಂದನ ಸಮಾರಂಭದ ವೇದಿಕೆ ಯವರಿಗೆ ಶ್ರೀ ಶಿವಪ್ಪ.ಎಚ್ ಲಮಾಣಿ ಇವರನ್ನು ಕರೆ ತರಲಾಯಿತು.

ಸಮಾರಂಭದಲ್ಲಿ ರೂಢಿಗಿ ಗ್ರಾಮ ಮತ್ತು ತಾಂಡಾದ ಹಿರಿಯರು ಸಮಾಜದ ಬಾಂಧವರು ಹಾಗೂ ಸ್ನೇಹಿತರು ಸೇರಿದಂತೆ ಅನೇಕ ಜನರು ನಿವೃತ್ತಿ ತಹಶೀಲ್ದಾರರ ಶಿವಪ್ಪ.ಎಚ್ ಲಮಾಣಿ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button