ಇಂದಿನಿಂದ ಶ್ರೀ ಜಟ್ಟಿಂಗೇಶ್ವರ ಮತ್ತು ಗ್ಯಾನಪ್ಪ ಮುತ್ತ್ಯಾನ – ಅದ್ದೂರಿ ಜಾತ್ರಾ ಮಹೋತ್ಸವ.
ವನಹಳ್ಳಿ ನ.18

ತಾಳಿಕೋಟಿ ತಾಲೂಕಿನ ವನಹಳ್ಳಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಜಟ್ಟಿಂಗೇಶ್ವರ ಹಾಗೂ ಗ್ಯಾನಪ್ಪಮುತ್ಯಾನ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 19 ರಿಂದ 23 ರ ವರೆಗೆ ಅದ್ದೂರಿಯಾಗಿ ಜರುಗುವುದು. ನ 19 ಬುಧವಾರ ದಂದು ಮಧ್ಯಾಹ್ನ 2 ಗಂಟೆಗೆ ಸಕಲವಾದ್ಯ ವೈಭವಗಳೊಂದಿಗೆ ನಡಹಳ್ಳಿ, ಬಳವಾಟ, ಮುದ್ದೇಬಿಹಾಳ ಹಾಗೂ ಯರಝರಿ ಗ್ರಾಮದ ಮುಖಾಂತರ ಕೃಷ್ಣಾ ನದಿಗೆ ಪಲ್ಲಕ್ಕಿಯು ಗಂಗಾಸ್ನಾನಕ್ಕೆ ಹೋಗುವುದು ರಾತ್ರಿ ಯರಝರಿ ಗ್ರಾಮದಲ್ಲಿ ಗ್ರಾಮದ ಜಟ್ಟಿಂಗೇಶ್ವರ ದೇವಸ್ಥಾನದಲ್ಲಿ ಡೊಳ್ಳಿನ ಹಾಡಕಿ ಜಾಗರಣೆ ಮಾಡುವುದು. ನ 20 ಗುರುವಾರ ದಂದು ಬೆಳಿಗ್ಗೆ 6 ಗಂಟೆಗೆ ಯರಝರಿ ಸಿದ್ದರಾಯ ಮುತ್ತ್ಯಾನ ಹಾಗೂ ವನಹಳ್ಳಿ ಜಟ್ಟಿಂಗೇಶ್ವರರ ಜೋಡು ಪಲ್ಲಕ್ಕಿ ಹಾಗೂ ಜೋಡು ಸತ್ತಿಗೆ ಯೊಂದಿಗೆ ಗಂಗೆಮಿನಿಯುವುದು. ರಾತ್ರಿ 8 ಗಂಟೆಯಿಂದ ಶ್ರೀ ಜಟ್ಟಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳಿಂದ ಶಿವಭಜನೆ. ರಾತ್ರಿ 11 ಗಂಟೆಗೆ ಗುಡಿಹಾಳ, ಬಳವಾಟ, ನಡಹಳ್ಳಿ ಗ್ರಾಮಸ್ಥರಿಂದ ಪಲ್ಲಕ್ಕಿಯ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ. ನ 21 ಶುಕ್ರವಾರ ದಂದು ಬೆಳ್ಳಿಗ್ಗೆ 5 ಗಂಟೆಗೆ ಡೊಳ್ಳು ವಾಲಗ, ವಾದ್ಯ ವೈಭವಗಳೊಂದಿಗೆ ಹಾಗೂ ಸ್ಥಳೀಯ ಚಟ್ಟೇರ ಅವರ ಕುದುರೆ ಕುಣಿತ ದೊಂದಿಗೆ ಜೋಡು ಪಲ್ಲಕ್ಕಿ ಉತ್ಸವ ಅದ್ದೂರಿ ಮೆರವಣಿಗೆಯ ಮುಖಾಂತರ ದೇವಸ್ಥಾನಕ್ಕೆ ಪಲ್ಲಕ್ಕಿಯನ್ನು ಕರೆತರುವುದು. ನಂತರ ಕಳಸಾರೋಹಣ ಮತ್ತು ಹೂವು ಮುಡಿಯುವುದು. ತದನಂತರ ಪೂಜಾ ವಿಧಿ ವಿಧಾನದೊಂದಿಗೆ ಶಿವನುಡಿ ಹೇಳುವುದು. ಮುಂಜಾನೆ 11 ಗಂಟೆಯಿಂದ ಪರ ಊರಿನಿಂದ ಬಂದ ಡೊಳ್ಳಿನ ಹಾಡಕಿ ಭಕ್ತಾದಿಗಳಿಂದ ಹಾಡಕಿ ಸೇವೆ ಜರುಗುವುದು. ಮಧ್ಯಾಹ್ನ 12 ಕ್ಕೆ ಅನ್ನ ಸಂತರ್ಪಣೆ ನಡೆಯುವುದು.

