“ನಿರೂಪಕಿ ಅಪರ್ಣ ರವರಿಗೆ ಭಾವ ಪೂರ್ಣ ನುಡಿ ನಮನ”…..

ಮತ್ತೇ ಹುಟ್ಟಿ ಬನ್ನಿ ಓ ಕರುನಾಡ ಕಂಠಸಿರಿಯೇಕನ್ನಡ ನಾಡಿನ ಮುದ್ದಿನ ಕುವರಿಯೇಚಂದನ ವನದ ಐಸಿರಿಯೆ ಸುಂದರ, ಚೆಂದದ ಭಾಷೆಯ ಅಂದದಿ ನುಡಿವ ಕನ್ನಡತಿಯೆನಿರೂಪಕಿಯಾಗಿ, ನಟಿಯಾಗಿನಿಮ್ಮ ಸೇವಾ ಕೈಂಕರ್ಯ ಮಹತ್ವ ಪೂರ್ಣ ನಿಮ್ಮ ಜೀವನವೇ ಮಹಾ ಸಮರ್ಪಣ ||1||

ಅಪ್ಪಟ ಕನ್ನಡವನು ಸ್ಪಷ್ಟವಾಗಿ ಉಳಿಯುವ ಕನ್ನಡದ ಕೋಗಿಲೆಯಸರಳತೆಯನ್ನು ಮೈದಂಬಿ ಕೊಂಡ ಮುಗ್ಧ ಮನದ ಅರಸಿಯೇಸದಾ ಹಸನ್ಮುಖತೆ, ಜೀವನೋತ್ಸಹ ಎದ್ದು ಕಾಣುವ ಮುಖ ಭಾವ ಇತರರಿಗೆ ಮಾದರಿಯಾಗುವ ಅಪ್ರಮೇಯ ವ್ಯಕ್ತಿತ್ವವೆಮತ್ತೆ ಹುಟ್ಟಿ ಬನ್ನಿ ಓ ಕರುನಾಡ ಕಂಠ ಸಿರಿಯೇ ||2||

ತಮ್ಮ ಅಪ್ರತಿಮ ನಡೆಯಿಂದ, ಅಪೂರ್ವ ನುಡಿಗಳಿಂದಕನ್ನಡಿಗರ ಮನ ಗೆದ್ದ ಕರುನಾಡಿನ ಅನನ್ಯ ಚೇತನವೇರವಿ ತೇಜಸಂತೆ ತನ್ನ ಕಾಂತಿಯನುಸುತ್ತಲು ಪಸರಿಸುತ್ತಾ ಇತರರಿಗೆಬೆಳಕು ಕೊಡುವ ದಿವ್ಯ ಚೇತನವೇನೋವಿನಲ್ಲೂ ನಗೆಯ ಚಿಮ್ಮಿಸಿ ಇತರರನ್ನು ನಗಿಸುವ ನಗೆಯ ಕಾರ಼ಂಜಿಯೆಮತ್ತೆ ಹುಟ್ಟಿ ಬನ್ನಿ ಓ ಕರುನಾಡ ಕಂಠ ಸಿರಿಯೇ ||3||

ನಿಮ್ಮ ಮುಗ್ಧ – ಸ್ನಿಗ್ಧ ನಗುವಿನಿಂದಶುದ್ಧ, ಸ್ಪಷ್ಟ ನುಡಿಗಳಿಂದ ಕನ್ನಡಿಗರ ಹ್ರೃನ್ಮನಗಳಲ್ಲಿ ರಾರಾಜಿಸುತಿರುವ ಅಪೂರ್ವ ಮಾಣಿಕ್ಯವೇನಿಮ್ಮ ಮಧುರ ಕಂಠಕ್ಕೆ ಮನ ಸೋತು ಆ ದೇವರೇ ನಿಮ್ಮನ್ನು ತನ್ನೆಡೆಗೆ ಸೆಳೆದಿರುವ ನಮ್ಮೆಲ್ಲರನ್ನು ಅಗಲಿ ಬಾರದ ಲೋಕಕ್ಕೆ ಪಯಣಿಸಿದಮಸಣದ ಹೂವೆಮತ್ತೆ ಹುಟ್ಟಿ ಬನ್ನಿ ಓ ಕರುನಾಡ ಕಂಠಸಿರಿಯೇ ||4||

ಸುಂದರ, ಸುಮಧುರ ನುಡಿಯ ಸಾರಥಿಯೆ ನಿರೂಪಣೆಯೇ ನಿಮ್ಮ ಜೀವನಾಡಿ ಸ್ಪಷ್ಟ, ಶುದ್ದ ಮಾತಿನ ಮೋಡಿಯಿಂದ ಎಲ್ಲರ ಮನ ಸೂರೆಗೊಂಡ ಕನ್ನಡದ ಅರಸಿಯೆನಿಮ್ಮ ಅಗಲಿಕೆಯಿಂದ ಅನಾಥವಾಗಿದೆ ಕನ್ನಡ ಸಾರಸ್ವತ ಲೋಕನೀವ್ ಅಗಲಿದರೂ ನಿಮ್ಮ ಹೆಸರುಸಾಧನೆಗಳು ಅಮರ ಅಜರಾಮರಮತ್ತೇ ಹುಟ್ಟಿ ಬನ್ನಿ ಓ ಕರುನಾಡ ಕಂಠ ಸಿರಿಯೇ ||5||

ಎಂ.ಎಸ್.ಆಶಾಲತಾ, ಶಾಖಾ ವ್ಯವಸ್ಥಾಪಕರು, ಎಂ. ಡಿ. ಸಿ. ಸಿ. ಬ್ಯಾಂಕ್, ಕೆ ಹೊನ್ನಲಗೆರೆ ಶಾಖೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button