ಶ್ರೀಶಾರದಾಶ್ರಮದಲ್ಲಿ ಸ್ವಾಮಿ ಅಂಬಿಕಾನಂದರ – ಸ್ಮೃತಿಗಳ ಪ್ರವಚನ.
ಚಳ್ಳಕೆರೆ ಸ.05





ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು “ಸ್ವಾಮಿ ಅಂಬಿಕಾನಂದರ ಸ್ಮೃತಿ” ಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು.

ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಭಜನೆ ಮತ್ತು ದಿವ್ಯತ್ರಯರಿಗೆ ಮಂಗಳಾರತಿ ನಡೆಯಿತು.

ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜಿ.ಯಶೋಧಾ ಪ್ರಕಾಶ್,ಮಂಜುಳ ಉಮೇಶ್,ಎಂ ಗೀತಾ ನಾಗರಾಜ್, ಯತೀಶ್.ಎಂ ಸಿದ್ದಾಪುರ, ಚೇತನ್, ಪಿ.ಎಸ್ ಮಾಣಿಕ್ಯ, ಸತ್ಯನಾರಾಯಣ, ವೆಂಕಟಲಕ್ಷ್ಮೀ, ಸಂಧ್ಯಾ ಸುಧಾಕರ್, ಸಿ.ಎಸ್ ಭಾರತಿ, ಚಂದ್ರಶೇಖರ್, ಪಂಕಜ ಚೆನ್ನಪ್ಪ, ಭ್ರಮರಂಭಾ ಮಂಜುನಾಥ, ಸುಧಾಮಣಿ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.