ವಸತಿ ನಿಲಯದ ವಿದ್ಯಾರ್ಥಿಗಳು ಕಳಪೆ ಆಹಾರ ಸೇವಿಸಿ ೯ ವಿದ್ಯಾರ್ಥಿನಿಯರು – ಅಸ್ವಸ್ಥತೆಯಾಗಿ ಆಸ್ಪತ್ರೆಗೆ ದಾಖಲು, ದಲಿತ ಸಂಘಟನೆಗಳಿಂದ ತೀವ್ರ ಕ್ರಮಕ್ಕೆ ಆಗ್ರಹ.

ದೇವರ ಹಿಪ್ಪರಗಿ ನ.17

ಸಮಾಜ ಕಲ್ಯಾಣ ವಿದ್ಯಾರ್ಥಿನಿಯರ ಮ್ಯಾಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ನವೆಂಬರ್ ೧೬ ರಂದು ರವಿವಾರ ರಾತ್ರಿ ೦೮:೩೦ ಘಂಟೆಗೆ ವಿದ್ಯಾರ್ಥಿನಿಯರು ಕಳಪೆ ಆಹಾರ ಸೇವಿಸಿ ಅಸ್ವಸ್ಥರಾಗಿದ್ದಾರೆ. ಘಟನೆ ಪಟ್ಟಣದ ಖಾಸಗಿ ಕಟ್ಟಡದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮ್ಯಾಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ರವಿವಾರ ರಾತ್ರಿ ಊಟ ಮಾಡಿದ ಒಂದು ಘಂಟೆಗೆ ನಂತರ ೯ ವಿದ್ಯಾರ್ಥಿಗಳು ತೀವ್ರವಾದ ಹೊಟ್ಟೆ ನೋವಿನಿಂದ ಒದ್ದಾಡುತ್ತಾ ವಾಂತಿಯಿಂದ ಬಳಲುತ್ತಿರುವ ಸಂಧರ್ಭದಲ್ಲಿ ಹತ್ತಿರದ ಜೈ ಭವಾನಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ೫ ವಿದ್ಯಾರ್ಥಿನಿಯರಿಗೆ ಪಟ್ಟಣದ ಮಳಖೇಡ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.

ಈ ರೀತಿಯಾಗಲು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ವಸತಿ ನಿಲಯಗಳಿಗೆ ಆಹಾರ ಧಾನ್ಯ ಪೂರೈಸುವ ಏಜೆನ್ಸಿಗಳು ಈ ಘಟನೆಗೆ ಮುಖ್ಯ ಕಾರಣ, ಏಜೆನ್ಸಿಯವರು ಸಂಪೂರ್ಣ ಕಳಪೆ ಮಟ್ಟದ ಆಹಾರ ಧಾನ್ಯವನ್ನು ಪೂರೈಕೆ ಮಾಡುತ್ತಾರೆ, ಈ ಆಹಾರವನ್ನು ಮಕ್ಕಳ ಸೇವನೆ ಮಾಡುವುದರಿಂದ ಈ ಘಟನೆ ಜರುಗಿದೆ. ತೀವ್ರವಾದ ಹೊಟ್ಟೆ ನೋವಿನಿಂದ ಒದ್ದಾಡುತ್ತಾ ವಾಂತಿಯಿಂದ ಬಳಲುತ್ತಿರುವುದಕ್ಕೆ ಕಾರಣ, ಆದ್ದರಿಂದ ಮಕ್ಕಳ ಜೀವನ ಜೊತೆಗೆ ಚೆಲ್ಲಾಟ ಆಡುತ್ತಿರುವ ಇಂತಹ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ಅಮಾನತ್ ಮಾಡಬೇಕು.

ಎಂದು ದಲಿತ ಪಟ್ಟಣದ ತಹಶೀಲ್ದಾರರ ಮುಖಾಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ವಿಜಯಪುರ ಇವರಿಗೆ ಮನವಿ ಸಲ್ಲಿಸಿದರು.ದಲಿತ ಮುಖಂಡರು ಬೇಡಿಕೆಗಳಾದ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರನ್ನು ಅಮಾನತ್ ಮಾಡಬೇಕು, ಆಹಾರ ಪೂರೈಕೆ ಮಾಡುವ ಏಜೆನ್ಸಿಯನ್ನು ಕಪ್ಪು ಪಟ್ಟಗೆ ಸೇರಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ರವಿವಾರ ನಡೆದಿರುವಂತಹ ಘಟನೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಬೇಕು ಈ ಎಲ್ಲಾ ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸಬೇಕು ಇಲ್ಲದಿದ್ದರೆ ಉಗ್ರವಾದ ಪ್ರತಿಭಟನೆ ಹಾಗೂ ಧರಣೆ ಸತ್ಯಾಗ್ರಹ ಮಾಡಬೇಕಾಗುತ್ತದೆ, ಎಂದು ದಲಿತ ಮುಖಂಡರು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಪ್ರಕಾಶ ಗುಡಿಮನಿ ರಾಜಕುಮಾರ ಸಿಂಧಗೇರಿ ಸಾಯಬಣ್ಣ ದಳಪತಿ ಬಸವರಾಜ ಇಂಗಳಗಿ ಪ್ರಶಾಂತ ಭೂತಾಳೆ ಯಮನೂರಿ ಹರಿಜನ ಭೀಮಣ್ಣ, ಪ್ರಲ್ಹಾದ ಸಿಂಧೆ ವಿಠ್ಠಲ ಕಡಕೋಳ ಅರವಿಂದ ದೊಡ್ಡಮನಿ ಮಾಂತೇಶ ಚಲವಾದಿ ಬಸ್ಸು ಕಡಕೋಳ ಮಹೇಶ ಗುಡಿಮನಿ ಕಾಂತು ಗುಡಿಮನಿ ಪರಶುರಾಮ ಹರಿಜನ ಅನಿಲ ಕನಮಡಿ ಶಂಕರ ಹೊಸಮನಿ ಇವರು ಎಲ್ಲರೂ ಉಪಸ್ಥಿತರಿದ್ದರು.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button