ಪೀರಾಪೂರ ಏತ ನೀರಾವರಿ ಯೋಜನೆಯ ಎಫ್.ಐ.ಸಿ ನಿರ್ಮಾಣಕ್ಕೆ – ರೈತರಿಂದ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ.
ಬೂದಿಹಾಳ ಜು.12

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೂದಿಹಾಳ ಗ್ರಾಮದ ಪೀರಾಪೂರ ಏತ ನೀರಾವರಿ ಯೋಜನೆಯ ಕೊನೆ ಹಂತದ ಎಫ್.ಐ.ಸಿ (ಹೊಲ ಗಾಲುವೆ) ನಿರ್ಮಾಣಕ್ಕೆ ಆಗ್ರಹಿಸಿ 38 ಗ್ರಾಮಗಳ ರೈತರು ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಕೊಡಗಾನೂರ ಗ್ರಾಮದ ಕ್ರಾಸ್ ಬಳಿ ನಡೆಯುತ್ತಿರುವ ಈ ಧರಣಿಗೆ ರೈತ ಮುಖಂಡರು, ಸಮಾಜ ಸೇವಕರು ಬೆಂಬಲ ಸೂಚಿಸಿದ್ದಾರೆ.ಯೋಜನೆ ಶೇ.90 ರಷ್ಟು ಕಾಮಗಾರಿ ಪೂರ್ಣ ಗೊಂಡಿದ್ದು, ಕೇವಲ 10% ಕಾಮಗಾರಿ ಬಾಕಿ ಉಳಿದಿದೆ. ಈ ಕಾಮಗಾರಿಗೆ 170 ಕೋಟಿ ರೂ. ಅನುದಾನ ಬೇಕಾಗಿದ್ದು. ಕಾಲುವೆ ನಿರ್ಮಾಣವಾದರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು. ಬೇಡಿಕೆ ಈಡೇರಿಸದಿದ್ದರೆ ಇನ್ನಷ್ಟು ಉಗ್ರವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ರೈತ ಮುಖಂಡರಾದ ಪ್ರಭುಗೌಡ ಬಿರಾದಾರ (ಅಸ್ಕಿ), ಸುರೇಶಕುಮಾರ ಪೀರಾಪೂರ, ಸಾಹೇಬಗೌಡ ಯಾಳಗಿ ಅವರು ಮಾತನಾಡಿದರು. ನಾಡಿನ ಖ್ಯಾತ ನೇತ್ರ ತಜ್ಞ, ಸಮಾಜ ಸೇವಕ ಡಾಕ್ಟರ್ ಪ್ರಭುಗೌಡ ಲಿಂಗದಳ್ಳಿ, ಅಂಬೇಡ್ಕರ್ ಸೇನೆ ತಾಳಿಕೋಟಿ ತಾಲೂಕ ಘಟಕದ ಪದಾಧಿಕಾರಿಗಳು ಧರಣಿ ನಿರತಕ್ಕೆ ಬೆಂಬಲ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಬಾಲಪ್ಪಗೌಡ ಲಿಂಗದಳ್ಳಿ, ಮಲ್ಲನಗೌಡ ಪೊಲೀಸ್ ಪಾಟೀಲ, ಅಶೋಕ ಅಸ್ಕಿ, ಶಂಕರಗೌಡ ದೇಸಾಯಿ, ಪ್ರಭುಗೌಡ ಬಿರಾದಾರ, ರಾಯನಗೌಡ ನೀರಲಗಿ, ಆನಂದಗೌಡ ಪಾಟೀಲ, ಮಲ್ಲನಗೌಡ ಬಿರಾದಾರ, ರಾಜುಗೌಡ ಇಬ್ರಾಹಿಂಪೂರ, ಶಿವಪುತ್ರ ಚೌದರಿ, ಗುರುರಾಜ ಪಡಶೆಟ್ಟಿ, ಬಸ್ಸು ಮಾದರ, ಗೋಪಾಲ್ ಕಟ್ಟಿಮನಿ, ರಾಮನಗೌಡ ಹಾದಿಮನಿ, ಸಂಗನಗೌಡ ಕೋಳೂರು ಹಾಗೂ ಶ್ರೀನಿವಾಸ್ ಗೊಟಗುಣಕಿ ಇದ್ದರು.ಸಿ.ಪಿ.ಐ ಮೊಹಮ್ಮದ್ ಫಸೀವುದ್ದೀನ ಅವರ ನೇತೃತ್ವದಲ್ಲಿ ಪಿ.ಎಸ್.ಐ ಆರ್.ಎಸ್.ಭಂಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ..ಮನಗೂಳಿ.ತಾಳಿಕೋಟೆ