ಇದು ಗ್ರಾಮ ಸಭೆಯೋ ಇಲ್ಲ, ಪಂಚಾಯತಿ ಸಿಬ್ಬಂದಿಗಳ – ಗುಪ್ತ ಸಭೆಯೋ…?
ಖಣದಾಳ ಸ.26





ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖಣದಾಳ ಗ್ರಾಮದ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಜನ ಪ್ರತಿನಿಧಿಗಳ ಕೋರಂ ಇಲ್ಲದ ಕಾರಣ ಮೊಟಕು ಗೊಳಿಸಲಾಯಿತು ಒಟ್ಟು ಹದಿಮೂರು ಜನ ಜನ ಪ್ರತಿನಿಧಿಗಳಲ್ಲಿ ಕೇವಲ ನಾಲ್ಕು ಜನ ಮಾತ್ರಾ ಭಾಗವಹಿಸಿದ್ದರು. ಏಕೆ ಈ ರೀತಿಯಾಗಿದೆ ಎಂದು ಕೇಳಿದರೆ ಗ್ರಾಮ ಸಭೆಯ ಮಾಹಿತಿಯನ್ನು ನೀಡದೆ ಪಿಡಿಓ ಆದ ಪಾಟೀಲ್ ಅವರು ಜನರ ಗಮನಕ್ಕೆ ತರದೆ ಯಾವುದೇ ಪ್ರಕಟಣೆ ಹೊರಡಿಸಿದೆ ಅತೀ ತುರ್ತಾಗಿ ಸಭೆಯನ್ನು ಆಯೋಜಿಸಿದ್ದಾರೆ ಅಷ್ಟೇ ಅಲ್ಲದೆ ಜನ ಪ್ರತಿನಿಧಿಗಳಿಗೆ ನೊಟೀಸ್ ನೀಡಿದ್ದರು ಕೂಡ ಜನ ಪ್ರತಿನಿಧಿಗಳು ಬಂದಿರುವುದಿಲ್ಲ ಈ ಎಲ್ಲ ಬೆಳವಣಿಗೆ ನೋಡಿದರೆ ಗ್ರಾಮದ ಅಭಿವೃದ್ಧಿ ಶೂನ್ಯ ಎಂದು ಸಾರ್ವಜನಿಕರು ತಮ್ಮ ತಮ್ಮಲ್ಲಿ ಚರ್ಚೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪರಶುರಾಮ ತೆಳಗಡ ರಾಯಬಾಗ