ಪೌರ ಕಾರ್ಮಿಕರು, ಸೈನಿಕರು ದೇಶ ಕಾಯುವ ಪ್ರಮುಖರು – ವಸಂತ್ ಕುಮಾರ್.

ತರೀಕೆರೆ ಅ.15

ಪೌರ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಬೇಕು ಅದಕ್ಕಾಗಿ ಸರ್ಕಾರಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದು ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ಕವಾಲಿ ರವರು ಹೇಳಿದರು. ಅವರು ಇಂದು ಪಟ್ಟಣದ ಹೋಟೆಲ್ ಅರಮನೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ವಿಭಾಗ ಅಧಿಕಾರಿ ಎನ್.ವಿ ನಟೇಶ್ ರವರು ಮಾತನಾಡಿ ಅಸಮಾನತೆಯ ನೋವು ಅನುಭವಿಸುತ್ತಿದ್ದಾರೆ.

ಪೌರ ಕಾರ್ಮಿಕರು, ದೇಶ ಕಾಯುವ ಸೈನಿಕರು ಮತ್ತು ಪೌರ ಕಾರ್ಮಿಕರು ದೇಶದ ಪ್ರಮುಖರು ಅವರ ಏಳಿಗೆಗೆ ಸಮಾಜ ಎಂದು ಕಟಿ ಬದ್ಧವಾಗಿರಬೇಕು ಅವರ ಆರೋಗ್ಯ ಮತ್ತು ಅವರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಉಪ ವಿಭಾಗ ಅಧಿಕಾರಿ ಎನ್ವಿ ನಟೇಶ್ ರವರು ಮಾತನಾಡಿ ಅಸಮಾನತೆಯ ನೋವು ಅನುಭವಿಸುತ್ತಿದ್ದಾರೆ ಪೌರ ಕಾರ್ಮಿಕರು ಇವರನ್ನು ಸಮಾನ ಮನಸ್ಸಿನಿಂದ ನೋಡಬೇಕು ನಾಗರೀಕ ಸಮಾಜ ಎಂದು ಹೇಳಿದರು.

ಪುರ ಸಭಾ ಸದಸ್ಯರಾದ ದಾದಾಪೀರ್ ಮಾತನಾಡಿ ದೇಶದ ಸ್ವಚ್ಛತೆ ಸಮಾಜದ ಆರೋಗ್ಯ ಕಾಯುವವರು ಪೌರ ಕಾರ್ಮಿಕರು ಅವರ ಮಕ್ಕಳು ವಿದ್ಯಾವಂತರಾಗಬೇಕು ಐಎಎಸ್ ಐಪಿಎಸ್ ಅಧಿಕಾರಿಗಳಾಗಬೇಕು ಉನ್ನತ ಸ್ಥಾನಮಾನ ಪಡೆಯಬೇಕು ಅಂಬೇಡ್ಕರ್ ಕೊಟ್ಟ ಸಂವಿಧಾನ ಪ್ರಪಂಚದಲ್ಲಿಯೇ ಅತಿ ಮಹತ್ವವಾದದ್ದು ಎಲ್ಲಾ ಹಕ್ಕುಗಳನ್ನು ಈ ದೇಶದ ಪ್ರತಿಯೊಬ್ಬರಿಗೂ ನೀಡಿದ್ದಾರೆ. ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದಾರೆ ಅಂಬೇಡ್ಕರ್ ರವರು ನಮ್ಮ ಶಕ್ತಿ ನಮ್ಮ ಭವಿಷ್ಯ ಎಂದು ಹೇಳಿದರು.

ಟಿ.ಎಂ ಭೋಜರಾಜ ಮಾತನಾಡಿ ಅಬ್ದುಲ್ ಕಲಾಂ ರವರ ಜನ್ಮದಿನ ಇಂದು ಅವರು ದೇಶದ ಪ್ರಗತಿಗೆ ಯಶಸ್ವಿಗಳನ್ನು ನೀಡಿದ್ದಾರೆ ಪೌರ ಕಾರ್ಮಿಕರಿಗೆ ಸಮರ್ಪಣಾ ಭಾವನೆ ಇದೆ ಸುಂದರ ತರೀಕೆರೆಯ ಕಾರಣಕರ್ತರು ಪೌರ ಕಾರ್ಮಿಕರು ಎಂದು ಹೇಳಿದರು. ಲೋಕೇಶ್ ಮಾತನಾಡಿ ಪೌರ ಕಾರ್ಮಿಕರು ತಮ್ಮ ಕಷ್ಟಗಳನ್ನು ಬದಿಗೊತ್ತಿ ಸಮಾಜದ ಕೊಳಕು ಸ್ವಚ್ಛ ಮಾಡುವ ಇವರಿಗೆ ಗೃಹ ಭಾಗ್ಯ ಯೋಜನೆಯಲ್ಲಿ ನಿರ್ಮಿಸಲಾದ ವಸತಿ ಗೃಹಗಳಿಗೆ ಪುರ ಸಭೆಯು 1,50,000 ರೂ ಗಳನ್ನು ಬರಿ ಬರಿಬೇಕು ವಸತಿಯನ್ನು ಉಚಿತವಾಗಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಹೇಳಿದರು. ಜಿಲ್ಲಾ ಸಫಾಯಿ ಕರ್ಮಚಾರಿ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ.ಎನ್ ವೆಂಕಟೇಶ್ ರವರು ಮಾತನಾಡಿ ನೇರ ಪಾವತಿ ಹೊರಗುತ್ತಿಗೆ ಪೌರ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಬೇಕು ಇವರ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಸರ್ಕಾರಿ ಸೌಲಭ್ಯಗಳನ್ನು ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಪೌರ ಕಾರ್ಮಿಕರು ಎಂದು ಹೇಳಿದರು.

ಪುರಸಭಾ ನಾಮಿನಿ ಸದಸ್ಯರಾದ ಆದಿಲ್ ಪಾಷಾರ್ ಮಾತನಾಡಿ ಮಾನವರೆಲ್ಲ ಒಂದೇ ಜಾತಿ ನಮ್ಮಲ್ಲಿ ಜಾತಿ ಭೇದ ಬೇಡ ನಾವೆಲ್ಲರೂ ಒಂದಾಗಿ ಹೋಗೋಣ ದೇವರ ದೃಷ್ಟಿಯಲ್ಲಿ ಈ ಭೂಲೋಕದಲ್ಲಿ ಮನುಷ್ಯರೇ ನಮ್ಮಲ್ಲಿ ಮೇಲು-ಕೀಳು ಭಾವನೆಗಳು ಬೇಡ ಎಂದು ಹೇಳಿದರು. ಸದಸ್ಯರಾದ ದಿವ್ಯ ರವಿ, ಗಿರಿಜಾ ಪ್ರಕಾಶ್ ವರ್ಮ, ಉಪಾಧ್ಯಕ್ಷರಾದ ಪಾರ್ವತಮ್ಮ ಮುಂತಾದವರು ಮಾತನಾಡಿದರು ಈ ಸಂದರ್ಭದಲ್ಲಿ ಪೌರ ಕಾರ್ಮಿಕರು ಕ್ರೀಡಾಕೂಟದಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು ಮತ್ತು ಪ್ರತಿಭಾವಂತ ಪೌರ ಕಾರ್ಮಿಕರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್. ತರೀಕೆರೆ ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button