🔥 ಗಣಿ ಅಧಿಕಾರಿಗಳ ಐಷಾರಾಮಿ ಜೀವನದ ಹಿಂದೆ ಅಕ್ರಮ ಮಣ್ಣಿನ ವಾಸನೆ? ಲೋಕಾಯುಕ್ತ ದಾಳಿಗೆ ಸಾರ್ವಜನಿಕರ ಆಗ್ರಹ!📍 ಕೆಂಪು ಮಣ್ಣಿನ ಲೂಟಿ – ಭ್ರಷ್ಟ ಅಧಿಕಾರಿಗಳ ಕೋಟಿ ಕೋಟಿ ಹಗರಣ..!

ಉಡುಪಿ ಡಿ.20

ಜಿಲ್ಲೆಯ ಬ್ರಹ್ಮಾವರ ತಾಲೂಕಿನಲ್ಲಿ ಕೆಂಪು ಮಣ್ಣಿನ ಅಕ್ರಮ ಗಣಿಗಾರಿಕೆ ಹೆಮ್ಮರವಾಗಿ ಬೆಳೆದಿದ್ದು, ತಾಲೂಕಿನ ಸರ್ಕಾರಿ ಮತ್ತು ಆರ್‌.ಎಸ್ (RS) ಜಾಗಗಳು ಮಾಫಿಯಾದ ಪಾಲಾಗುತ್ತಿವೆ. ಈ ಲೂಟಿಯಲ್ಲಿ ಕೇವಲ ದಂಧೆಕೋರರಲ್ಲ, ಬದಲಾಗಿ ಇಡೀ ಇಲಾಖೆಯೇ ಶಾಮೀಲಾಗಿರುವುದು ಈಗ ರಾಜ್ಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

🛑 ದಂಧೆಯ ಒಳ ಸಂಚು, ಅಧಿಕಾರಿಗಳೇ ದಂಧೆಕೋರರ ರಕ್ಷಕರು..!

ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿರುವ ಗಂಭೀರ ಆರೋಪವೆಂದರೆ, ಸ್ಥಳೀಯ ಕಂದಾಯ ಇಲಾಖೆ, ಪೊಲೀಸ್ ಠಾಣೆ ಮತ್ತು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಂಧೆಕೋರರ ಜೊತೆ ಅಪವಿತ್ರ ಮೈತ್ರಿ ಮಾಡಿಕೊಂಡಿದ್ದಾರೆ. ಹಗಲು-ರಾತ್ರಿ ಜೆಸಿಬಿಗಳು ಮಣ್ಣು ಅಗೆಯುತ್ತಿದ್ದರೂ, ನೂರಾರು ಟಿಪ್ಪರ್‌ಗಳು ಓಡಾಡುತ್ತಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಯಾಕೆ?

💰 ಗಣಿ ಅಧಿಕಾರಿಗಳ ಐಶ್ವರ್ಯದ ರಹಸ್ಯವೇನು..?

ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಈ ಅಕ್ರಮಕ್ಕೆ ರಕ್ಷಾಕವಚದಂತೆ ನಿಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅಕ್ರಮ ಆಸ್ತಿ ಗಳಿಕೆ:-

ಸಾಧಾರಣ ವೇತನ ಪಡೆಯುವ ಅಧಿಕಾರಿಗಳು ಇಂದು ಬ್ರಹ್ಮಾವರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಆಸ್ತಿ, ಐಷಾರಾಮಿ ಕಾರು ಹಾಗೂ ಬಂಗಲೆಗಳನ್ನು ಹೊಂದಿದ್ದಾರೆ.

