ತಾಲೂಕ ಎ.ಪಿ.ಎಂ.ಸಿ ಕಟ್ಟಡ ಭೂಮಿ ಪೂಜೆ ನೆರವೇರಿಸಿದ – ಶಾಸಕ ಅಶೋಕ್ ಮನಗೂಳಿ.

ಆಲಮೇಲ ಡಿ.25

2025 -26 ನೇ. ಸಾಲಿನ ಆಲಮೇಲ ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ನೂತನ ಆಡಳಿತ ಕಛೇರಿ ನಿರ್ಮಿಸುವ ನಿಟ್ಟಿನಲ್ಲಿ ಮಂಜೂರಾಗಿರುವ 30 ಲಕ್ಷ ರೂ ಮೊತ್ತದ ಕಾಮಗಾರಿಗೆ ಭೂಮಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕಟ್ಟಡವನ್ನು ಅಚ್ಚುಕಟ್ಟಾಗಿ ನಿರ್ಮಾಣ ಗೊಳಿಸಿ ಎಂದು ಹೇಳುವುದರ ಜೊತೆಗೆ ಅಧಿಕಾರಿಗಳಿಗೆ ರೈತರ ಕುಂದು ಕೊರತೆಗಳಿಗೆ ಸ್ಪಂದಿಸುವಂತೆ ಸಲಹೆ ನೀಡಿದ ಸಿಂದಗಿ ಶಾಸಕರಾದ ಶ್ರೀ. ಅಶೋಕ್ ಮನಗೂಳಿ.

ಇದೆ ಸಂದರ್ಭದಲ್ಲಿ ಆಲಮೇಲದ ಶ್ರೀ ಪರಮ ಪೂಜ್ಯ ಶ್ರೀಶೈಲ ಆಲಹಳ್ಳಿ ಮಠ ಶ್ರೀ ಷ.ಬ್ರ ಸಂಗನಬಸವ ಶಿವಾಚಾರ್ಯರು ಅಜ್ಜುಣಗಿ ಮಠ ಆಲಮೇಲ ಇದ್ದರು ಎಪಿಎಂಸಿ ಅಧ್ಯಕ್ಷರಾದ. ಶ್ರೀ ಬಸವರಾಜ ಬಾಗೇವಾಡಿ ಉಪಾಧ್ಯಕ್ಷರು. ಶ್ರೀ. ಶಿವಶರಣ ಗುಂದಗಿ ಹಾಗೂ ಸದಸ್ಯರುಗಳು ಶ್ರೀ. ಶಂಕ್ರೇಪ್ಪ ಮಾವುರ ಶ್ರೀ ಅಮೋಗಿ ಬಳೂಂಡಗಿ ಶ್ರೀ ಶ್ರೀ. ಶೌಕತಲಿ ಸುಂಬಡ ಶ್ರೀ. ಶಿವಾನಂದ ಪಿರಶೇಟ್ಟಿ ಶ್ರೀ. ಬಂದೆನವಾಜ ಕಣ್ಣಿ ಶ್ರೀ. ಸಂತೋಷ ಮೆಲಿನಮನಿ ಶ್ರೀ.

ಗೌರಿಶಂಕರ್ ತೊಡಕರ ಮತ್ತು ನಿಂಗಪ್ಪ ಬಿರಾದಾರ ಪ್ರಶಾಂತ ನಾಶಿ ನಾಗಪ್ಪ ಬಿರಾದಾರ್ ಮಲ್ಕಮ್ಮ ರೋಡಗಿ ದಾದಾಗೌಡ ಪಾಟೀಲ್ ಭೋಗೇಶ್ ಕಡಣಿ ಸಿದ್ದು ಅಪಜಲಪುರ, ಪೀರಪ್ಪ ಖಜೂರಗಿ ಶ್ರೀಶೈಲ್ ಪೂಜಾರಿ, ಗುತ್ತಿಗೆದಾರರು ಹಾಗೂ ಎಪಿಎಂಸಿಯ ಕಾರ್ಯದರ್ಶಿ ಬಸವರಾಜ್ ಹಾಗೂ ಸಿಬ್ಬಂದಿ ವರ್ಗ ಆಲಮೇಲ ಪಟ್ಟಣದ ಗಣ್ಯ ವ್ಯಾಪಾರಸ್ಥರು, ಮುಖಂಡರು, ವಿವಿಧ ಇಲಾಖೆಯ ನಾಮ ನಿರ್ದೇಶನ ಸದಸ್ಯರು, ಸೇರಿದಂತೆ ಸ್ಥಳೀಯರು ಹಾಗೂ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ ಜಿ ಹಿರೇಮಠ ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button