ಶಾಲಾ ಮಕ್ಕಳಲ್ಲಿ ಡೆಂಗ್ಯೂ ರೋಗ ತಡೆಗೆ – ಮುಂಜಾಗ್ರತೆ ಆರೋಗ್ಯ ಅರಿವು ಜಾಗೃತಿ.

ಅಮೀನಗಡ ಆ.04

ಹುನಗುಂದ ತಾಲೂಕಿನ ಅಮೀನಗಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಾಗಲಕೋಟ, ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳು ಬಾಗಲಕೋಟ, ಪ್ರಾಥಮಿಕ ಆರೋಗ್ಯ ಕೇಂದ್ರ ಅಮೀನಗಡ ಸಹಯೋಗದಲ್ಲಿ ಸರಕಾರಿ ಉರ್ದು ಪ್ರೌಢ ಶಾಲೆ ಅಮೀನಗಡದಲ್ಲಿ “ಡೆಂಗ್ಯೂ ಚಿಕೂನ್ ಗುನ್ಯಾ ರೋಗ ತಡೆ ಮುಂಜಾಗ್ರತೆ ಆರೋಗ್ಯ ಅರಿವು ಜಾಗೃತಿ ಆಯೋಜಿಸಲಾಗಿತ್ತು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಡೆಂಗ್ಯೂ, ಚಿಕೂನ್ ಗುನ್ಯಾ ರೋಗ ಸೋಲಿಸಲು ನೀರಿನ ಸಂಗ್ರಹಗಳ ಪರೀಶೀಲನೆ, ಸ್ವಚ್ಛ ಗೊಳಿಸುವುದು, ಮುಚ್ಚಿಡಿವುದು ಎಂಬ ಘೋಷವಾಕ್ಯ ಯೊಂದಿಗೆ ಸೊಳ್ಳೆಗಳ ಕಚ್ಚುವಿಕೆಯಿಂದ ಮಲೇರಿಯಾ, ಡೆಂಗ್ಯೂ, ಚಿಕೂನ್ ಗುನ್ಯಾ, ಮೆದಳು ಜ್ವರ, ಆನೆಕಾಲು ರೋಗಗಳು ಒಬ್ಬರಿಂದ ಒಬ್ಬರಿಗೆ ಹರಡುವವು, ಡೆಂಗ್ಯೂ ಚಿಕೂನ್ ಗುನ್ಯಾ ರೋಗವು “ಈಡಿಸ್ ಈಜಿಪ್ತೆ” ಸೊಳ್ಳೆಗಳು ಸಂಗ್ರಹಿಸಿದ ಸ್ವಚ್ಛವಾದ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗಿ ಸೊಳ್ಳೆಗಳು ಹಗಲಿನಲ್ಲಿ ಕಚ್ಚುವದು, ಮನೆ ಸುತ್ತ ಮುತ್ತ ಟೆಂಗಿನ ಚಿಪ್ಪು, ಒಡೆದ ಬಾಟಲ್, ಟಾಯರ್ ಟ್ಯೂಬ್, ಕೂಲರ್ ಫ್ರೀಜ್ ನೀರಿನ ಸಂಗ್ರಹ ಸ್ವಚ್ಛತಾ ಗೊಳಿಸಿ, ಲಾರ್ವಾ ಉತ್ಪತ್ತಿ ತಡೆಯಬೇಕು, ನೀರಿನ ಸಂಗ್ರಹಗಳ ಮೇಲೆ ತಪ್ಪದೇ ಮುಚ್ಚಳಿಕೆ ಹಾಕಬೇಕು. ನಿಶಕ್ತಿ ವಿಪರೀತ ಜ್ವರ, ತಲೆ ನೋವು, ಯಾವುದೇ ತರಹ ಜ್ವರ ಕಾಣಿಸಿದರೆ ನಿರ್ಲಕ್ಷ್ಯ ಬೇಡ ಹತ್ತಿರದ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆ ಚಿಕಿತ್ಸೆ ಸಲಹೆ ಪಡೆಯಿರಿ ಹಾಗೂ ಕೈಗಳ ತೊಳೆಯುವ ವಿಧಾನಗ ಬಗ್ಗೆ ಮಾಹಿತ ನೀಡಿದರು. ಡೆಂಗ್ಯ ರೋಗ ತಡೆ ಆರೋಗ್ಯ ಅರಿವು ಕಾರ್ಯಕ್ರಮದಲ್ಲಿ, ಸರಕಾರಿ ಉರ್ದು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಎಮ್ ಎ ನಾಯಕ, ಸಹಶಿಕ್ಷಕರಾದ ಬಿ ಎಮ್ ಹಳ್ಳೂರ, ಜಡ್ ಬಿ ಮಕಾನದಾರ, ಶ್ರೀಮತಿ ಎಫ್ ಎ ಚಿನ್ನಾಪೂರ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button