ನಿರ್ಗತಿಕ ಮನೆ ರಚನೆ ಕಾಮಗಾರಿಗೆ ತಾಲೂಕ ಯೋಜನಾಧಿಕಾರಿ – ಸಂತೋಷ ರವರಿಂದ ಭೂಮಿ ಪೂಜೆ.
ನಾಗೂರು ಡಿ.27

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮೀಣ ಪ್ರದೇಶಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪರಮ ಪೂಜ್ಯ ಡಾ, ಡಿ.ವೀರೇಂದ್ರ ಹೆಗ್ಗಡೆಯವರು ಹಾಕಿ ಕೊಂಡ ಅನೇಕ ಕಾರ್ಯಕ್ರಮಗಳಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ವಾತ್ಸಲ್ಯ ಮನೆ ನಿರ್ಮಾಣ ಕೂಡ ಒಂದು ಕಾರ್ಯಕ್ರಮವಾಗಿದ್ದು.
ನಾಗುರು ಗ್ರಾಮದ ಕಡು ಬಡವರು ಹಾಗೂ ನಿರ್ಗತಿಕರಾದನೀಲಮ್ಮ ಸಿಂಗಾಡಿ ಅವರ ಮನೆ ಸಂಪೂರ್ಣ ಬಿದ್ದು ಹೋಗಿರುವುದನ್ನ ಗಮನಿಸಿ ಅವರಿಗೆ ಹೊಸ ಮನೆ ನಿರ್ಮಾಣ ಮಾಡಿ ಕೊಡುವ ಉದ್ದೇಶದಿಂದ ಭೂಮಿ ಪೂಜೆಯನ್ನು ತಾಲೂಕಿನ ಯೋಜನಾಧಿಕಾರಿಗಳಾದ ಸಂತೋಷ ರವರು & ಊರಿನ ಗಣ್ಯರು ಭೂಮಿ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಗಣ್ಯ ವ್ಯಕ್ತಿಗಳಾದ ಸಂಗಪ್ಪ ಹೊಸೂರು ಬಸವರಾಜ್ ನರಗುಂದ ಅಮರಗೌಡ ಪಾಟೀಲ್ ಬಸಟ್ಟೇಪ್ಪ ಶಿಂಗಾಡಿ ಶೌರ್ಯ ಘಟಕದ ಅಧ್ಯಕ್ಷರಾದ ಈರಣ್ಣ ಬಡಿಗೇರ್ ಸೇವಾ ಪ್ರತಿ ನಿಧಿಯಾದ ಮಂಜುಳಾ ಗುಣಕಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸುಮಂಗಲಾ ವಲಯದ ಮೇಲ್ವಿಚಾರಕರಾದ ಅರುಣಕುಮಾರ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
