ಶುಕ್ರವಾರ ಮುದ್ದೇಬಿಹಾಳ ಪಟ್ಟಣ ಬಂದ್ ಗೆ – ದಲಿತ ಮುಖಂಡರ ಕರೆ.
ಬನೋಸಿ ಅ. 29


ಮುದ್ದೇಬಿಹಾಳ ತಾಲೂಕಿನ ಬನೋಸಿ ಗ್ರಾಮದಲ್ಲಿ ನಡೆದ ಅಪ್ರಾಪ್ತೆಯಾದ ಬಸಮ್ಮ ಎಂಬ ಯುವತಿಯ ಕ್ರೂರ ಹತ್ಯೆ, ಇತ್ತೀಚಿಗೆ ಸುಪ್ರೀಂ ಕೋರ್ಟನ ನ್ಯಾಯಮೂರ್ತಿ ಬಿ,ಆರ್ ಗವಾಯಿ ಮೇಲೆ ಶೂ ಎಸೆದ ಘಟನೆ ಹಾಗೂ ಮೈಸೂರು ಜಿಲ್ಲೆಯ ಚಾಮರಾಜನಗರದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಮೂರ್ತಿಗಳಿಗೆ ಅವಮಾನ ಮಾಡಿದ ಘಟನೆಗಳ ಖಂಡಿಸಿ ಇದೇ ಅಕ್ಟೋಬರ್ 31 ರಂದು ಶುಕ್ರವಾರ ಬೆಳಿಗ್ಗೆ 6:00 ಗಂಟೆಯಿಂದ ಸಂಜೆ 6:00 ಗಂಟೆ ವರೆಗೆ ಮುದ್ದೇಬಿಹಾಳ ಪಟ್ಟಣ ಬಂದು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ದಲಿತ ಮುಖಂಡರಾದ ಹರೀಶ್ ನಾಟೇಕರ್ ಹೇಳಿದರು. ‘ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ದಲಿತ ಪರ ಸಂಘಟನೆಯ ವತಿಯಿಂದ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು, ದೇಶದಾದ್ಯಂತ ನಡೆಯುತ್ತಿರುವ ದಲಿತ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯಗಳು ಆತಂಕಕಾರಿ ಮಟ್ಟ ತಲುಪಿವೆ. ಬನೋಸಿ ಗ್ರಾಮದ ಬಸಮ್ಮ ಹತ್ಯೆ ಪ್ರಕರಣವು ಮಾನವೀಯತೆಗೆ ತಲೆ ತಗ್ಗಿಸುವಂತಹ ಘಟನೆಯಾಗಿದೆ. ಈ ಯುವತಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ ಸರಕಾರಿ ಹುದ್ದೆಯನ್ನು, ಎರಡು ಎಕರೆ ಜಮೀನನ್ನು ನೀಡಬೇಕು ಎಂದು ನಮ್ಮ ಬೇಡಿಕೆ ಇದೆ. ಈ ಬೇಡಿಕೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು. ನ್ಯಾಯಮೂರ್ತಿ ಗವಾಯಿ ಅವರ ವಿರುದ್ಧ ನಡೆದ ಶೂ ಎಸೆದ ಘಟನೆ ನ್ಯಾಯಾಂಗದ ಗೌರವಕ್ಕೆ ಧಕ್ಕೆ ತರುವಂತದಾಗಿದೆ. ಬುದ್ಧ ಹಾಗೂ ಅಂಬೇಡ್ಕರ್ ಮೂರ್ತಿಗಳಿಗೆ ಅವಮಾನ ಮಾಡಿರುವುದು ಸಂವಿಧಾನದ ತತ್ವಗಳಿಗೆ ವಿರೋಧವಾಗಿದೆ. ಈ ಮೂರು ಘಟನೆಗಳು ಸಮಾಜದ ಶಾಂತಿ, ನ್ಯಾಯ, ಮತ್ತು ಸಮಾನತೆಯ ತತ್ವಗಳ ಮೇಲೆ ದಾಳಿ ಮಾಡಿದಂತಿವೆ. ಆದ್ದರಿಂದ ನಾವು ಎಲ್ಲರೂ ಒಂದಾಗಿ ಮುದ್ದೇಬಿಹಾಳ ಪಟ್ಟಣವನ್ನು ಬಂದು ಮಾಡುವ ನಿರ್ಧಾರ ಕೈಗೊಂಡಿದ್ದೇವೆ. ಈ ಬಂದ್ ಯಾವುದೇ ರಾಜಕೀಯ ಉದ್ದೇಶಕ್ಕಾಗಿ ಅಲ್ಲ, ಇದು ‘ಮಾನವೀಯ ಮತ್ತು ಸಾಮಾಜಿಕ ಜಾಗೃತಿಯ ಹೋರಾಟ, ಎಲ್ಲಾ ಪ್ರಗತಿಪರ ಸಂಘಟನೆಗಳು ಸಾಮಾಜಿಕ ಹೋರಾಟಗಾರರು ಯುವಕರು ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರು ಬಂದ್ ಗೆ ಸಹಕರಿಸ ಬೇಕು ಎಂದು ಮನವಿ ಮಾಡಿದರು. ನಂತರ ಪ್ರಕಾಶ್ ಸರೂರ್, ಮಂಜುನಾಥ್ ಕಟ್ಟಿಮನಿ ಅವರು ಮಾತನಾಡಿ” ಬುದ್ಧ ಮತ್ತು ಅಂಬೇಡ್ಕರ್ ಮೂರ್ತಿಗಳಿಗೆ ಅವಮಾನ ಮಾಡಿರುವುದು ಕೇವಲ ಧಾರ್ಮಿಕ ವಿಷಯವಲ್ಲ ಅದು ದಲಿತರ ಆತ್ಮ ಸ್ಮಮಾನಕ್ಕೆ ಮಾಡಿದ ಹಲ್ಲೆ. ಇಂಥ ಘಟನೆಗಳನ್ನು ತಡೆಯಲು ಯುವ ಜನತೆ ಹೋರಾಟದ ಮುಂಚೂಣಿಯಲಿ ಇರಬೇಕು, ” ಎಂದು ಕರೆ ನೀಡಿದರು. ಆನಂದ್ ಮುದುರ್, ಸಂಗಮೇಶ್ ನೇಬಗೇರಿ ಅವರು, ” ಬಸಮ್ಮ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು, ಸರ್ಕಾರವು ತಕ್ಷಣ ಸಿ.ಬಿ.ಐ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗ ಪಡಿಸಬೇಕು, ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ತೀವ್ರ ಗೊಳಿಸಲಾಗುವುದು “ಎಂದು ಎಚ್ಚರಿಸಿದರು. ಪರಶು ಬಸರಕೋಡ್ ಅವರು ಮಾತನಾಡಿ,” ನ್ಯಾಯಮೂರ್ತಿ ಬಿ.ಆರ್ ಗವಾಯಿ ಅವರ ಅಂತಾ ಪ್ರಗತಿಪರ ವ್ಯಕ್ತಿಗಳ ಮೇಲೆ ಶೂ ಎಸೆದ ಘಟನೆ ಪ್ರಜಾಪ್ರಭುತ್ವದ ಅವಮಾನವಾಗಿದೆ. ನಾವು ನ್ಯಾಯಾಂಗ ಗೌರವನ್ನು ಕಾಪಾಡ ಬೇಕು, ಎಂದು ಅಭಿಪ್ರಾಯ ಪಟ್ಟರು. ಈ ಸಂದರ್ಭದಲ್ಲಿ ನಂತರ ಆನಂದ್ ದೇವುರ್, ಪರಸು ಬಸರಕೋಡ್, ಬಲ ಭೀಮ ನಾಯಕ್ ಮಕ್ಕಳ, ಪರಶುರಾಮ ಮುರಾಳ, ಸಿದ್ದು ಚಲವಾದಿ, ರೇವಣಸಿದ್ದ ನಾಯಕ್, ಬಸವರಾಜ್ ಸರೂರ್, ಅಯ್ಯಪ್ಪ ಸಿದ್ದಾಪುರ, ಸೇರಿದಂತೆ ಅನೇಕರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

