ಕಾನಾ ಹೊಸಹಳ್ಳಿ ಕನ್ನಡ ಭವನದಲ್ಲಿ 70 ನೇ – ಕನ್ನಡ ರಾಜ್ಯೋತ್ಸವ ಆಚರಣೆ.
ಕೆ ಹೊಸಹಳ್ಳಿ ನ.01

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ 70 ನೇ. ಕನ್ನಡ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು. ಮತ್ತು ಭುವನೇಶ್ವರಿ ಭಾವ ಚಿತ್ರಕ್ಕೆ, ಪೂಜಿಸಲ್ಲಿಸಿ ಪುಷ್ಪ ನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷರಾದ ಎಂ.ಎಸ್ ತಿಪ್ಪೇಸ್ವಾಮಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ.

ಕನ್ನಡ ರಾಜ್ಯೋತ್ಸವ ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು ಮತ್ತು ಕನ್ನಡ ನಾಡಿಗೆ. ಪಂಪ. ರನ್ನ. ರಾಘವಾಂಕ. ಹರಿಹರ. ಕುವೆಂಪು. ದಾ.ರಾ ಬೇಂದ್ರೆ. ಸೇರಿದಂತೆ ಅನೇಕ ಕವಿಗಳು ಸಾಹಿತಿಗಳು ಸೇರಿದಂತೆ ಅನೇಕ ವಿದ್ವಾಂಸರು ಕನ್ನಡ ನಾಡಿಗೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಹಿರಿಯ ಕವಿಗಳಾದ ಯು.ಜಗನ್ನಾಥ್ ಮಾತನಾಡಿ ಕನ್ನಡ ನಾಡು. ನುಡಿ. ಜಲ.ಭಾಷೆಯನು ಮತ್ತು ಕನ್ನಡವನ್ನು ಉಳಿಸಿ ಬೆಳೆಸುವಂತಹ ಕೆಲಸಕ್ಕೆ ನಾವೆಲ್ಲರೂ ಕೂಡ ಕಂಕಣ ಭದ್ಧರಾಗಿರ ಬೇಕು ಮತ್ತು ಕನ್ನಡ ನಾಡಿನ ಅನೇಕ ಸಾಹಿತ್ಯ ಕಲೆ ಸಂಸ್ಕೃತಿ ಪರಂಪರೆಯನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಭವನದ ಸ್ಥಳ ಧಾನಿಗಳಾದ ಎಚ್.ಕೆ ವೆಂಕಟೇಶ್ವರ ರಾವ್, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಸಹ ಕಾರ್ಯದರ್ಶಿ ಕೆ.ಸುಭಾಷ್ ಚಂದ್ರ. ಹೋಬಳಿ ಘಟಕದ ಕೋಶ ಅಧ್ಯಕ್ಷರಾದ ಸಫಾರಿ ರಾಮಣ್ಣ. ಶರಣನ ಗೌಡ್ರು. ಮತ್ತು ಶಿಕ್ಷಕರಾದ ಕರಿ ಬಸಣ್ಣ. ಪ್ರಕಾಶ್ ಗೌಡ. ಎಂ.ಓ ಮಂಜುನಾಥ. ಲೋಕೇಶ್ ಆಲೂರ ಹೊಸಹಳ್ಳಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ವೀರೇಶ್.ಕೆ.ಹೊಸಹಳ್ಳಿ

