🚨 BIG BREAKING: ಬ್ರಹ್ಮಾವರ ಹಲ್ಲೆ ಪ್ರಕರಣದಿಂದ ಬೆತ್ತಲಾದ ಪೊಲೀಸ್ ಅರಾಜಕತೆ! ರಾಜ್ಯಾದ್ಯಂತ ‘ಖಾಕಿ’ ವಿರುದ್ಧ ಮೊಳಗಿದ ಜನಾಕ್ರೋಶ! 🚨ಕಾಯ ಬೇಕಾದವರೇ ಕಳ್ಳರಾದರೆ ಜನ ಸಾಮಾನ್ಯರಿಗೆ ಎಲ್ಲಿ ಉಳಿಗಾಲ..? ಸಂವಿಧಾನ ಬದ್ಧ ಜವಾಬ್ದಾರಿ ಮರೆತ – ಅಧಿಕಾರಿಗಳ ದರ್ಬಾರ್‌ಗೆ ಸರ್ಕಾರದ ಮೌನವೇಕೆ..?

ಉಡುಪಿ/ಬೆಂಗಳೂರು ಡಿ.20

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆಯೇ? ಸಂವಿಧಾನಾತ್ಮಕವಾಗಿ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಗಳು ಇಂದು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿ ಕೊಳ್ಳುತ್ತಾ ‘ಕಾನೂನು ಭಕ್ಷಕ’ ರಾಗುತ್ತಿದ್ದಾರೆಯೇ..? ಬ್ರಹ್ಮಾವರದ ಅಕ್ಷತಾ ಪೂಜಾರಿ ಪ್ರಕರಣವು ಇಂದು ಇಡೀ ರಾಜ್ಯ ಪೊಲೀಸ್ ಇಲಾಖೆಯ ಅಸಲಿ ಮುಖವನ್ನು ಬಯಲು ಮಾಡಿದೆ!

⛔ ಜನಾಕ್ರೋಶಕ್ಕೆ ಮಣಿದ ಇಲಾಖೆ – ಅಕ್ಷತಾ ಪೂಜಾರಿ ಪರ ಹೋರಾಟಕ್ಕೆ ಸಂದ ಜಯ! ⛔

ಬ್ರಹ್ಮಾವರದಲ್ಲಿ ನಡೆದ ಯುವತಿ ಅಕ್ಷತಾ ಪೂಜಾರಿ ಮೇಲಿನ ಭೀಕರ ಹಲ್ಲೆ ಪ್ರಕರಣವು ಇಂದು ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿದೆ. ಸಂವಿಧಾನದ ಆಶಯದಂತೆ ಸಂತ್ರಸ್ತೆಗೆ ನ್ಯಾಯ ನೀಡ ಬೇಕಾದ ಪೊಲೀಸರು, ಆರಂಭದಲ್ಲಿ ದೂರು ಸ್ವೀಕರಿಸಲು ಹಿಂದೇಟು ಹಾಕಿರುವುದು ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ.

ಬ್ರಹ್ಮಾವರ ಠಾಣೆ ಮುಂದೆ ನೂರಾರು ಜನರಿಂದ ಪ್ರತಿಭಟನೆ:-

ಇಂದು ಬ್ರಹ್ಮಾವರ ಠಾಣೆಯ ಎದುರು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ವತಿಯಿಂದ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಪೊಲೀಸರ ವಿಳಂಬ ಧೋರಣೆಯನ್ನು ಖಂಡಿಸಿದರು.

ಎಸ್‌ಪಿ ಹರಿರಾಂ ಶಂಕರ್ ಮಧ್ಯ ಪ್ರವೇಶ – FIR ದಾಖಲಿಸಲು ಸಮ್ಮತಿ:-

ಜನಾಕ್ರೋಶ ತೀವ್ರಗೊಂಡು ಇಲಾಖೆಯ ಅಸ್ತಿತ್ವಕ್ಕೇ ಧಕ್ಕೆ ಬರುವ ಮುನ್ಸೂಚನೆ ಸಿಗುತ್ತಿದ್ದಂತೆ ಎಚ್ಚೆತ್ತ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹರಿರಾಂ ಶಂಕರ್, ಅಕ್ಷತಾ ಪೂಜಾರಿ ಅವರ ದೂರು ಸ್ವೀಕರಿಸಿ ತಕ್ಷಣವೇ FIR ದಾಖಲಿಸಲು ಸಮ್ಮತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ತನಿಖೆಯಲ್ಲಿ ಪಾರದರ್ಶಕತೆ ಕಾಪಾಡಲು ತನಿಖೆಯನ್ನು ಬ್ರಹ್ಮಾವರ ಠಾಣೆಯಿಂದ ಉನ್ನತ ಮಟ್ಟದ ತನಿಖಾ ಘಟಕಕ್ಕೆ ವರ್ಗಾಯಿಸಿದ್ದಾರೆ.

