ಗ್ರಾ.ಪಂ ಯಲ್ಲಿ 79 ನೇ. ಸ್ವಾತಂತ್ರ್ಯ ದಿನಾಚರಣೆ – ಅದ್ಧೂರಿ ಯಿಂದ ಆಚರಣೆ.
ಯಲಗೋಡ ಆ.15

ದೇವರ ಹಿಪ್ಪರಗಿ ತಾಲ್ಲೂಕಿನ ಭಾರತದ ಅತ್ಯಂತ ಮಹತ್ವವಾದ ಹಬ್ಬವೆಂದರೆ ಅದು ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಪ್ರತಿಯೊಂದು ಸರ್ಕಾರಿ ಇಲಾಖೆ ಹಾಗೂ ಸಂಘ ಸಂಸ್ಥೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತಾರೆ.ತಾಲ್ಲೂಕಿನ ಯಲಗೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಇಂದು ನಡೆದ 79. ನೇಯ ಸ್ವಾತಂತ್ರ್ಯೋತ್ವದ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ರೂಪಾಶ್ರೀ. ಚಂದ್ರಶೇಖರ ಅಸ್ಕಿಯವರು ಧ್ವಜಾರೋಹಣ ನೆರವೇರಿಸಿದರು. ಹಾಗೂ ವೆಂಕಟೇಶ್ವರ ಪ್ರೌಢ ಶಾಲೆಯಲ್ಲಿ ಗ್ರಾಮದ ಗಣ್ಯರಾದ ಅಣ್ಣಪ್ಪಗೌಡ ಪಾಟೀಲ ಇವರಿಂದ ಧ್ವಜಾರೋಹಣ ಮಾಡಿದರು. ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ದೂಡ್ಡಮನಿ ಇವರಿಂದ ಧ್ವಜಾರೋಹಣ ಮಾಡಿದರು. ಹಾಗೂ ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ ಯವರಿಂದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದರು. ಹಾಗೂ ಸಂಗೊಳ್ಳಿ ರಾಯಣ್ಣನವರ ಸರ್ಕಲ್ ಹತ್ತಿರ ಸ್ವಾತಂತ್ರ್ಯ ದಿನಾಚರಣೆ ಮಾಡಿದರು.

ಗ್ರಾಮದ ಉರ್ದು ಪ್ರಾಥಮಿಕ ಶಾಲೆಯಲ್ಲಿ ಬಸರಿ ವಸ್ತಿ ಶಾಲೆಯಲ್ಲಿ ತಾಂಡಾ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ, ಸ್ವಾತಂತ್ರ್ಯೋತ್ವದ ದಿನಾಚರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಅಣ್ಣಪ್ಪಗೌಡ ಪಾಟೀಲ, ರಾಜಪಟೇಲ್ ಕಣಮೇಶ್ವರ ಬಾಬು ಕೇತ್ನಾಳ ಸಾಯಬಣ್ಣ ಬಾಗೇವಾಡಿ ಹುಯೋಗಿ ತಳ್ಳೋಳ್ಳಿ ಇವರು ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ ಹಡಪದ ಪಿಕೆಪಿಎಸ್ ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಾಹಕರಾದ ಮಡಿವಾಳಪ್ಪ ಹಿಕ್ಕನಗುತ್ತಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಬಸವಂತ ಉಣಿಬಾಯಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಮಹಮ್ಮದ ರಪೀಕ್ ಕಣಮೇಶ್ವರ ಬೂತಾಳಿ ಇಂಗಳಗಿ ಶಿವಶಂಕರ ಬೂದಿಹಾಳ ಶೇಖಪ್ಪ ಹಿರೇಕುರಬರ, ಮಶಾಖ ನಧಾಪ್, ಅಪುಗೌಡ ಬಿರಾದಾರ ಬಸಲಿಂಗಪ್ಪ ಜ್ಯಾಯಿ ಪ್ರಕಾಶ ರಾಠೋಡ, ಹಾಗೂ ಸಿಬ್ಬಂದಿಗಳು, ಪಿಕೆಪಿಎಸ್ ಉಪಾಧ್ಯಕ್ಷರಾದ ಬಸವರಾಜ ಇಂಗಳಗಿ, ಸದಸ್ಯರಾದ ರಾಜುಗೌಡ ಪಾಟೀಲ, ಸಂತೋಷ ಹಚ್ಯಾಳ ಬಾಬು ಕೇತ್ನಾಳ ಮಲ್ಲಕಪ್ಪ ಹಿರೇಕುರಬರ ಶಿವಾಪುತ್ರ ಬೂದಿಹಾಳ, ಹಾಗೂ ಸಿಬ್ಬಂದಿಗಳು, ಗ್ರಾಮದ ಪೂಜಾರಾದ ರಾಜಶೇಖರಯ್ಯ ಹಿರೇಮಠ, ಹಾಗೂ ಮುಖಂಡರಾದ ಚಂದ್ರಶೇಖರ ಅಸ್ಕಿ ಬಾಬು ಬಾಗೇವಾಡಿ ಮಾಂತೇಶ ಕೂಟನೂರ ಸೋಮಶೇಖರ್ ಹೂಸಮನಿ ಮಾಂತೇಶ ತಳ್ಳೋಳ್ಳಿ ಹಾಗೂ ಎಲ್ಲಾ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ವಿವಿಧ ಸಂಘಟನೆ ಮುಖಂಡರು, ಗ್ರಾಮದ ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕು ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