ಡಾ, ಪ್ರಸನ್ನ ನಾಡಿಗರ್ ರವರಿಗೆ ಸ್ಟಾರ್ ಆಫ್ – ಕರ್ನಾಟಕ ಪ್ರಶಸ್ತಿ ಪ್ರಧಾನ.

ಬೆಂಗಳೂರು ಜು.17

ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್ ಕರ್ನಾಟಕ ಹಾಗೂ ರೋಟರಿ ಕ್ಲಬ್ ಆಫ್ ಬೆಂಗಳೂರು ಜಯನಗರ ದಿನೇಶ್ ಫೌಂಡೇಶನ್ ಆಯೋಜಿಸಿದ ಕನ್ನಡ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಡಾ, ಪ್ರಸನ್ನ ನಾಡಿಗೇರ ರವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿ ಸ್ಟಾರ್ ಆಫ್ ಕರ್ನಾಟಕ ನೀಡಿ ತಮ್ಮನ್ನು ತಾವು ತೊಡಗಿಸಿ ಕೊಳ್ಳುವುದರ ಜೊತೆಗೆ ಕಲೆ ಸಾಹಿತ್ಯ ಸಂಘಟನೆ ನಿಟ್ಟಿನಲ್ಲಿ ಸ್ಟಾರ್ ಆಫ್ ಕರ್ನಾಟಕ 2025 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಆರೂಡ ಭಾರತಿ ಮಹಾಸ್ವಾಮಿಗಳು ಸಿದ್ದಾರೂಢ ಮಿಶನ್ ಟ್ರಸ್ಟ್ ರಾಮ ಹಳ್ಳಿ, ಖ್ಯಾತ ಸಾಹಿತಿಗಳಾದ ಬೈರ ಮಂಗಲ ರಾಮೇಗೌಡ , ಹಿರಿಯ ಸಾಹಿತಿ ಸಿ.ಸಿ ರಾಮಲಿಂಗೇಶ್ವರ, ಕಾವ್ಯಶ್ರೀ ಚಾರಿ ಟಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಡಾ, ಶಿವಣ್ಣ ಜಿ, ಚೇತನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ಡಾ, ಚಂದ್ರಶೇಖರ ಮಾಡಲಗೇರಿ, ದಿನೇಶ್ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು ದಿನೇಶ್ ನಾಯಕ್, ರೋಟರಿ ಕ್ಲಬ್ ಬೆಂಗಳೂರು ರೋಟರಿಯನ್ ಡಾ, ಪುರುಷೋತ್ತಮ್ ಬಂಗ್, ಚಲನ ಚಿತ್ರ ನಟಿಯಾರಾದ ಮಾಲತಿಶ್ರೀ ಮೈಸೂರು, ಸಂಗಮನಾಥಪಿ ಸಜ್ಜನ, ಭಾಗ್ಯಶ್ರೀ ರಜಪೂತ, ಸಂಗೀತ ಮಠಪತಿ, ಕೆಎಸ್ ವೀರೇಶ್, ಹೇಮಾವತಿ ಡಾ, ಶಿವಣ್ಣ ಜಿ, ಸೇರಿದಂತೆ ಸ್ಟಾರ್ ಕರ್ನಾಟಕ ಪ್ರಶಸ್ತಿ ಪುರಸ್ಕೃತರು, ಸದ್ಗುರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರಾಜ್ಯದ ಅತ್ಯುತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಿತು. ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಡಾ, ಪ್ರಸನ್ನ ನಾಡಿಗೇರ್ ಸ್ಟಾರ್ ಆಫ್ ಕರ್ನಾಟಕ ಪ್ರಶಸ್ತಿ ಪುರಸ್ಕೃತ ಅಭಿಮಾನಿಗಳು ಹಿತೈಷಿಗಳು ಸೇರಿದಂತೆ ಅನೇಕರು ಅಭಿನಂದನೆಗಳು ಸಲ್ಲಿಸಿದ್ದಾರೆ.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button