ಸರ್ಕಾರದ ಬೊಕ್ಕಸಕ್ಕೆ ತೆರಿಗೆ ವಸೂಲಾತಿ ಬರಿಸದೆ – ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಟಿಪ್ಪರ್ ಪೋಲಿಸ್ ವಶಕ್ಕೆ.
ಮಾನ್ವಿ ಆ.21

ತಾಲೂಕಿನ ಮದ್ಲಾಪುರ್ ಗ್ರಾಮದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ 14 ಟಿಪ್ಪರ್ ಹಾಗೂ ಒಂದು ಜೆಸಿಬಿ ವಶ ಪಡಿಸಿ ಕೊಂಡಿದ್ದಾರೆ. ಮಾನ್ವಿ ಪಿ.ಐ ಸೋಮಶೇಖರ್ ಕೆಂಚ ರೆಡ್ಡಿ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು.

ಈ ವೇಳೆ 2 ಟಿಪ್ಪರ್ ಗಳಲ್ಲಿ ಮರಳು ತುಂಬಿಸಿ ಕೊಂಡಿದ್ದಾರೆ. ಇತರ ವಾಹನಗಳ ಚಾಲಕರು ಜೆಸಿಬಿ ಆಪರೇಟರ್ ವಾಹನಗಳನ್ನು ಬಿಟ್ಟು ಪರಾರಿ ಯಾಗಿದ್ದಾರೆ. ಸರ್ಕಾರಕ್ಕೆ ಬೊಕ್ಕಸಕ್ಕೆ ಆದಾಯ ತುಂಬದೇ ಸ್ವಂತ ಲಾಭಕ್ಕಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಮಾಲೀಕರು ಹಾಗೂ ಚಾಲಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ಎಂದು ತಿಳಿದಿ ಬಂದಿದೆ ಪಂಚರ ಸಮಕ್ಷಮ ಟಿಪ್ಪರುಗಳು ಮತ್ತು ಜೆಸಿಬಿಯನ್ನು ಜಪ್ತಿ ಮಾಡಲಾಗಿದ್ದು. ಮಾನ್ವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