ಬತ್ತಾಡ ಸಮುದಾಯಕ್ಕೆ ಒಳ ಮೀಸಲಾತಿ ಅನ್ಯಾಯ – ಸಕಾಲಿಕ ಹೋರಾಟ.

ಉಡುಪಿ ಆ.29

ನಾಗದಾಸ ಮೋಹನ್ ವರದಿಯ ಆಧಾರದ ಮೇಲೆ ಸಿದ್ಧ ಪಡಿಸಲಾದ ಒಳ ಮೀಸಲಾತಿ ನೀತಿಯು ಕರ್ನಾಟಕದಲ್ಲಿ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಸಣ್ಣ ಮತ್ತು ಅಲೆಮಾರಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಲಾದ ಈ ನೀತಿಯು, ಬತ್ತಾಡ ಸಮುದಾಯಕ್ಕೆ ಸಂಪೂರ್ಣ ವಂಚನೆ ಯಾಗುವ ಆತಂಕವನ್ನು ಸೃಷ್ಟಿಸಿದೆ.

ಸಮಸ್ಯೆಯ ಮೂಲ ನಾಗದಾಸ ಮೋಹನ್ ವರದಿಯಲ್ಲಿದೆ. ವರದಿಯು ಅಲೆಮಾರಿ ಮತ್ತು ಬತ್ತಾಡ ಜಾತಿಯಂತಹ ಸಣ್ಣ ಸಮುದಾಯಗಳಿಗೆ ಶೇಕಡಾ 1 ರಷ್ಟು ಮೀಸಲಾತಿಯನ್ನು ನಿಗದಿ ಪಡಿಸಿತ್ತು. ಆದರೆ, ಪ್ರಸ್ತುತ ಜಾರಿಗೆ ತರಲು ಹೊರಟಿರುವ ನೀತಿಯಲ್ಲಿ, ಈ ಮೀಸಲಾತಿಯನ್ನು ಈಗಾಗಲೇ ಮೀಸಲಾತಿಯ ಪೂರ್ಣ ಪ್ರಯೋಜನ ಪಡೆದ ಹೊಲೆಯ ಸಮುದಾಯದೊಂದಿಗೆ ಸೇರಿಸಲಾಗಿದೆ. ಇದು ಸುಪ್ರೀಂ ಕೋರ್ಟ್ ಆದೇಶಗಳ ಸ್ಪಷ್ಟ ಉಲ್ಲಂಘನೆ ಎಂದು ತಜ್ಞರು ಹೇಳುತ್ತಾರೆ. ಇದರಿಂದ ಬತ್ತಾಡ ಸಮುದಾಯಕ್ಕೆ ಭವಿಷ್ಯದಲ್ಲಿ ಸಾಮಾಜಿಕ ನ್ಯಾಯದ ವಂಚನೆ ಮಾತ್ರವಲ್ಲದೆ, ಸಮುದಾಯದ ಮಕ್ಕಳು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಸೌಲಭ್ಯಗಳಿಂದ ಸಂಪೂರ್ಣವಾಗಿ ಹೊರಗುಳಿಯುವ ಅಪಾಯವಿದೆ.

ಈ ಅನ್ಯಾಯವು ಈಗಾಗಲೇ ಅಂಚಿನಲ್ಲಿರುವ ಬತ್ತಾಡ ಸಮುದಾಯದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸಂವಿಧಾನವು ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿದರೂ, ಪ್ರಸ್ತುತ ಸರ್ಕಾರದ ನೀತಿಯು ಈ ತತ್ವಗಳಿಗೆ ವಿರುದ್ಧವಾಗಿದೆ ಎಂಬುದು ಸಮುದಾಯದ ಆತಂಕ.

ಸರ್ಕಾರಕ್ಕೆ ಆಗ್ರಹ:-

ಈ ಕುರಿತು ಸರ್ಕಾರವು ತಕ್ಷಣ ಗಮನ ಹರಿಸಬೇಕು. ಬತ್ತಾಡ ಸಮುದಾಯದ ಪ್ರಜ್ಞಾವಂತರು ಮತ್ತು ವಿದ್ಯಾವಂತರು ಈ ಬಗ್ಗೆ ಸರ್ಕಾರದ ಗಮನ ಸೆಳೆಯುವ ತುರ್ತು ಹೋರಾಟವನ್ನು ರೂಪಿಸ ಬೇಕಾಗಿದೆ. ಈ ವಿಷಯದ ಬಗ್ಗೆ ಸಮುದಾಯದ ಜನರು ಒಟ್ಟಾಗಿ ಸೇರಿ ಒಂದು ನಿರ್ಧಾರಕ್ಕೆ ಬರುವುದು ಇಂದಿನ ಅಗತ್ಯವಾಗಿದೆ.

ಈ ಅನ್ಯಾಯದ ವಿರುದ್ಧ ಹೋರಾಡಲು ಬತ್ತಾಡ ಸಮುದಾಯದ ಎಲ್ಲಾ ಪ್ರಜ್ಞಾವಂತರು ಮತ್ತು ಹಿತೈಷಿಗಳು ಒಗ್ಗೂಡ ಬೇಕಿದೆ.ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು:

ಪ್ರಕಟಣೆ/9964237090

ನಾರಾಯಣ್ ಮಣೂರ್,

(ಬತ್ತಾಡ ಸಮುದಾಯದ ಪರವಾಗಿ)

ವರದಿ :ಆರತಿ ಗಿಳಿಯಾರು ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button