ಭೀಮಾತೀರದಲ್ಲಿ ಮತ್ತೆ ಗುಡಿನ ದಾಳಿ, ಗ್ರಾ.ಪಂ ಅಧ್ಯಕ್ಷ – ಭೀಮನಗೌಡ. ಪಾಟೀಲ ರವರ ಮೇಲೆ ಗುಂಡು.

ದೇವರ ನಿಂಬರಗಿ ಸ.03

ಭೀಮಾತೀರದಲ್ಲಿ ಗುಂಡಿನ ಮೊರೆತ ಆಗಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ. ದೇವರ ನಿಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮನಗೌಡ. ಬಿರಾದಾರ್ ಮೇಲೆ ಪೈರಿಂಗ್ ನಡೆದಿದೆ. ಮೂರು ಸುತ್ತು ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ ಯಾಗಿದ್ದಾರೆ. ತಲೆ ಹಾಗೂ ಎದೆಗೆ ಗುಂಡುಗಳು ತಗಲಿವೆ.

ಇನ್ನೂ ಹಳೆ ವೈಷಮ್ಯ ಹಿನ್ನೆಲೆ ಈ ಕೃತ್ಯ ಆಗಿದೆ. ಇನ್ನೂ ಭೀಮಾ ತೀರದ ಮಹಾದೇವ ಬೈರಗೊಂಡ ಪರಮಾಪ್ತ ಬಿರಾದಾರ ಆಗಿದ್ದರು. ಮೂರರಿಂದ ನಾಲ್ಕು ಜನ ಸೇರಿ ಕೃತ್ಯ ನಡೆದಿದ್ದು, ಗುಂಡು ಹಾರಿಸಿದ ಬಳಿಕ‌ ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.

ದೇವರ ನಿಂಬರಗಿ ಗ್ರಾಮದ ಕಟಿಂಗ್ ಶಾಪ್ ನಲ್ಲಿ ಕಟಿಂಗ್ ಮಾಡಿಸಿ ಕೊಳ್ಳಲು ಭೀಮನಗೌಡ.ಬಿರಾದಾರ್ ಬಂದಿದ್ದರು. ಈ ವೇಳೆ ಕಟಿಂಗ್ ಮಾಡುವನ ಕಣ್ಣಿಗೆ ಖಾರದ ಪುಡಿ ಎರಚಿ ಕೃತ್ಯ ಮಾಡಿದ್ದಾರೆ.

ವಿಜಯಪುರದ ಖಾಸಗಿ ಆಸ್ಪತ್ರೆಗೆ ತೆರಳುವಾಗ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸಂಬಂಧಿಸಿದಂತೆ ಪರೀಶೀಲನೆ ಮುಂದುವರಿದಿದೆ ಎಂದು ವರದಿಯಾಗಿದೆ.

ವರದಿ:ನಿಂಗಪ್ಪ.ಗೊರಗುಂಡಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button