ಉಪ ಕಂದಾಯ ಗ್ರಾಮವೆಂದು ಪರಿಗಣಿಸಿ – ಹಕ್ಕು ಪತ್ರಕ್ಕಾಗಿ ಪ್ರತಿಭಟನೆ.
ಗುರುಪುರ ನ.10

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಹೋಬಳಿ ಗುರುಪುರ ಗ್ರಾಮದಲ್ಲಿ ಸುಮಾರು 60 ವರ್ಷಗಳಿಂದ ವಾಸವಾಗಿರುವ 90 ಕುಟುಂಬಗಳಿಗೆ ಯಾವುದೇ ರೀತಿಯ ಹಕ್ಕು ಪತ್ರವಿಲ್ಲದಿದ್ದರೂ ಬರಗೇನಹಳ್ಳಿ ಗ್ರಾಮ ಪಂಚಾಯಿತಿಗೆ ಕಂದಾಯ ಕಟ್ಟಿ ಸರ್ಕಾರಿ ಸೌಲಭ್ಯಗಳಾದ ಆಶ್ರಯ ಯೋಜನೆ ಮತ್ತು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕಳೆದ 30 ವರ್ಷಗಳ ಹಿಂದೆಯೇ ಮನೆಗಳನ್ನು ನಿರ್ಮಿಸಿ ಕೊಂಡಿದ್ದು, ಈ ಮನೆಗಳಿಗೆ ವಿದ್ಯುತ್ ಸೌಲಭ್ಯವು ಇರುತ್ತದೆ ಮತ್ತು ಅಂಗನವಾಡಿ ಕೇಂದ್ರ, ಸರ್ಕಾರಿ ಶಾಲೆಗಳು ಹಾಗೂ ಮೂಲಭೂತ ಸೌಲಭ್ಯಗಳು ಒದಗಿಸಲಾಗಿದೆ ಎಂದು ದಲಿತ ಮುಖಂಡರಾದ ಬಾಲಕೃಷ್ಣರವರು ಹೇಳಿದರು. ಗುರುಪುರ ಗ್ರಾಮದ ಗುರುಪುರ ಗ್ರಾಮವು ಸರ್ವೆ ನಂಬರ್ 8 ರಲ್ಲಿ ಇದ್ದು 498 ಎಕರೆ ವಿಸ್ತೀರ್ಣವಿದ್ದು ಇದರಲ್ಲಿ 315 ಎಕರೆ ಅರಣ್ಯ, 180 ಎಕರೆ ಕಂದಾಯ ಜಾಗವಿರುತ್ತದೆ.

ಮತ್ತು ಮೂರು ಎಕರೆ ಹಿಂದೂ ಸ್ಮಶಾನವಿದ್ದು ಎರಡು ಜಾಗಗಳು ಅಂದರೆ 180 ಎಕರೆ ಮತ್ತು ಮೂರು ಎಕರೆ ಜಾಗವು ಎಲ್ಲಿದೆ ಎಂದು ಗುರುತಿಸದೆ ಏಕ ಪಕ್ಷೀಯವಾಗಿ ಅರಣ್ಯವೆಂದು ಪರಿಗಣಿಸಿ ಗುರುಪುರ ಗ್ರಾಮವನ್ನು ಕಂದಾಯ ಮತ್ತು ಉಪ ಕಂದಾಯ ಗ್ರಾಮವಾಗಿ ರಚಿಸುವ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಗುರುಪುರ ಗ್ರಾಮವನ್ನು ಉಪ ಕಂದಾಯ ಗ್ರಾಮವನ್ನಾಗಿ ರಚಿಸಿ ಸದರಿ ಜನವಸತಿ ಮನೆಗಳಿಗೆ ಖಾತೆಯನ್ನು ಮಾಡಿ ಕೊಡಬೇಕೆಂದು ಆಗ್ರಹಿಸಿದರು ಇದೇ ಸಂದರ್ಭದಲ್ಲಿ ತರೀಕೆರೆ ತಹಸಿಲ್ದಾರ್ ವಿಶ್ವಜಿತ್ ಮೆಹತಾ ರವರಿಗೆ ಮನವಿ ಪತ್ರ ಅರ್ಪಿಸಿದರು,ಮನವಿ ಪತ್ರ ಸ್ವೀಕರಿಸಿದ ತಹಶೀಲ್ದಾರ್ ರವರು ಉಪ ವಿಭಾಗ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರದಿಂದ ಉಪಕಂದಾಯ ಗ್ರಾಮ ರಚಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುನಿರಾಜು ಉಪಾಧ್ಯಕ್ಷರಾದ ಜಯಮ್ಮ ಸದಸ್ಯರಾದ ಪುರುಷೋತ್ತಮ್, ಚೇತನ್, ಪದ್ಮಮ್ಮ, ಕಲಾವತಿ, ಮೀನಾಕ್ಷಿ ಹಾಗೂ ಗುರುಪುರ ಗ್ರಾಮದ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎನ್.ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

