ಜಿ.ಕೆ ಕ್ರಾಸ್ ನಲ್ಲಿರುವ ವಿದ್ಯಾ ಸಾಗರ ಶಾಲೆಯಲ್ಲಿ 79 ನೇ. ಸ್ವಾತಂತ್ರ್ಯ ದಿನಾಚರಣೆಯನ್ನು – ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಆನಗೋಡು ಆ.16

ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನ ಆನಗೋಡ ಹೋಬಳಿಯ ಸಮೀಪದ ಇಂದು ಜಿ.ಕೆ ಕ್ರಾಸ್ ನಲ್ಲಿರುವ ವಿದ್ಯಾ ಸಾಗರ ಶಾಲೆಯಲ್ಲಿ 79 ನೇ. ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಆಡಳಿತಾಧಿಕಾರಿಯಾದ ಶ್ರೀಮತಿ ರಾಜೇಶ್ವರಿ ಚಿದಾನಂದ್ ರವರು ವಹಿಸಿದ್ದರು. ಹಾಗೂ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಾನಪದ ಕಲಾವಿದರು ಹಾಗೂ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಅಕಾಡೆಮಿ ಪ್ರಶಸ್ತಿ ಹಾಗೂ ಮುಂತಾದ ಪ್ರಶಸ್ತಿಗಳ ವಿಜೇತರಾದಂತಹ ಶ್ರೀಯುತ ಉಮೇಶ್ ನಾಯಕ್ ಅವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ಸ್ವಾಗತ ಭಾಷಣವನ್ನು ವಿದ್ಯಾ ಸಾಗರ ಶಾಲೆಯ ಶಿಕ್ಷಕಿಯಾದ ಕುಮಾರಿ ಅಂಜಲಿಯವರು ನಡೆಸಿ ಕೊಟ್ಟರು. ಹಾಗೂ ನಿರೂಪಣೆ ಕಾರ್ಯಕ್ರಮವನ್ನು ಶಾಲೆಯ ಮುದ್ದು ಮಕ್ಕಳೇ ಅತಿ ಸುಂದರವಾಗಿ ನಡೆಸಿ ಕೊಟ್ಟರು. ಈ ಒಂದು ಕಾರ್ಯಕ್ರಮದಲ್ಲಿ ಪ್ರತಿ ತರಗತಿಯ ಮಕ್ಕಳು ಭಾರತೀಯ ಸ್ವಾತಂತ್ರ್ಯತೆಯನ್ನು ಸಾರುತ್ತಾ ಭಾಷಣವನ್ನು ಮಾಡಿದರು. ಹಾಗೂ ನಮ್ಮ ದೇಶದ ಸೈನಿಕರಿಗೆ ನೃತ್ಯದ ಮೂಲಕ ನಮನವನ್ನು ಸಲ್ಲಿಸಿದರು ಎಂದು ವರದಿಯಾಗಿದೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button