🚨 ರಾಜ್ಯ ಮಟ್ಟದ ಬ್ರೇಕಿಂಗ್ ನ್ಯೂಸ್ 🚨💠 ಅಜಿತ್ ಕುಮಾರ್ ಶೆಟ್ಟಿ ಅವರ – ಜನಪರ ಹೋರಾಟಕ್ಕೆ ಸಂದ ಜಯ.

ಉಡುಪಿ ಡಿ.23

📌 ಮುಖ್ಯಾಂಶ:-

ಯುವ ನಾಯಕ ಅಜಿತ್ ಕುಮಾರ್ ಶೆಟ್ಟಿ ಹೋರಾಟಕ್ಕೆ ಬಿಗ್ ಸಕ್ಸಸ್: ಕುಂದಾಪುರ ಭಾಗಕ್ಕೆ ಹೊಸ KSRTC ಬಸ್ ಮಂಜೂರು!

ಉಡುಪಿ ರಾಜ್ಯದ ಕರಾವಳಿ ಭಾಗದ ಸಾರಿಗೆ ವ್ಯವಸ್ಥೆಯಲ್ಲಿ ಇಂದು ಮಹತ್ವದ ಬದಲಾವಣೆಯಾಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ಭಾಗದ ಗ್ರಾಮೀಣ ಜನರ ದಶಕಗಳ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಕುಮಾರ್ ಶೆಟ್ಟಿ ಅವರ ಅವಿರತ ಪ್ರಯತ್ನದ ಫಲವಾಗಿ, ಕುಂದಾಪುರದಿಂದ ಕೋಟ, ಗೋಳಿಯಂಗಡಿ, ಮಂದಾರ್ತಿ ಮತ್ತು ಸೈಬರಕಟ್ಟೆ ಮಾರ್ಗಗಳಿಗೆ ಹೊಸ KSRTC ಬಸ್ ಸೇವೆ ಅಧಿಕೃತವಾಗಿ ಮಂಜೂರಾಗಿದೆ.

ಸಾರಿಗೆ ಸಚಿವರಿಂದ ಹಸಿರು ನಿಶಾನೆ:-

ಈ ಮಾರ್ಗಗಳಲ್ಲಿ ಸರ್ಕಾರಿ ಬಸ್‌ಗಳ ಕೊರತೆಯಿಂದಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯ ಲಾಭ ಪಡೆಯಲು ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಅಜಿತ್ ಕುಮಾರ್ ಶೆಟ್ಟಿ ಅವರು, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರನ್ನು ಖುದ್ದಾಗಿ ಭೇಟಿ ಮಾಡಿ, ಈ ಭಾಗದ ಭೌಗೋಳಿಕ ಪರಿಸ್ಥಿತಿ ಮತ್ತು ಬಸ್ ಸೇವೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿ ಕೊಟ್ಟಿದ್ದರು. ಅವರ ಪ್ರಾಮಾಣಿಕ ಮನವಿಗೆ ಸ್ಪಂದಿಸಿದ ಸಚಿವರು ತಕ್ಷಣವೇ ಬಸ್ ಮಂಜೂರಾತಿಗೆ ಆದೇಶಿಸಿದ್ದಾರೆ.

ಯಾರಿಗೆ ಲಾಭ..? ಮಹಿಳೆಯರಿಗೆ:-

ಈ ಮಾರ್ಗದ ಮಹಿಳೆಯರು ಇನ್ಮುಂದೆ ‘ಶಕ್ತಿ’ ಯೋಜನೆಯಡಿ ಉಚಿತವಾಗಿ ಪ್ರಯಾಣಿಸಬಹುದು.

ವಿದ್ಯಾರ್ಥಿಗಳಿಗೆ:-

ನೂರಾರು ವಿದ್ಯಾರ್ಥಿಗಳಿಗೆ ಕಾಲೇಜು ಮತ್ತು ಶಾಲೆಗಳಿಗೆ ತೆರಳಲು ಸುರಕ್ಷಿತ ಸಾರಿಗೆ ವ್ಯವಸ್ಥೆ ಲಭ್ಯವಾಗಲಿದೆ.

ಗ್ರಾಮೀಣ ಜನರಿಗೆ:-

ಖಾಸಗಿ ಬಸ್‌ಗಳ ಅವಲಂಬನೆ ತಪ್ಪಲಿದ್ದು, ನಿತ್ಯ ಪ್ರಯಾಣದ ಆರ್ಥಿಕ ಹೊರೆ ಕಡಿಮೆಯಾಗಲಿದೆ.

ಅಭಿನಂದನೆಗಳ ಮಹಾಪೂರ:-

ಗ್ರಾಮೀಣ ಭಾಗದ ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡಿ, ಅಸಾಧ್ಯವೆಂದುಕೊಂಡಿದ್ದ ಬಸ್ ಸೇವೆಯನ್ನು ಮಂಜೂರು ಮಾಡಿಸಿದ ಅಜಿತ್ ಕುಮಾರ್ ಶೆಟ್ಟಿ ಅವರಿಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಹಾಗೂ ಈ ಭಾಗದ ಸಾರ್ವಜನಿಕರು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧನೆಯು ಯುವ ನಾಯಕತ್ವದ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button