ಕಾಲುವೆಯಲ್ಲಿ ಮುಳುಗಿ ಮೃತ ಪಟ್ಟವರ ಕುಟುಂಬಕ್ಕೆ – ನಡಹಳ್ಳಿ ಕುಟುಂಬ ಸಹಾಯ ಧನ ವಿತರಿಸಿದರು.
ಮುದ್ದೇಬಿಹಾಳ ಡಿ.10

ಕಳೆದ ತಿಂಗಳು ತಾಲೂಕಿನ ಶಿರೋಳ ಗ್ರಾಮದ ಹತ್ತಿರ ಇರುವ ಕಾಲುವೆಗೆ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಜೀವ ಕಳೆದು ಕೊಂಡಿದ್ದ ಯುವತಿ ಹಾಗೂ ಅವಳನ್ನು ಬದುಕಿಸಲು ಇಬ್ಬರು ಯುವಕರು ಹೋಗಿ ಮೃತ ಪಟ್ಟ ಒಂದೇ ಕುಟುಂಬದ ಮೂವರ ಕುಟುಂಬಕ್ಕೆ ಬಿಜೆಪಿ ರೈತ ಮೋರ್ಚ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್ ಪಾಟೀಲ್ ನಡಹಳ್ಳಿ, ವಾಗ್ದಾನ ಮಾಡಿದಂತೆ ಒಂದು ಲಕ್ಷ ರೂಗಳನ್ನು, ಅವರ ಪುತ್ರ ಉದ್ಯಮಿ ಭರತ್ ಗೌಡ ಪಾಟೀಲ್ ನಡಹಳ್ಳಿ ಸಂತ್ರಸ್ತ ಕುಟುಂಬದವರಿಗೆ ಹಸ್ತಾಂತರಿಸಿದರು. ನಡಹಳ್ಳಿ ಕುಟುಂಬ ಸದಾ ನೊಂದವರು, ಸಂಕಷ್ಟದಲ್ಲಿರುವವರ ಜೊತೆಗೆ ಸದಾ ಇರಲಿದೆ ಎಂದು ಹೇಳಿದರು. ಸಂತ್ರಸ್ತ ಕುಟುಂಬದ ಚೆನ್ನಪ್ಪ ಕೊನ್ನೂರ್, ಹನುಮಂತ ಕೊಣ್ಣೂರ್, ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ್ ಪಂಪನ್ನವರ್, ಪ್ರಧಾನ ಕಾರ್ಯದರ್ಶಿ ಸಂಜು ಬಾಗೇವಾಡಿ, ಮುತ್ತು ಹುಣಶ್ಯಾಳ, ಶ್ರೀಶೈಲ್ ದೊಡಮನಿ, ರಾಜ್ ಶೇಖರ್ ಹೋಳಿ, ಭೀಮಣ್ಣ ದಾಸರ್, ಸೇರಿದಂತೆ ಹಲವರು ಇದ್ದರು.
ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ ಸಂಕನಾಳ ಮುದ್ದೇಬಿಹಾಳ

