ವಿಶ್ವ ದರ್ಶನ ಪತ್ರಿಕೆಯ 6 ನೇ. ರಾಜ್ಯ – ಭಾವೈಕ್ಯತೆಯ ಸಮ್ಮೇಳನ.
ದಾವಣಗೆರೆ ಡಿ.28

ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕಿನಲ್ಲಿ 27 ಡಿಸೆಂಬರ್ 2025 ರಂದು ಶನಿವಾರ ನಡೆದ ವಿಶ್ವ ದರ್ಶನ ಪತ್ರಿಕೆಯ 2026 ನೇ. ವರ್ಷದ ಕ್ಯಾಲೆಂಡರ್ ಬಿಡುಗಡೆ ಮತ್ತು ಭಾವೈಕ್ಯತೆಯ ಸಮಾರಂಭದಲ್ಲಿ ಕರ್ನಾಟಕ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ರವರಿಗೆ ಕರ್ನಾಟಕ ಪತ್ರಿಕಾ ರಂಗದ ಉನ್ನತ ಪ್ರಶಸ್ತಿಯಾದ ಹರ್ಮನ್ ಫೆಡ್ರಿಕ್ ಮೋಗ್ಲಿಂಗ್ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಡಾ, ಎಸ್.ಎಸ್ ಪಾಟೇಕರ್ ರವರು ಸಾನಿಧ್ಯದಲ್ಲಿ ಹುಬ್ಬಳ್ಳಿಯಿಂದ ಪ್ರಕಟಿತವಾಗುವ ವಿಶ್ವ ದರ್ಶನ್ ಹಾಗೂ ಕರ್ನಾಟಕ ಪ್ರಜಾ ದರ್ಶನ್ ಪತ್ರಿಕೆಯ ಸಂಪಾದಕರು ಹಾಗೂ ಮಠಾಧೀಶರು ಹರ ಗುರು ಶರಣರು ಸೂಫಿ ಸಂತರು ಹಾಗೂ ಹೆಸರಾದಂತಹ ನ್ಯಾಯಾಧೀಶರು ಇವರೆಲ್ಲರ ಸಮ್ಮುಖದಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ 2025 -26 ನೇ. ಸಾಲಿನಲ್ಲಿ ವಿವಿಧ ಸೇವೆಯಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ರಾಷ್ಟ್ರೀಯ ಪ್ರಶಸ್ತಿ ಪತ್ರ ನೀಡುವ ಸಂದರ್ಭದಲ್ಲಿ ಕೊಟ್ಟೂರಿನ ಪತ್ರಕರ್ತರಾದ ಕಾನಿಪ ಧ್ವನಿ ಸಂಘಟನೆಯ ಹೆಚ್ ಮಾರೇಶ್ ಕನ್ನಕಟ್ಟಿ ಶಿವರಾಜ್ ಬಿ ಮಾರುತಿ ಮೋರಗೆರೆ ಮಂಜುನಾಥ್ ಅಂಬಳಿ ರಮೇಶ್ ವಿಶ್ವ ದರ್ಶನ ಪತ್ರಿಕೆಯ ಸಂಪಾದಕರಾದ ಎಸ್ ಎಸ್ ಪಾಟೀಲ್ ರವರು ನಡೆಸಿದ ಸಮ್ಮೇಳನದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್ ಕುಮಾರ್ ಸಿ ಕೊಟ್ಟೂರು