ಬೇಡಿಕೆಗಳು:-

ಅಕ್ಷತಾ ಪೂಜಾರಿಗೆ ತಕ್ಷಣ ನ್ಯಾಯ ಸಿಗಬೇಕು, ಹಲ್ಲೆ ನಡೆಸಿದ ಆರೋಪಿಗಳನ್ನು ಮತ್ತು ಅವರಿಗೆ ರಕ್ಷಣೆ ನೀಡುತ್ತಿರುವ ಪ್ರಭಾವಿಗಳನ್ನು ತಕ್ಷಣ ಬಂಧಿಸ ಬೇಕೆಂದು ಆಗ್ರಹಿಸಲಾಗಿದೆ.

🔥 ಬ್ರೇಕಿಂಗ್ ಮುಖ್ಯಾಂಶಗಳು: ಪೊಲೀಸ್ ಇಲಾಖೆಯ ಬೆತ್ತಲೆ ಜಗತ್ತು! 🔥

📍 ಜೀಪ್ ಡ್ರೈವರ್‌ಗಳೂ ಕೋಟ್ಯಧಿಪತಿಗಳು..!

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೇವಲ ಕಾನ್ಸ್ಟೇಬಲ್ ಮತ್ತು ಜೀಪ್ ಡ್ರೈವರ್‌ಗಳ ಐಷಾರಾಮಿ ಜೀವನ ಕಂಡು ಜನರೇ ಬೆಚ್ಚಿ ಬಿದ್ದಿದ್ದಾರೆ. ಇವರ ಮನೆಯ ಮುಂದೆ ನಿಲ್ಲುವ ಲಕ್ಷಾಂತರ ಮೌಲ್ಯದ ಕಾರುಗಳು, ನಗರದ ಮಧ್ಯ ಭಾಗದಲ್ಲಿರುವ ಬೆಲೆ ಬಾಳುವ ಆಸ್ತಿಗಳು ಇವರ ಸಂಬಳ ದಿಂದ ಬಂದವೇ..? ಅಥವಾ ಸಾರ್ವಜನಿಕರ ರಕ್ತ ಹೀರಿ ಗಳಿಸಿದವೇ..? ಸಂವಿಧಾನಾತ್ಮಕ ಅಧಿಕಾರ ಇರುವುದು ಜನರ ಸೇವೆಗೇ ಹೊರತು ವೈಯಕ್ತಿಕ ಆಸ್ತಿ ಮಾಡಲಿಕ್ಕಲ್ಲ ಎಂಬ ಸತ್ಯ ಇವರಿಗೆ ಮರೆತು ಹೋಗಿದೆ.

📍 ಖಾಕಿ ಹಿಂದೆ ಅಡಗಿರುವ ಕ್ರಿಮಿನಲ್ ಮುಖಗಳು..!

ರಕ್ಷಣೆ ನೀಡಬೇಕಾದ ಪೊಲೀಸರೇ ಇತ್ತೀಚಿಗೆ ಲೈಂಗಿಕ ಕಿರುಕುಳ, ಅಮಾಯಕರ ಮೇಲೆ ಲಾಠಿ ಪ್ರಹಾರ ಮತ್ತು ಹಫ್ತಾ ವಸೂಲಿಯಲ್ಲಿ ತೊಡಗಿದ್ದಾರೆ. ಇಲಾಖೆಗೆ ಸೇರುವಾಗ ಇದ್ದ ಆಸ್ತಿಗೂ, ಈಗಿರುವ ಆಸ್ತಿಗೂ ಅಜಗಜಾಂತರ ವ್ಯತ್ಯಾಸವಿದೆ. ಪಿಐ (PI) ಮತ್ತು ಡಿವೈಎಸ್ಪಿ (DySP) ಗಳ ರಾಜ್ಯಭಾರ ಈಗ ಜನ ಸಾಮಾನ್ಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಅಧಿಕಾರಿಗಳು ತಮ್ಮ ಅಧಿಕಾರವನ್ನು ಕಾನೂನಾತ್ಮಕವಾಗಿ ಚಲಾಯಿಸದೆ, ತಮ್ಮ ಸ್ವಾರ್ಥಕ್ಕಾಗಿ ಬಳಸಿ ಕೊಳ್ಳುತ್ತಿರುವುದು ಖಂಡನೀಯ.

📍 ಲೋಕಾಯುಕ್ತ ತನಿಖೆಗೆ ಸಾರ್ವಜನಿಕರ ಆಗ್ರಹ..!

