“ಪುಣ್ಯಭೂಮಿ ಇದು ಕರುನಾಡು”…..

ಕರುನಾಡು ಸ್ವರ್ಗದ ಸೀಮೆ ಕಾವೇರಿ ಹುಟ್ಟಿದ ನಾಡು ಕಲ್ಲಲಿ ಕಲೆಯನ್ನು ಕಂಡ ಬೇಲೂರು ಶಿಲ್ಪದ ಬೀಡುಸರ್ವ ಜನಾಂಗದ ಶಾಂತಿಯ ತೋಟ ನಮ್ಮ ನಾಡು ರನ್ನ ಪಂಪರ ಕವಿವಾಣಿಯ ನಾಡು ನಮ್ಮ ಕನ್ನಡ ನಾಡು

ಸಂಸ್ಕೃತಿ-ಕಲೆಗಳ ಸುಗಂಧವನ್ನು ಬೀರುವ ನಾಡಿದುಚಂದದ ನುಡಿ, ಅಂದದ ಅಡಿ, ನಮ್ಮ ಭಾಷೆಯಿದುಕವಿ ಕೋಗಿಲೆಗಳು ಹಾಡಿ ಹೊಗಳಿದ ನಾಡು ನಮ್ಮದುಉಸಿರಲ್ಲಿ ಕನ್ನಡ ಸದಾ ಅಚ್ಚ ಹಸಿರಾಗಿರಲಿ ಆಶಯ ನಮ್ಮದು
ಹಸಿರು ವನಗಳ ನಾಡು ಬೆಟ್ಟ ಘಟ್ಟಗಳ ಬೀಡು ಮಾವು ಬೇವು ತೆಂಗು ಬೆಳೆಯುವ ವೃಕ್ಷಗಳ ನಾಡುಕಾವೇರಿ ಕೃಷ್ಣ ಗೋದಾವರಿ ಮೈದೊಳುವ ನಲುನಾಡುಕನ್ನಡ ಕಂಪಿನ ನುಡಿ ಚೆಲುವಿನ ಒಲವಿನ ಸಿರಿ ನಾಡು
ಕಲಿತವರಿಗೆ ಅಮೃತ ನೆನೆದವರಿಗೆ ನೆರಳು ನಮ್ಮ ನಾಡು ಕಲೆಯನ್ನು ಶಿಲೆಯಲಿ ಬೆಳೆಸಿದ ನಾಡು ನಮ್ಮ ನಾಡುಕನ್ನಡ ಕಂಪಿನ ನುಡಿ ನಾಡು ನಮ್ಮ ನಾಡುಬದುಕು ನೀಡಿದ ಪಾವನ ಭೂಮಿ ನಮ್ಮ ನಾಡು
ಸ್ವಾಭಿಮಾನದಿ ತಲೆಯೆತ್ತಿ ನಿಂತಿರುವ ನಮ್ಮ ನಾಡುಕಥೆ ಕವನಗಳಿಗೆ ಸ್ಫೂರ್ತಿಯಾಗಿರುವ ಭಾಷೆಯ ನಾಡುಭೇದ ಭಾವ ತೋರದೆ ನೆಲೆಯ ಕಲ್ಪಿಸಿದ ನಾಡುನಮ್ಮೆಲ್ಲರ ಹೆಮ್ಮೆಯ ನಾಡು ಕನ್ನಡ ನಾಡು
ಕು, ಜ್ಯೋತಿ ಆನಂದ ಚಂದುಕರ
ಬಾಗಲಕೋಟ
 
				
 
						