ನೂರಕ್ಕೂ ಹೆಚ್ಚು ಶಾಲಾ ಮಕ್ಕಳಿಗೆ ಫ್ರೀ ಯಾಗಿ (ಉಚಿತವಾಗಿ) ಕ್ಷೌರ ಸೇವೆ – ಸುಗೂರ.ಎನ್.
ಸುಗೂರ.ಎನ್ ಡಿ.30

ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ನಿಸ್ವಾರ್ಥ ಸಮಾಜದ ಸೇವಕ ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸಂಘಟನಾ ಕಾರ್ಯದರ್ಶಿಗಳು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರ ನೇತೃತ್ವದಲ್ಲಿ ಇದೆ ಜನೇವರಿ 3 ರಂದು ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ಸುಪುತ್ರರಾದ ಕಿರಿಯ ಪೀಠಾದಿಪತಿಗಳಾದ ಪರಮ ಪೂಜ್ಯ ಶ್ರೀ ಅಭಿನವ ಡಾ, ಕುಮಾರ ಭೋಜರಾಜನ 30 ನೇ. ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ ನಾಲ್ಕು ವರ್ಷಗಳಿಂದ ಸತತವಾಗಿ ಶ್ರೀ ಭೋಜಲಿಂಗೇಶ್ವರ ವಿದ್ಯಾ ವರ್ಧಕ ಶಿಕ್ಷಣ ಸಂಸ್ಥೆಯ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಾಲೆ ಮಕ್ಕಳಿಗೆ ಪೂಜ್ಯರ ಜನ್ಮ ದಿನದ ಅಂಗವಾಗಿ ವಿಶೇಷವಾಗಿ ಫ್ರೀ ಯಾಗಿ ಉಚಿತ ಕ್ಷೌರ ಸೇವೆ ಸಲ್ಲಿಸಲಾಗುತ್ತದೆ.

ಈ ಸಂಧರ್ಭದಲ್ಲಿ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಹಿರಿಯರು, ಯುವಕ ಮಿತ್ರರು ಮತ್ತು ಕಾಯಕ ಬಂಧುಗಳು ಸೇರುವ ಸಾಧ್ಯತೆ ಇದೆ. ಶ್ರೀಮಠದ ಆವರಣದಲ್ಲಿ ಶಾಲಾ ಮಕ್ಕಳಿಗೆ ಪೂಜ್ಯರ ಜನ್ಮ ದಿನದಂದು ಫ್ರೀಯಾಗಿ ಸೇವೆ ಸಲ್ಲಿಸಲಾಗುವುದು ಎಂದು ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಒಟ್ಟು 15 ಕಡೆಯಲ್ಲೂ ವಿವಿಧ ಕಡೆಯಲ್ಲಿ ಉಚಿತ ಕ್ಷೌರ ಸೇವೆ ಸಲ್ಲಿಸಿ ಒಟ್ಟು 1665 ಕ್ಕೂ ಹೆಚ್ಚು ನಿರ್ಗತಿಕರ ಕೇಂದ್ರದಲ್ಲಿ ಈ ಬಾರಿ 15 ಕಡೆ ಸೇರಿದಂತೆ ಸಾವಿರಾರು ನಿರ್ಗತಿಕರಿಗೆ.ಅನಾಥರಿಗೆ . ಅಂಧರಿಗೆ. ಈ ರೀತಿಯ ವಿಭಿನ್ನವಾಗಿ ಉಚಿತ ಕ್ಷೌರ ಸೇವೆ ಮಾಡುವ ಮೂಲಕ ದೇವರ ಸೃಷ್ಟಿ ಮಾನವ. ಕ್ಷೌರಿಕರ ಸೃಷ್ಟಿ ಸುಂದರ ಮಾನವ ಕಾಯಕದ ಜೊತೆಗೆ ಉಚಿತ ಕ್ಷೌರ ಸೇವೆ ಸಲ್ಲಿಸುತ್ತಿರುವ ಈ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಸೇವಕ ಈ ರೀತಿ ಪೂಜ್ಯರ ಹುಟ್ಟು ಹಬ್ಬವನ್ನು ವಿಶೇಷವಾಗಿ ಸೇವೆ ಸಲ್ಲಿಸಲಾಗುತ್ತದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಪತ್ರಿಕೆಯ ಮೂಲಕ ತಿಳಿಸಿದರು

