ಶ್ರೀ ಭೂತಾಳ ಸಿದ್ದೇಶ್ವರ ಅ. 21 ಕ್ಕೆ – ಜಾತ್ರಾ ಮಹೋತ್ಸವವು ಜರುಗುವುದು.

ಗುಂಡಕರ್ಜಗಿ ಅ.17

ಮುದ್ದೇಬಿಹಾಳ ತಾಲೂಕಿನ ಗುಂಡಕರ್ಜಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಭೂತಾಳ ಸಿದ್ದೇಶ್ವರ ಜಾತ್ರಾ ಮಹೋತ್ಸವು. ಅಕ್ಟೋಬರ್ 21-10-2025 ಮಂಗಳವಾರ ದಂದು ಬೆಳಗ್ಗೆ 10-00 ಗಂಟೆಗೆ ವಾದ್ಯ ವೈಭವಗಳೊಂದಿಗೆ ಗಂಗಾ ಸ್ಥಳಕ್ಕೆ ಹೋಗಿ ಬರುವುದು ನಂತರ ಶ್ರೀ ಭೂತಾಳ ಸಿದ್ದೇಶ್ವರ ಗದ್ದುಗೆಗೆ ಪಟ್ಟಣದ ಹೂವು ಏರಿಸಲಾಗುತ್ತದೆ. ನಂತರ ಮಧ್ಯಾಹ್ನ 1:00ಗೆ ಮಹಾ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದೇ ರಾತ್ರಿ 10-00 ಗಂಟೆಗೆ ಸುಪ್ರಸಿದ್ಧ ಡೊಳ್ಳಿನ ಪದಗಳು ನಡೆಯುತ್ತವೆ. ಶ್ರೀ ಬೀರಲಿಂಗೇಶ್ವರ ಡೊಳ್ಳಿನ ಗಾಯನ ಸಂಘ ಸಾ:ಸಂಖ ತಾ:ಜತ್ತ ಜಿ:ಸಾಂಗ್ಲಿ ಮುಖ್ಯ ಗಾಯಕರು ಶ್ರೀಶೈಲ್ ಗೌಡ್ರು ಹಾಗೂ ಶ್ರೀ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಸಾ:ಸಂಕನಾಳ ತಾ:ಬ ಬಾಗೇವಾಡಿ ಜಿ:ವಿಜಯಪುರ, ಮುಖ್ಯ ಗಾಯಕರು ಗುರುಲಿಂಗ ಮಾಸ್ಟರ್, ಈ ಎರಡು ತಂಡಗಳಿಂದ ರಾತ್ರಿ ಸುಪ್ರಸಿದ್ಧ ಡೊಳ್ಳಿನ ಪದಗಳು ಜರುಗುತ್ತವೆ. ಈ ಪ್ರಕಾರ ಜಾತ್ರೆ ನಡೆಯಲಾಗುತ್ತದೆ ಎಂದು ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button