ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ನಾಯಿಯನ್ನು ರಕ್ಷಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು.
ಕೆಂಪವಾಡ ಸ.04

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ನಾಯಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವ ಘಟನೆ ದಿನಾಂಕ 02/09/2025 ರಂದು ಸಮಯ ಮುಂಜಾನೆ 08:30 ಕ್ಕೆ ಬುಧವಾರ ನಡೆದಿದೆ. ತಕ್ಷಣ ಊರಿನ ಗ್ರಾಮಸ್ಥರು ಅಥಣಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ತಿಳಿದ ತಕ್ಷಣ ಸ್ಥಳಕ್ಕೆ ಜಲ ವಾಹನ ಮತ್ತು ಸಿಬ್ಬಂದಿಯವರು ರಕ್ಷಣಾ ಸಾಮಗ್ರಿಗಳೊಂದಿಗೆ ಶ್ರೀ ಗೋಪಾಲ ಮಗದುಮ ಅಗ್ನಿಶಾಮಕ ಠಾಣಾಧಿಕಾರಿ ರವರ ನೇತೃತ್ವದಲ್ಲಿ ಸಿಬ್ಬಂದಿಯವರು ಒಳಗೂಡಿ ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ತೆರೆದ ನೀರಿರುವ ಬಾವಿಯಲ್ಲಿ ಅಂದಾಜು 55 ರಿಂದ 60 ಅಡಿ ಆಳದಲ್ಲಿ ನಾಯಿ ಕಾಲು ಜಾರಿ ಬಾವಿಯಲ್ಲಿ ಬಿದ್ದಿರುವುದನ್ನು ಸುಮಾರು 01 ಗಂಟೆ 00 ಗಳ ಕಾಲ ಕಷ್ಟಕರ ಕಾರ್ಯಚರಣೆಯಲ್ಲಿ ನಾಯಿನ್ನು ಜೀವಂತವಾಗಿ ರಕ್ಷಣೆ ಮಾಡಲಾಯಿತು.

ಈ ರಕ್ಷಣಾ ಕಾರ್ಯಚರಣೆ ಭಾಗವಹಿಸಿದ ಸಿಬ್ಬಂದಿಯ ವಿವರಗಳು 01) ಗೋಪಾಲ ಮಗದುಮ ಅಗ್ನಿಶಾಮಕ ಠಾಣಾಧಿಕಾರಿ 02) ಮಲ್ಲಿಕಜಾನ ಜಮದಾರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ 03) ಸುಭಾನ ಫಿರಜಾದೆ 04) ಮಲ್ಲನಗೌಡ ನಾಯಕ 5) ಆಶಿಫಅಹಮದ ಸನದಿ 06) ಮಹಾದೇವ ಚೌಗಲಾ 07) ಸಂತೋಷ್ ಚೌಗುಲಾ 08) ರಾಘವೇಂದ್ರ ನಾವಿ ಇತರರು ಮತ್ತು ಊರಿನ ಗ್ರಾಮಸ್ಥರು ಕಾರ್ಯಾಚರಣೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ಕೆಂಪವಾಡ ಗ್ರಾಮದಲ್ಲಿ ಅಗ್ನಿಶಾಮಕ ಇಲಾಖೆಗೆ ಅಗ್ನಿಶಾಮಕದ ಅಧಿಕಾರಿಗಳಿಗೆ ಅಗ್ನಿಶಾಮಕದ ಸಿಬ್ಬಂದಿಗಳಿಗೆ ತುಂಬಾ ತುಂಬಾ ಹೃದಯ ಪೂರ್ವಕವಾದ ಧನ್ಯವಾದಗಳು ತಿಳಿಸಿದರು ನೀವು ಮಾಡುವ ಕೆಲಸ ಜೀವ ರಕ್ಷಿಸುವ ಕೆಲಸವಾಗಿದೆ ನಿಮಗೆ ಆರೋಗ್ಯ ಐಶ್ವರ್ಯ ಕೊಟ್ಟು ಸದಾಕಾಲ ಉನ್ನತ ಮಟ್ಟಕ್ಕೆ ಮತ್ತು ದೊಡ್ಡ ಹುದ್ದೆಗಳನ್ನು ಸ್ವೀಕರಿಸಲಿ ಎಂದು ಶುಭ ಹಾರೈಸಿದರು.