ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ – ಕೇಂದ್ರದ ವಾರ್ಷಿಕೋತ್ಸವದ ಕಾರ್ಯಕ್ರಮ ಜರಗಿತು.

ಕಲಕೇರಿ ಸ.25

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಸರಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಅಂಬೇಡ್ಕರ್ ನಗರ ಓಂ ಶ್ರೀ ಮಂಜುನಾಥಾಯ ನಮಃ ಕಲಕೇರಿ ವಲಯದ ಮಡಿವಾಳೇಶ್ವರ ಕಾರ್ಯ ಕ್ಷೇತ್ರದಲ್ಲಿ ಜ್ಯೋತಿ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವದ ಕಾರ್ಯಕ್ರಮ ಹಮ್ಮಿಕೊಂಡಿದ್ದು.

ಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು ಮಡಿವಾಳಪ್ಪ ಜಂಬಿಗಿ ಇವರು ಸಂದರ್ಭದಲ್ಲಿ ಮಾತನಾಡಿರು. ಒಕ್ಕೂಟದ ಉಪಾಧ್ಯಕ್ಷರಾದ ಆರತಿ ಹೊಸಮನಿ, ಒಕ್ಕೂಟದ ಸಹಕಾರ್ಯದರ್ಶಿ ಶಿವಾನಂದಯ್ಯ ಗಣೇಶ್ಮಮಠ ತಮ್ಮ ಅನಿಸಿಕೆಗಳನ್ನು ತಿಳಿಸಿದರು, ಊರಿನ ಗಣ್ಯರಾದ ರೇಮಶ್ ಹೆಂಡಿ ತಮ್ಮ ಅನಿಸಿಕಗಳ ದಾನದ ಬಗ್ಗೆ ಮಹಿಳೆಯರಿಗೆ ತಿಳಿಸಿದರು.

ಪತ್ರಕರ್ತರು ಮೆಹಬೂಬ್ ಭಾಷಾ, ವಲಯದ ಮೇಲ್ವಿಚಾರಕರು ಸಿದ್ಧಲಿಂಗಪ್ಪ ಪಾಟೀಲ್ ಇವರ ಅಧ್ಯಕ್ಷತೆಯಲ್ಲಿ ಕೇಂದ್ರದ ಉದ್ಘಾಟನೆಯನ್ನು ದೀಪ 🪔🪔 ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘ ಹೇಗಿದೆ ಒಳ್ಳೆಯ ರೀತಿಯಿಂದ ಒಂದಾಗಿ ಸಂಘ ಬೆಳೆಯಲಿ ಬೆಳೆಸಿರಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಸಭೆಯಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಆಶಾ ಮೇಡಂ ಮತ್ತು ಸೇವಾ ಪ್ರತಿನಿಧಿ ಸವಿತಾ ಮತ್ತು ಸ್ವಪ್ನ ಮತ್ತು ಕೇಂದ್ರದ ಸದಸ್ಯರು ಅನೇಕ ಮಹಿಳೆಯರು ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಮ್.ಬಿ ಮನಗೂಳಿ ತಾಳಿಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button