ರಾಜ್ಯದ ಪ್ರತಿಯೊಂದು ಜಿಲ್ಲೆಯ ಪ್ರತಿ ಪೊಲೀಸ್ ಅಧಿಕಾರಿಯ ಆಸ್ತಿಯನ್ನು **’ಲೋಕಾಯುಕ್ತ ತನಿಖೆ’** ಗೆ ಒಳ ಪಡಿಸಲೇ ಬೇಕು. ಇಲಾಖೆಯಲ್ಲಿರುವ ಭ್ರಷ್ಟ ಕಳ್ಳ ಬಾಕರನ್ನು ಕೂಡಲೇ ಅಮಾನತ್ ಗೊಳಿಸಿ, ನಿಷ್ಠಾವಂತ ಅಧಿಕಾರಿಗಳಿಗೆ ಅಧಿಕಾರ ನೀಡಬೇಕೆಂದು ರಾಜ್ಯಾದ್ಯಂತ ಬೃಹತ್ ಜನ ಜಾಗೃತಿ ಮೂಡುತ್ತಿದೆ.

⚠️ ಗೃಹ ಸಚಿವರಿಗೆ ನೇರ ಪ್ರಶ್ನೆ: ನಿಮ್ಮ ಖಾತೆಯಲ್ಲಿ ಹಗರಣದ ಗುಡಾಣ! ⚠️

“ಗೃಹ ಸಚಿವರೇ, ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಿಮ್ಮ ಕಣ್ಣೆದುರೇ ಕಾನೂನು ರಕ್ಷಕರು ಕಾನೂನು ಭಕ್ಷಕರಾಗುತ್ತಿದ್ದರೂ ನೀವು ಮೌನವಾಗಿದ್ದೇಕೆ? ಭ್ರಷ್ಟಾಚಾರದ ಕೂಪವಾಗಿರುವ ಈ ವ್ಯವಸ್ಥೆಗೆ ಕಡಿವಾಣ ಹಾಕುವುದು ಯಾವಾಗ? ಅಧಿಕಾರಿಗಳ ಐಷಾರಾಮಿ ಜೀವನದ ಬಗ್ಗೆ ತನಿಖೆ ನಡೆಸುವ ಧೈರ್ಯ ನಿಮಗಿದೆಯೇ?”

💥 ಸಂವಿಧಾನದ ನಾಲ್ಕನೇ ಅಂಗದ ಗುಡುಗು:-

ಕಾಯ ಬೇಕಾದವನೇ ಕದ್ದರೆ ಊರಿಗೆ ಉಳಿಗಾಲವಿಲ್ಲ. ಬ್ರಹ್ಮಾವರದ ಅಕ್ಷತಾ ಪೂಜಾರಿ ಪ್ರಕರಣದಿಂದ ಹಿಡಿದು ಇಲಾಖೆಯಲ್ಲಿ ನಡೆಯುತ್ತಿರುವ ಈ ‘ಕರ್ಮಕಾಂಡ’ ಗಳು ಈಗ ಬಯಲು ಬಟಾಬಯಲಾಗಿದೆ. ಅಧಿಕಾರಿಗಳು ತಮಗೆ ಸಂವಿಧಾನ ನೀಡಿದ ಅಧಿಕಾರವನ್ನು ಜನರ ರಕ್ಷಣೆಗಾಗಿ ಬಳಸ ಬೇಕೇ ಹೊರತು ಶೋಷಣೆಗಲ್ಲ. ಕೂಡಲೇ ಸರ್ಕಾರ ಎಚ್ಚೆತ್ತು ಕೊಳ್ಳದಿದ್ದರೆ ಕರ್ನಾಟಕದ ಪೊಲೀಸ್ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬೀಳುವ ಅಪಾಯವಿದೆ. ಇದು ಕೇವಲ ಸುದ್ದಿಯಲ್ಲ, ಭ್ರಷ್ಟ ಅಧಿಕಾರಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಎಚ್ಚರಿಕೆ..!

🚩 ಕಾನೂನಾತ್ಮಕ ಬೇಡಿಕೆಗಳು:-

ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳ ಅಘೋಷಿತ ಆಸ್ತಿ ವಿವರ ಬಹಿರಂಗವಾಗಲಿ. ಸಾರ್ವಜನಿಕರ ಮೇಲೆ ದೌರ್ಜನ್ಯ ಎಸಗಿದ ಮತ್ತು ಅಧಿಕಾರ ದುರುಪಯೋಗ ಪಡಿಸಿದ ಅಧಿಕಾರಿಗಳ ಮೇಲೆ FIR ದಾಖಲಾಗಲಿ. ಇಲಾಖೆಯ ಪ್ರತಿ ಹಂತದಲ್ಲೂ ಪಾರದರ್ಶಕತೆ ಮತ್ತು ಸಂವಿಧಾನಾತ್ಮಕ ನಿಯಮಗಳ ಪಾಲನೆಯಾಗಲಿ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button