ವಿಶ್ವ ಬುಡಕಟ್ಟು – ದಿನ ಆಚರಣೆ.
ಇಂಡಿ ಆ.11





ಇಲ್ಲಿನ ಸ್ಥಳೀಯ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಇಂಡಿಯಲ್ಲಿ ಕನ್ನಡ ಜಾನಪದ ಪರಿಷತ್ತು ತಾಲೂಕ ಘಟಕ ಇಂಡಿ ವತಿಯಿಂದ ವಿಶ್ವ ಬುಡಕಟ್ಟು ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಜಾಪ ಅಧ್ಯಕ್ಷರಾದ ಶ್ರೀ ಪಿ.ಬಿ ಅವಜಿ ಯವರು ವಹಿಸಿ ಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಇಂಡಿಯ ನೌಕರರ ಸಂಘದ ನಿರ್ದೇಶಕರಾದ ಶ್ರೀ ಎಸ್.ಆರ್ ಪಾಟೀಲ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಭಾರತ ಹಲವಾರು ಸಂಸ್ಕೃತಿಗಳ ತವರು ಆದಿವಾಸಿಗಳ ಸಂಸ್ಕೃತಿ, ಪರಂಪರೆಗೆ ತನ್ನದೇ ಆದ ಇತಿಹಾಸವಿದ್ದು, ಅದನ್ನು ನಾವೆಲ್ಲರೂ ಗೌರವಿಸ ಬೇಕು ಎಂದರು. ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ, ಶ್ರೀ ರವಿ ಅರಳಿಯವರು’ ಜಾಗತಿಕವಾಗಿ ಸ್ಥಳೀಯ ಸಮುದಾಯಗಳ ಶ್ರೀಮಂತ ಸಾಂಸ್ಕೃತಿಕ ವೈವಿದ್ಯತೆ, ಪರಂಪರೆ ಮತ್ತು ಕೊಡುಗೆಗಳನ್ನು ಗಮನದಲ್ಲಿಟ್ಟು ಕೊಳ್ಳಲು ವಿಶ್ವದ ಸ್ಥಳೀಯ ಜನರ ಅಂತರರಾಷ್ಟ್ರೀಯ ದಿನವೂ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ.

ಆದಿವಾಸಿ ಜನರು ಜಾಗತಿಕ ಜನಸಂಖ್ಯೆ ಐದು ಪ್ರತಿ ಶತಕ್ಕಿಂತ ಕಡಿಮೆ ಇದ್ದರೂ ಅವರ ವಿಶ್ವದ ಬಡ ಜನರಲ್ಲಿ 15 ಪ್ರತಿ ಶತದ ಪಾಲಿನಲ್ಲಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಪಿ.ಬಿ ಅವಜಿ ಯವರು ಆದಿವಾಸಿ ಜನರ ಯೋಗ ಕ್ಷೇಮ ಘನತೆ ಮತ್ತು ಒಳ ಗೊಳ್ಳುವಿಕೆಯನ್ನು ಖಚಿತ ಪಡಿಸಿ ಕೊಳ್ಳಲು ಸರಕಾರಗಳು ಸಂಸ್ಥೆಗಳು ಮತ್ತು ಸಮಾಜಗಳ ನಡುವಿನ ಸಹಯೋಗದ ಅಗತ್ಯವನ್ನು ಈ ದಿನಾಚರಣೆಯು ಎತ್ತಿ ತೋರಿಸುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಶ್ರೀ ಸಿದ್ದು ಅರಳಗುಂಡಗಿ, ಶ್ರೀ ಮಲ್ಲಿಕಾರ್ಜುನ ನೇದಲಗಿ, ಶ್ರೀ ಜಟ್ಟೆಪ್ಪ ಮಾದರ, ಶ್ರೀ ಅಶೋಕ ಹೊಸಮನಿ, ಶ್ರೀ ಸಾಗರ ಮಾನೆ ಹಾಗೂ ಸಂಗಡಿಗರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಟ್ಟರು. ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶ್ರೀಮತಿ ಬಿ.ಸಿ ಭಗವಂತಗೌಡರ ನಿರೂಪಿಸಿದರು. ಶ್ರೀ ಜಟ್ಟೆಪ್ಪ.ಮಾದರ ವಂದಿಸಿದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶಿವಾನಂದ.ಬಿ.ಹರಿಜನ.ಇಂಡಿ