ನಂತರ ಪುರುಷರಿಂದ ಭಾರವಾದ ಕಲ್ಲು ಜಗ್ಗುವ ಸ್ಪರ್ಧೆ ಇರುತ್ತದೆ.ಒಂದನೇ ಬಹುಮಾನ 5001, ಎರಡನೇ 3001, ಮೂರನೇ 2001, ನಾಲ್ಕನೇ 1001 ರೂ ಬಹುಮಾನ ಇರುವುದು. ಹಾಗೂ 12;30 ಕ್ಕೆ ಜೋಡೆತ್ತುಗಳಿಂದ ಪುಟ್ಟಿ ಗಾಡಿರೆಸ್ ಇರುವುದು. ಒಂದನೆ ಬಹುಮಾನ 15001, ಎರಡನೇ 10001, ಮೂರನೇ 5001 ರೂ ಬಹುಮಾನ ಇರುವುದು. ಅಂದು ಬೆಳ್ಳಿಗ್ಗೆ 9 ಗಂಟೆಗೆ ಉಚಿತವಾಗಿ ಕಣ್ಣು ಎಲುಬು ಹಾಗೂ ಕೀಲು ತಪಾಸಣೆ ಇರುವುದು. ಹಾಗೂ ಸ್ವಯಂ ಪ್ರೇರಿತರಾಗಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಅಂದು ರಾತ್ರಿ 10 ಗಂಟೆಗೆ ಮಾಳಿಂಗೇಶ್ವರ ಡೊಳ್ಳಿನ ಗಾಯನ ಸಂಘ ಮುಗಳಿಹಾಳ ಹಾಗೂ ಶ್ರೀ ಭರಮದೇವರ ಡೊಳ್ಳಿನ ಗಾಯನ ಸಂಘ ಕರಜಗಿ ಇವರಿಂದ ಸುಪ್ರಸಿದ್ಧ ಡೊಳ್ಳಿನ ಹಾಡಕಿ ಇರುವುದು. ನ.22 ಶನಿವಾರ ದಂದು ಬೆಳ್ಳಿಗ್ಗೆ 8 ಗಂಟೆಗೆ ದೇವಸ್ಥಾನದಲ್ಲಿ ಶಿವವಾಣಿ ಜರುಗುವುದು. ಗುರು ಶಿಷ್ಯರ ಹಾಗೂ ಲಗಮ್ಮವ್ವನ ಸತ್ತಿಗೆಯೊಂದಿಗೆ ಈರಗಾರ ಪೂಜಾರಿಗಳು ಈರಗಾರ ಆಟ ಜರುಗುವುದು. ಭಕ್ತಾದಿಗಳಿಂದ 25 ಕ್ವೀಂಟಲ್ ಭಂಡಾರವನ್ನು ಪಲ್ಲಕ್ಕಿಯ ಮೆರವಣಿಗೆಯ ವೇಳೆ ಹಾರಿಸಲಾಗುವುದು. ನಂತರ ಮಧ್ಯಾಹ್ನ 12:30 ಕ್ಕೆ 2 ಹಲ್ಲಿನ ಟಗರಿನ ಕಾಳಗ ಪ್ರಥಮ 7001, ದ್ವೀತಿಯ 5001, ತೃತೀಯ 3001 ರೂ ಇರುವುದು. ನಂತರ 4 ಹಲ್ಲಿನ ಟಗರಿನ ಕಾಳಗ ಇರುವುದು. ಪ್ರಥಮ 11001, ದ್ವೀತಿಯ 7001, ತೃತೀಯ 5001 ರೂಪಾಯಿ ಬಹುಮಾನ ಇರುವುದು. ನಂತರ ಡೊಳ್ಳಿನ ವಾಲಗ ದೊಂದಿಗೆ 11 ಪಲ್ಲಕ್ಕಿಗಳ ಮೆರವಣಿಗೆ ಜೋತೆಗೆ ಮೂಲ ಗದ್ದುಗೆಗೆ ತಲುಪುವುದು. ನ.22 ಮತ್ತು 23 ರಂದು ವನಹಳ್ಳಿ ಗ್ರಾಮದ ಲೆಜೆಂಡ್ ಕ್ರಿಕೆಟ್ ಟೀಮ್ ವತಿಯಿಂದ ಓಪನ್ ಕ್ರಿಕೆಟ್ ಟೂರ್ನಮೆಂಟ್ ಜರುಗುವುದು. ಪ್ರಥಮ 10001, ದ್ವೀತಿಯ 7001, ತೃತೀಯ 5001 ರೂಪಾಯಿ ಇರುತ್ತದೆ. ಸೂಚನೆಗಳನ್ನು ಮೈದಾನದಲ್ಲಿ ತಿಳಿಸಲಾಗುವುದು ಎಂದು ಕಮೀಟಯು ತಿಳಿಸಲಾಗಿದೆ.
ವರದಿ:ಜಿ.ಎನ್ ಬೀರಗೊಂಡ (ಮುತ್ತು).

