ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿ – ಡಾ, ಪ್ರಶಾಂತ. ರೂಮಗೊಂಡ.

ಅಲಮೇಲ ನ.03

ಥಲಸೇಮಿಯಾ ಕಾಯಿಲೆಯಿಂದ ಬಳಲುವ ಮಕ್ಕಳಿಗೆ. ಹಾಗೂ ಗರ್ಭಿಣಿಯರಿಗೆ. ಬಾಣತಿಯರಿಗೆ. ರಕ್ತದ ಅವಶ್ಯಕತೆ ಬೇಕಿಗಿರುವುದರಿಂದ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಡಾಕ್ಟರ್ ಪ್ರಶಾಂತ್ ರೂಮಗೊಂಡ ಹೇಳಿದರು ಅಲಮೇಲ ಪಟ್ಟಣದಲ್ಲಿ ಹಜರತ್ ಪೀರ ಗಾಲೀಬಸಾಬ ಜಾತ್ರಾ ನಿಮಿತ್ಯವಾಗಿ ಸಮುದಾಯ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ವಿಜಯಪುರ ಜಿಲ್ಲೆಯಲ್ಲಿ ೧೦೦ ಮಕ್ಕಳು ಥಲಸೇಮಿಯಾ ಕಾಯಿಲೆಯಿಂದ ಬಳಲುತ್ತಿದ್ದು ಅವರಿಗೆ ಪ್ರತಿ ತಿಂಗಳು ರಕ್ತ ನೀಡಿದ್ದಾರೆ ಅವರ ಜೀವ ರಕ್ಷಣೆ ಮಾಡಲು ಸಹಾಯವಾಗುತ್ತದೆ. ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಡ ರೋಗಿಗಳಿಗೆ. ಗರ್ಭಿಣಿಯರಿಗೆ.ಹಾಗೂ ಅನುಕೂಲ ವಾಗಲಿದೆ. ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರ ಆರಂಭಿಸಿದ್ದು.

ನಮ್ಮಲ್ಲಿ ರಕ್ತದಾನ ಮಾಡುವುದರಿಂದ ಬಡವರಿಗೆ ಅನುಕೂಲ ವಾಗಲಿದೆ ರಕ್ತದಾನ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗುಬೇಕು . ಎಂದು ಹೇಳಿದರು ಡಾಕ್ಟರ್ ಶ್ರೀಶೈಲ್ ಪಾಟೀಲ್. ಡಾಕ್ಟರ್ ಸಂದೀಪ್ ಪಾಟೀಲ್. ಮಾತನಾಡಿ ರಕ್ತದಾನ ಅತ್ಯಂತ ಶ್ರೇಷ್ಠವಾಗಿದ್ದು ತಾವು ಮಾಡುವ ರಕ್ತದಾನದಿಂದ ಎಷ್ಟು ಜನರ ಜೀವನವನ್ನು ರಕ್ಷಣೆ ಮಾಡಿದಂತೆ ಅದಕ್ಕೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಟಿ.ಎಚ್.ಓ. ಶಶಿಕಾಂತ ಮಂಜುನಾಥ್ ಆಕಾಶ್.ಡಾ. ವರುಣ ಪಾಟೀಲ್. ಡಾಕ್ಟರ್.ರೀತೇಶ ಪಾಟೀಲ್. ಡಾ ಜಿ ಎಸ್ ಪತ್ತಾರ್ ಡಾ. ಪೂಜಾ ಡಾ, ಆಜಯ ದೇಸಾಯಿ. ಬಾ.ಸುಮಾ. ಮಮದಾಪುರ. ಸಂದೇಶ.ಜೋಗೂರ. ಮಲ್ಲಿಕಾರ್ಜುನ್. ಪೂಜಾರಿ. ದತ್ತಾತ್ರೇಯ ಕುಲಕರ್ಣಿ ನಿಂಗಪ್ಪ ಭೋಡಕೆ.ಎಫ್.ಎ.ಶೇಕ್ ಸೋಮನಾಥ್ ಜಾಮುಗೊಂಡ .ಶಿವರಾಜ್ ಹುಲ್ಲೂರು.. ಸಂತೋಷ್ ಕೋರಿ ಸಂತೋಷ್ ಕುಂಬಾರ್ ಸಂತೋಷ್ ಹೊಸಮನಿ ಈರಣ್ಣ ಯಡ್ರಾಮಿ ಬಸಮ್ಮ ಗೌಡರ್ ಭಾಗ್ಯಶ್ರೀ ವಾಲಿಕಾರ ರವಿ ಚವಾಣ್ ಅರ್ಜುನ್ ರಾಠೋಡ್ ಶಿವಪ್ಪ ತಳವಾರ್ ಬಸವರಾಜ್ ಅಲಮೇಲ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆಯರ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button