ನಿಧನ ವಾರ್ತೆ : ನೆಲ್ಲಕುದುರೆ ತರಕಾರಿ ಹಾಲಮ್ಮ – ನಿಧನ.
ಕೂಡ್ಲಿಗಿ ಜು.17

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ 2 ನೇ. ವಾರ್ಡಿನ ಉಡಸಲಮ್ಮ ಕಟ್ಟೆಯ ಏರಿಯ ಮೇಲೆ ವಾಸವಿದ್ದು ತರಕಾರಿ ಹಾಲಮ್ಮ (80) ಇಂದು (ಜುಲೈ 17) ಮುಂಜಾನೆ 9 ಗಂಟೆಗೆ ತಮ್ಮ ಸ್ವಗೃಹದಲ್ಲಿ ವಯೋ ವೃದ್ಧರಾಗಿ ನಿಧನರಾಗಿದ್ದಾರೆ. ಅವರು ಜೀವನೋಪಾಯಕ್ಕೆ ತರಕಾರಿ ಮಾರಾಟದ ಅಂಗಡಿ ಮಾಡಿಕೊಂಡಿದ್ದು ಮೃತರು ಇವರ ಕುಟುಂಬದಲ್ಲಿ ಇಬ್ಬರು ಮಕ್ಕಳು ಮೊಮ್ಮಕ್ಕಳಿದ್ದು. ತುಂಬು ಕುಟುಂಬವನ್ನು ಹೊಂದಿದವರಾಗಿದ್ದರು. ಅಂತ್ಯಕ್ರಿಯೆ – ಜುಲೈ 17 ರಂದು ಗುರುವಾರ ಮದ್ಯಾಹ್ನ 3 ಗಂಟೆಗೆ ಪಟ್ಟಣದ 16 ನೇ. ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಸಂತಾಪ ಮಗಳಾದ ಮರಿಯಮ್ಮ ಹಾಗೂ ಚಾರೇಪ್ಪರವರ ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಅಗಲಿಕೆಯಿಂದಾಗಿ ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು ದುಖಃ ತಪ್ತರಾಗಿದ್ದಾರೆ. ಸಮುದಾಯದವರು ಸೇರಿದಂತೆ. ವಿವಿಧ ಸಮುದಾಯದವರು. ಕೂಡ್ಲಿಗಿ ಗ್ರಾಮದ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು ವಿವಿಧ ಜನ ಪ್ರತಿನಿಧಿಗಳು ಕೂಡ್ಲಿಗಿ ತಾಲೂಕಿನ ಸಮಸ್ತ ಮಾದಿಗ ಸಮುದಾಯದ ಎಲ್ಲಾ ಸಂಘಟನೆಗಳು. ಕಾರ್ಮಿಕರ ಮಹಿಳಯರ ರೈತರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳವರು. ವಿವಿಧ ಪಕ್ಷಗಳ ಪ್ರಮುಖರು ಸಮಾಜ ಸೇವಕರು ಹೋರಾಟಗಾರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ. ಬಿ.ಸಾಲುಮನೆ.ಕೂಡ್ಲಿಗಿ