“ಜಗದ ನಿಜ ಸಿರಿ ಶ್ರೀಸಿದ್ಧೇಶ್ವರ ಗುರೂಜೀ”…..

ಶ್ರೀಗಳ ಪ್ರವಚನ ನುಡಿ ನುಡಿಗಳಲ್ಲಿ ಸವಿ
ಜೇನು ಬೆರಸಿದವರು
ನಡೆಯಲಿ ಸರಳತೆಯ ಕಲಿಸಿದವರು
ಪ್ರಕೃತಿಯ ಸ್ನೇಹತನವ ರೂಢಿಸಿದವರು
ಸರ್ವ ಜೀವಸಂಕುಲ ಜೋತೆ ಬಾಳುವ ರೀತಿ
ಕಲಿಸಿದವರು
ಅಹಂಕಾರ ಮರೆಸಿ ಮಮಕಾರ ಬೆರಸಿ
ಸಮರಸ ಸವಿ ನಿತ್ಯ ನಗುವ ಕಲೆ ಚಿತ್ರಿಸಿದವರು
ದೇವನೀಡಿದ ಜಗದ ಸಿರಿಯ ಋಣವ ನೆನೆವ
ರೀತಿ ನೆನಪಿಸಿದವರು
ಸರಳ ಸ್ವಚ್ಛ ಸುಂದರ ಕ್ಷಣಗಳ ಸವಿಯಲು
ತಿಳಿಸಿದವರು
ಐಶ್ವರ್ಯ ಇದ್ದರೂ ಇಲ್ಲದವರೂ
ಶೂನ್ಯದೊಳಗೆ ಶೂನ್ಯರು
ಪ್ರತಿ ಕಣವ ಆಧ್ಯಾತ್ಮಿಕ ರೂಪ ನೀಡಿದವರು
ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನ ಆಲಿಸಲು
ನಾವೆಲ್ಲಾ ಧನ್ಯರು.
ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ದೇವರ ಹಿಪ್ಪರಗಿ

