“ಜೊತೆಗಿರದ ಜೀವ ಎಂದಿಗೂ ಜೀವಂತ”…..

ಕರುನಾಡ ಕಂದ ವರ ನಟನ ಪುತ್ರನಿವಕನ್ನಡಿಗರ ಹೆಮ್ಮೆ ಸರಳತೆಯ ಪ್ರತೀಕನಿವಪರಮಾತ್ಮ ಕರುನಾಡಿಗೆ ನೀಡಿದ ಕಣ್ಮಣಿ ಇವಕರುಣೆಯಲ್ಲಿ ಪರಮ ಪುನೀತನಿವ.

ಕೋಟ್ಯಾಂತರ ಕನ್ನಡಿಗರ ಹೃದಯದ ಅಧಿಪತಿ ಅಭಿಮಾನಿಗಳಲ್ಲಿ ಬೆಳಗಿದರು ಕನ್ನಡದ ಜ್ಯೋತಿ ಲೀನವಾಯಿತು ವೀರ ಕನ್ನಡಿಗನ ಪ್ರಾಣ ಪ್ರಣತಿಕಾತರಿಸಿ ಹೊರಟಿದೆ ತಂದೆ ತಾಯಿಯ ಮಡಿಲ ಪ್ರೀತಿ.
ಪುಣ್ಯದ ಕಾರ್ಯ ಸದ್ದಿಲ್ಲದೆ ಮಾಡಿದನು ನೀತಿವಂತನಾಗಿ ನಗುತ ಬಾಳಿದವನುತಂದೆ ಹೆಸರು ಉಳಿಸಿ ಬೆಳೆದವನುರಾಜಕುಮಾರನ ಪ್ರಿಯ ತನುಜನು.
ಬಣ್ಣದ ಲೋಕವ ಬೆಳಗಿದ ಬಂಗಾರಅನಾಥ ಬಂಧುವಿಗೆ ಆಸರೆಯ ಸರದಾರವೃದ್ಧರ ಪಾಲಿನ ಒಲವಿನ ಮಂದಾರಹುಟ್ಟಿ ಬಾ ಭುವಿಗೆ ಕನ್ನಡದ ಕುವರ.
ಕು. ಜ್ಯೋತಿ.ಆನಂದ ಚಂದುಕರ
ಬಾಗಲಕೋಟ

