ಶ್ರೀ ಶಿವಯೋಗಿ ಸಿದ್ರಾಮೇಶ್ವರ ಪುರಾಣ, ಪ್ರವಚನ – ಕಾರ್ಯಕ್ರಮ ಪ್ರಾರಂಭ.

ಕೋರವಾರ ಜು.26

ದೇವರ ಹಿಪ್ಪರಗಿ ತಾಲ್ಲೂಕಿನ ಕೋರವಾರ ಗ್ರಾಮದಲ್ಲಿ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಶ್ರಾವಣ ಮಾಸದ ಪ್ರಯುಕ್ತವಾಗಿ ಶ್ರೀ ಶಿವಯೋಗಿ ಸಿದ್ರಾಮೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವು ದಿನಾಂಕ 25-07-2025 ರಿಂದ 03-09-2025 ರ ವರೆಗೆ ಪ್ರತಿ ದಿನ ಸಂಜೆ 7 ಗಂಟೆ ಯಿಂದ 9 ಗಂಟೆಯ ವರಗೆ ನೆರೆವೇರುವುದು. ಇದೇ ಸಂದರ್ಭದಲ್ಲಿ ವಚನೋಸ್ಥವ ಪುಸ್ತಕ ಬಿಡುಗಡೆ ಮಾಡಲಾಯಿತು.

ಶ್ರೀ ಸಂಗಙಗೌಡ ಶಂಕರಗೌಡ ಪಾಟೀಲ, ನಿವೃತ್ತ ಶಿಕ್ಷಕರು, ಅಗಸಬಾಳ, ಕಾರ್ಯಕ್ರಮದ ಘನ ಅಧ್ಯಕ್ಷತೆಯು, ಶ್ರೀ ಷ.ಬ್ರ ಬಸವಲಿಂಗ ಶಿವಾಚಾರ್ಯ ಸಂಸ್ಥಾನ ಹಿರೇಮಠ ಕೋರವಾರ ವಹಿಸಿದರು, ಸಾನಿದ್ಯ,ಶ್ರೀ ಷ.ಬ್ರ ಚಂದ್ರಶೇಖರ ಶಿವಾಚಾರ್ಯ ಶ್ರೀಗುರು ಸಂಸ್ಥಾನ ಮಠ ಆಲಮೇಲ, ಸಮ್ಮುಖ,ಶ್ರೀ ಶ್ರೋ ಬ್ರ ಅಬಿನವ ಮುರಗೇಂದ್ರ ಮಹಾ ಸ್ವಾಮಿಗಳು ಚೌಕಿಮಠ, ಕೋರವಾರ, ಪೂಜ್ಯ ಶ್ರೀ ರೇವಣಸಿದ್ದ ದೇವರು ಗುಳೇದಗುಡ್ಡ.

ಶ್ರೀ ವೇ.ಮೂ ವಿರೂಪಾಕ್ಷಯ್ಯ ಸ್ವಾಮಿಗಳು ಹಿರೇಮಠ ಆಲಮೇಲ, ಪುರಾಣ ಪ್ರವಚನಕಾರಾದ ಪೂಜ್ಯ ಶ್ರೀ ವೀರಬಸವದೇವರು, ಗದ್ದುಗೆಶ್ವರ ಮಠ ಹಿರೇಆಸಂಗಿ ತಾಲ್ಲೂಕು ಕೋಲಾರ, ಸಂಗೀತಾ ಸೇವೆ, ಶ್ರೀ ಭಾಗೇಶ ರಾಣಾಪೂರ, ಶ್ರೀವೀರೇಶ್ವರ ಪುಣ್ಯಾಶ್ರಮ ಗದಗ, ತಬಲಾವಾದಕರು, ಶ್ರೀ ಮಹಾಂತೇಶ ನರಿಬೋಳಿ, ಶ್ರೀ ವೀರೇಶ್ವರ ಪುಣ್ಯಾಶ್ರಮ ಗದಗ, ಹಾಗೂ ಗ್ರಾಮದ ಮುಖಂಡರು ಭಕ್ತಾಧಿಗಳು ಉಪಸ್ಥಿತರಿದ್ದರು.

ತಾಲ್ಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button