ಐಷಾರಾಮಿ ಬದುಕು:-

ಮಣ್ಣಿನ ದಂಧೆಯಿಂದ ಬರುತ್ತಿರುವ ‘ಕಮಿಷನ್’ ಹಣದಿಂದಲೇ ಈ ಅಧಿಕಾರಿಗಳ ಐಶ್ವರ್ಯ ವೃದ್ಧಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಾಯುಕ್ತ ದಾಳಿಗೆ ಆಗ್ರಹ:-

“ಈ ಭ್ರಷ್ಟ ಅಧಿಕಾರಿಗಳ ಬ್ಯಾಂಕ್ ಖಾತೆ ಮತ್ತು ಆಸ್ತಿಯನ್ನು ಪರಿಶೀಲಿಸಿದರೆ ದಂಧೆಯ ಅಸಲಿ ಮುಖವಾಡ ಕಳಚಲಿದೆ. ಕೂಡಲೇ ಲೋಕಾಯುಕ್ತರು ಇವರ ಮೇಲೆ ದಾಳಿ ನಡೆಸಬೇಕು” ಎಂದು ಸ್ಥಳೀಯ ಹೋರಾಟಗಾರರು ಒತ್ತಾಯಿಸಿದ್ದಾರೆ.

📢 ವರದಿಯ ಮುಖ್ಯಾಂಶಗಳು:

🚜 ಸರ್ಕಾರಿ ಭೂಮಿ ಬಲಿ:-

ಬ್ರಹ್ಮಾವರದ ಬೆಲೆ ಬಾಳುವ ಸರ್ಕಾರಿ ಜಾಗಗಳಲ್ಲಿ ಅಕ್ರಮವಾಗಿ ಗುಡ್ಡಗಳನ್ನು ಕುಸಿಯುವಂತೆ ಮಣ್ಣು ತೆಗೆಯಲಾಗುತ್ತಿದೆ.

👮 ಪೊಲೀಸ್-ಕಂದಾಯ ಇಲಾಖೆ ಮೌನ:-

ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು, ಮಾಫಿಯಾಕ್ಕೆ ಫುಲ್ ಪ್ರೊಟೆಕ್ಷನ್!

📉 ರಾಜಸ್ವ ಸೋರಿಕೆ:-

ಸರ್ಕಾರಕ್ಕೆ ಸಲ್ಲಬೇಕಾದ ಕೋಟ್ಯಂತರ ರೂಪಾಯಿ ರಾಯಲ್ಟಿ ಹಣ ಅಧಿಕಾರಿಗಳ ಮತ್ತು ದಂಧೆಕೋರರ ಜೇಬು ಸೇರುತ್ತಿದೆ.

⚠️ ಪರಿಸರಕ್ಕೆ ಕುತ್ತು:-

ಅವೈಜ್ಞಾನಿಕ ಗಣಿಗಾರಿಕೆಯಿಂದ ಭವಿಷ್ಯದಲ್ಲಿ ಭೂಕುಸಿತದ ಭೀತಿ ಎದುರಾಗಿದೆ.

💥 ಸಚಿವರಿಗೆ ನೇರ ಸವಾಲು:-

ಕಂದಾಯ ಸಚಿವರೆ ಹಾಗೂ ಗಣಿ ಸಚಿವರೆ ಗಮನಿಸಿ! ಬ್ರಹ್ಮಾವರದಲ್ಲಿ ನಿಮ್ಮ ಇಲಾಖೆಯ ಅಧಿಕಾರಿಗಳೇ ಸರ್ಕಾರಿ ಆಸ್ತಿಯನ್ನು ಮಾರಾಟಕ್ಕಿಟ್ಟಿದ್ದಾರೆ.

ಸಾರ್ವಜನಿಕರ ಆಕ್ರೋಶದ ಕಟ್ಟೆ ಒಡೆಯುವ ಮುನ್ನ ಈ ಭ್ರಷ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವಿರಾ? ಅಥವಾ ಮಾಫಿಯಾದ ಹಣದ ಪ್ರಭಾವಕ್ಕೆ ಸರ್ಕಾರವೂ ಮೌನವಾಗುತ್ತದೆಯೇ? “ಬ್ರಹ್ಮಾವರದ ಮಣ್ಣು ಮಾರಾಟವಾಗುತ್ತಿಲ್ಲ, ಇಲ್ಲಿನ ಅಧಿಕಾರಿಗಳ ಪ್ರಾಮಾಣಿಕತೆ ಮಾರಾಟವಾಗಿದೆ. ಕೂಡಲೇ ಉನ್ನತ ಮಟ್ಟದ ತನಿಖೆಯಾಗದಿದ್ದರೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು” ಸಾರ್ವಜನಿಕರ ಎಚ್ಚರಿಕೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button